Get Updates
Get notified of breaking news, exclusive insights, and must-see stories!

ಬಾಣಲೆಯಿಂದ ಬೆಂಕಿಗೆ, ಟಿಟಿವಿ ದಿನಕರನ್ ಮೇಲೆ ಮತ್ತೊಂದು ಕೇಸ್

ಸೋಮವಾರವಷ್ಟೇ ದೆಹಲಿ ನ್ಯಾಯಾಲಯ ಟಿಟಿವಿ ದಿನಕರನ್ ಮತ್ತು ಅವರ ಆಪ್ತ ಮಲ್ಲಿಕಾರ್ಜುನ್ ರನ್ನು ತಿಹಾರ್ ಜೈಲಿಗಟ್ಟಿತ್ತು. ಮತ್ತು ಮೇ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನವದೆಹಲಿ, ಮೇ 2: ಟಿಟಿವಿ ದಿನಕರನ್ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಅವರ ಮೇಲೆ ಮಂಗಳವಾರ ಜಾರಿ ನಿರ್ದೇಶನಾಲಯ ಮತ್ತೊಂದು ಕೇಸ್ ಜಡಿದಿದೆ. ಲೇವಾದೇವಿ ಕಾಯ್ದೆಯಡಿಯಲ್ಲಿ ದಿನಕರನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಎಐಎಡಿಎಂಕೆಯ ಎರಡೆಲೆ ಗುರುತು ಪಡೆದುಕೊಳ್ಳಲು ಟಿಟಿವಿ ದಿನಕರನ್ ಚುನಾವಣಾ ಆಯೋಗಕ್ಕೆ 50 ಕೋಟಿ ಲಂಚ ನೀಡಲು ಹೋಗಿ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣದ ತನಿಖೆಯನ್ನು ದೆಹಲಿ ಕ್ರೈ ಬ್ರಾಂಚ್ ಪೊಲೀಸರು ನಡೆಸುತ್ತಿರುವಾಗಲೇ ಇದೀಗ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿದೆ.[ಸತತ ವಿಚಾರಣೆಯಿಂದ ಹೈರಾಣಾದರೇ ದಿನಕರನ್?]

Troubles mount for TTV Dinakaran, now ED files case

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಶಶಿಕಲಾ ನಟರಾಜನ್ ಸಂಬಂಧಿ ಟಿಟಿವಿ ದಿನಕರನ್ ಪಾಲಿಗೆ ಇದು ಮತ್ತೊಂದು ಸಂಕಷ್ಟವನ್ನು ತಂದೊಡ್ಡಲಿದೆ. ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಜತೆ ಸೇರಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.[ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ಶಶಿಕಲಾ ಫೊಟೋಗೂ ಜಾಗವಿಲ್ಲ!]

ಸೋಮವಾರವಷ್ಟೇ ದೆಹಲಿ ನ್ಯಾಯಾಲಯ ಟಿಟಿವಿ ದಿನಕರನ್ ಮತ್ತು ಅವರ ಆಪ್ತ ಮಲ್ಲಿಕಾರ್ಜುನ್ ರನ್ನು ತಿಹಾರ್ ಜೈಲಿಗಟ್ಟಿತ್ತು. ಮತ್ತು ಮೇ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಇಡಿಯೂ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಉಭಯ ಆರೋಪಿಗಳಿಗೆ ಮತ್ತಷ್ಟು ಹಿನ್ನಡೆಯಾಗಿದೆ. (ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+