ಕೆರಿಬಿಯನ್ ದ್ವೀಪಗಳಲ್ಲಿ 14 ಜನರ ಬಲಿ ಪಡೆದ ಶತಮಾನದ ಭೀಕರ ಚಂಡಮಾರುತ
ಫ್ಲೋರಿಡಾ, ಸೆಪ್ಟೆಂಬರ್ 8: ಅಟ್ಲಾಂಟಿಕ್ ಮಹಾ ಸಾಗರದಲ್ಲೆದ್ದ ಶತಮಾನದ ಪ್ರಬಲ ಚಂಡಮಾರುತ ಇರ್ಮಾ ಹೊಡೆತಕ್ಕೆ ಕೆರಿಬಿಯನ್ ದ್ವೀಪಗಳು ತರಗೆಲೆಯಂತಾಗಿವೆ. ಇಲ್ಲಿಯವೆರೆಗೆ 14 ಜನರು ಪ್ರಬಲ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.
ಗಂಟೆಗೆ 290 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದ ಇರ್ಮಾ ಚಂಡಮಾರುತದ ಹೊಡೆತಕ್ಕೆ ಕೆರಿಬಿಯನ್ ದ್ವೀಪಗಳಾದ ಟರ್ಕಸ್, ಕಾಯ್ಕೋಸ್, ಬರ್ಬುಟಾ, ಸೈಂಟ್ ಮಾರ್ಟಿನ್, ಬ್ರಿಟಿಷ್ ಮತ್ತು ಅಮೆರಿಕಾ ವರ್ಜಿನ್ ದ್ವೀಪಗಳು ಅಕ್ಷರಶಃ ತರಗೆಲೆಯಾಗಿವೆ. ಇಲ್ಲಿನ ಮನೆಗಳ ಸೂರು ಪೂರ್ತಿ ಹಾರಿ ಹೋಗಿದ್ದು, ಕಂಬಗಳು, ಮರಗಳು, ಬೋಟ್ ಸೇರಿದಂತೆ ಎಲ್ಲವೂ ನಾಶವಾಗಿವೆ. ಅಪಾರ ಹಾನಿಯ ಜತೆಗೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು ಬಟಾಬಯಲಿನಲ್ಲಿ ದಿನಕಳೆಯುವಂತಾಗಿದೆ.

ಶುಕ್ರವಾರದ ವೇಳೆಗೆ ಚಂಡಮಾರುತದ ವೇಗ ಗಂಟೆಗೆ 241 ಕಿಲೋಮೀಟರ್ ಗೆ ಇಳಿದಿದ್ದು ಕ್ಯೂಬಾ ಮತ್ತು ಬಹಾಮಸ್ ದ್ವೀಪಗಳ ಮಧ್ಯೆ ಹಾದು ಅಮೆರಿಕಾದ ರಾಜ್ಯ ಫ್ಲೋರಿಡಾದತ್ತ ಧಾವಿಸಿದೆ. ಶನಿವಾರ ಸಂಜೆ ವೇಳೆಗೆ ಚಂಡ ಮಾರುತದ ಆರಂಭಿಕ ಹಂತಗಳು ಫ್ಲೋರಿಡಾ ತಲುಪಲಿದ್ದು ಭಾನುವಾರ ಪೂರ್ಣಪ್ರಮಾಣದ ಚಂಡಮಾರುತ ಫ್ಲೋರಿಡಾಗೆ ಅಪ್ಪಳಿಸಲಿದೆ ಎಂದು ಅಂದಾಜು ಮಾಡಲಾಗಿದೆ.

ಚಂಡಮಾರುತ ಇರ್ಮಾ ಹಿನ್ನಲೆಯಲ್ಲಿ ಫ್ಲೋರಿಡಾದಲ್ಲಿ 1 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸದ್ಯ ಚಂಡಮಾರುತ ಅಮೆರಿಕಾದ ಫ್ಲೋರಿಡಾ ರಾಜ್ಯದತ್ತ ಹೊರಳಿದೆ ಅಷ್ಟೆ. ಮುಂದೆ ಇಲ್ಲಿ ಯಾವ್ಯಾವ ಅನಾಹುತಗಳನ್ನು ಸೃಷ್ಟಿಸಲಿದೆಯೋ ಗೊತ್ತಿಲ್ಲ.
ಕಾದಿದೆ ಮತ್ತೊಂದು ಚಂಡಮಾರುತ
ಇರ್ಮಾದ ಕತೆ ಹೀಗಾದರೆ ಸದ್ಯ ಇನ್ನೊಂದು ಚಂಡಮಾರುತ ಜೋಸ್ ಕೂಡ ಧಾವಿಸುತ್ತಿದೆ. ಚಂಡಮಾರುಗಳ ಪರಿಭಾಷೆಯಲ್ಲಿ ಇದು ಕೆಟಗರಿ 3ರ ತೀವ್ರತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಯೂ ಇದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications