ಪದ್ಮಶ್ರೀ, ಪಂಪ, ಕರ್ನಾಟಕ ರತ್ನ ದೇಜಗೌ ಕಣ್ಮರೆ
ಮೈಸೂರು, ಮೇ 30: ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತ್ರಿ ಪುರಸ್ಕೃತ ಲೇಖಕ ದೇ. ಜವರೇಗೌಡ(ದೇಜಗೌ) ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ಬಹುಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
1918ರ
ಜುಲೈ
8ರಂದು
ಈಗಿನ
ರಾಮನಗರ
ಜಿಲ್ಲೆಯ
ಚನ್ನಪಟ್ಟಣ
ತಾಲೂಕಿನ
ಚಕ್ಕರೆಯಲ್ಲಿ
ದೇವೇಗೌಡ-ಚನ್ನಮ್ಮ
ದಂಪತಿಗಳ
ಮಗನಾಗಿ
ಜನಿಸಿದ
ದೇಜಗೌ
ಅವರ
ವಿದ್ಯಾಭ್ಯಾಸದ
ಆಸಕ್ತಿ
ಅವರನ್ನು
ಬೆಂಗಳೂರಿಗೆ
ಕರೆ
ತಂದಿತು.
ರಾಷ್ಟ್ರಕವಿ
ಕುವೆಂಪು
ಅವರ
ವಿಚಾರಧಾರೆಗಳಿಂದ
ಪ್ರಭಾವಿತರಾಗಿ
ಮೈಸೂರು
ವಿವಿಯಲ್ಲಿ
ಕನ್ನಡದಲ್ಲಿ
ಎಂ.ಎ
ಪದವಿ
ಪಡೆದರು.
ಮೈಸೂರು ವಿಶ್ವವಿದ್ಯಾಲಯದಲ್ಲೇ ಅಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಪರೀಕ್ಷೆ ನಿಯಂತ್ರಣಾಧಿಕಾರಿ, ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ, ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. 1969ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದರು.[ವಿವಿಗಳ ಹೆಸರಿಡಲು ಜಾತಿ ಬಳಕೆ ಸಲ್ಲ: ದೇಜಗೌ]
ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 135ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಕೃತಿಯನ್ನು 'ಯುದ್ದ ಮತ್ತು ಶಾಂತಿ' ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ್ದಾರೆ.
ಕುವೆಂಪು ಅವರ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ದೇಜಗೌ ಅವರು ಸ್ಥಾಪಿಸಿದ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಸಂಸ್ಥೆ. ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲ ಇವರಿಗಿತ್ತು. ದೇಜಗೌ ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪದ್ಮಶ್ರೀ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿ ಪುರಸ್ಕಾರಗಳು ದೇಜಗೌ ಅವರಿಗೆ ಸಂದಿದೆ. ದೇಜಗೌ ಅವರ ನಿಧನಕ್ಕೆ ಅನೇಕ ಗಣ್ಯರು, ಕನ್ನಡಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೇಸರಿ ಹರವೂ ನಿರ್ದೇಶನದಲ್ಲಿ ದೇಜಗೌ ಕುರಿತಂತೆ ಸಾಕ್ಷ್ಯಚಿತ್ರ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ.