ಒಡವೆ ಮಾರಿ ಶಾಲೆಗೆ ಅಂತರಾಷ್ಟ್ರೀಯ ಟಚ್ ನೀಡಿದ ಶಿಕ್ಷಕಿ
ತನ್ನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ದರ್ಜೆಯ ಶಿಕ್ಷಣ ನೀಡಬೇಕು ಎಂಬ ಮಹದಾಸೆಯಿಂದ ವಿಲ್ಲುಪುರಂನಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿರುವ ಅನ್ನಪೂರ್ಣ ತನ್ನ ಒಡವೆಯನ್ನೇ ಮಾರಿದ್ದಾರೆ.
ಚೆನ್ನೈ, ಏಪ್ರಿಲ್ 24: ಸರಕಾರಿ ಶಾಲೆಗಳು ಸವಲತ್ತುಗಳಿಂದ ಸೊರಗುತ್ತಿರುತ್ತವೆ. ಇಂಥಹ ಶಾಲೆಗಳಲ್ಲೂ ಸರಕಾರದ ಹಣ ವಂಚನೆ ಮಾಡಿದ ಶಿಕ್ಷಕರ ವರದಿಗಳನ್ನು ನೋಡುತ್ತಿರುತ್ತೇವೆ. ಆದರೆ ತಮಿಳುನಾಡಿನ ಶಿಕ್ಷಕಿ ಅನ್ನಪೂರ್ಣ ಮೋಹನ್ ಹಾಗಲ್ಲ.
ತನ್ನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ದರ್ಜೆಯ ಶಿಕ್ಷಣ ನೀಡಬೇಕು ಎಂಬ ಮಹದಾಸೆಯಿಂದ ಅನ್ನಪೂರ್ಣ ತನ್ನ ಒಡವೆಯನ್ನೇ ಮಾರಿದ್ದಾರೆ. ವಿಲ್ಲುಪುರಂನಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿರುವ ಈಕೆ ತನ್ನ ಆಭರಣ ಮಾರಿ ಆ ಹಣದಲ್ಲಿ ಶಾಲೆಯ ಕೊಠಡಿ ನವೀಕರಣದ ಜತೆಗೆ ಶಿಕ್ಷಣಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ.[ಜಯಲಲಿತಾಗೆ ಸೇರಿದ ಟೀ ಎಸ್ಟೇಟ್ ನಲ್ಲಿ ಕೊಲೆ!]

ಇದೀಗ ಇಲ್ಲಿನ ಮೂರನೇ ತರಗತಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ದರ್ಜೆಯ ಇಂಟೆರಾಕ್ಟಿವ್ ಸ್ಮಾರ್ಟ್ ಬೋರ್ಡ್ ಗಳ ಮೂಲಕ ಪಾಠ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಪುಸ್ತಕಗಳನ್ನು ಪೀಠೋಪಕರಣಗಳನ್ನು ಈಕೆ ಖರೀದಿಸಿದ್ದಾರೆ.
ಅನ್ನಪೂರ್ಣ ಮೋಹನ್ ಅವರ ಈ ಕೆಲಸ ವಿದ್ಯಾರ್ಥಿಗಳು ಮತ್ತು ಪೋಷಕರ ಮನ ಗೆದ್ದಿದ್ದು ಮಾತ್ರವಲ್ಲ ಆಕೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಹಲವರು ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.
ಶಾಲೆಗೆ ಬೇಕಾದ ವಸ್ತುಗಳನ್ನು ಮಾತ್ರ ಈಕೆ ತೆಗೆದುಕೊಟ್ಟಿಲ್ಲ. ವಿದ್ಯಾರ್ಥಿಗಳು ಉತ್ತಮವಾಗಿ ಇಂಗ್ಲೀಷ್ ಭಾಷೆ ಮಾತಾಡುವಂತಾಗಬೇಕು ಎಂದು ದಿನ ನಿತ್ಯ ಇಂಗ್ಲೀಷ್ ಸ್ಪೀಕಿಂಗ್ ತರಗತಿಗಳನ್ನು ನಡೆಸುತ್ತಿದ್ದಾರೆ.
ಸ್ಪೀಕಿಂಗ್ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳುವ ಮುನ್ನ ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ಶಾಲೆಯ ಮಕ್ಕಳಿಂದ ಇಂಗ್ಲೀಷ್ ಭಾಷೆಯ ಕಲಿಕೆಯಲ್ಲಿ ಹಿಂದೆ ಉಳಿದಿದ್ದರು. ಇದೀಗ ಅವರ ಜತೆಗೇ ಸ್ಪರ್ಧೆಗೆ ಇಳಿದಿದ್ದಾರೆ.
ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲೀಷ್ ಭಾಷೆ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಹಲವರು ಉದ್ಯೋಗದಿಂದ ವಂಚಿತರಾಗುತ್ತಾರೆ. ಇದನ್ನು ಮನಗಂಡು ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅನ್ನಪೂರ್ಣ.
"ನನ್ನ ಇಂಗ್ಲೀಷ್ ತರಗತಿಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ನಾನು ಪ್ರಯತ್ನಪಟ್ಟಿದ್ದೇನೆ. ನನ್ನ ವಿದ್ಯಾರ್ಥಿಗಳಿಗೆ ತರಗತಿಯ ಆರಂಭದಿಂದಲೂ ಇಂಗ್ಲೀಷ್ ಕಲಿಸುತ್ತಾ ಬಂದಿದ್ದೇನೆ. ಆರಂಭದಲ್ಲಿ ಇಂಗ್ಲೀಷ್ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ," ಎನ್ನುತ್ತಾರೆ ಅನ್ನಪೂರ್ಣ. [ಶಾಲೆಗಾಗಿ ಚಿನ್ನದ ಬಳೆ ದಾನ ಮಾಡಿದ ಏಳನೇ ತರಗತಿ ಬಾಲಕಿ]
ತನ್ನ ತರಗತಿಗಳು ಉತ್ಸಾಹ ಭರಿತವಾಗಿರಬೇಕು ಎಂಬ ಕಾರಣಕ್ಕೆ ಆಕೆ ಪ್ರತೀ ಪಠ್ಯವನ್ನೂ ವಿದ್ಯಾರ್ಥಿಗಳಿಂದ ಸ್ಕಿಟ್ ರೂಪದಲ್ಲಿ ಹೊರ ತರುತ್ತಾರೆ. ಈ ಸ್ಕಿಟ್ ಗಳನ್ನು ವಿಡಿಯೋ ಮಾಡಿ ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಅವರ ಗೆಳೆಯರೆಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ನಾನು ಸ್ಕಿಟ್ ಗಳನ್ನು ವಿಡಿಯೋ ಮಾಡಿ ಫೇಸ್ಬುಕ್ ಗೆ ಹಾಕಿದ್ದೆ. ಇದನ್ನು ನೋಡಿ ವಿದ್ಯಾರ್ಥಿಗೆ ಯಾರೋ ಒಬ್ಬರು 10 ರೂಪಾಯಿ ಮನಿ ಯಾರ್ಡರ್ ಕಳುಹಿಸಿದರು. ಇದನ್ನು ನೋಡಿ ವಿದ್ಯಾರ್ಥಿ ಪುಳಕಿತನಾದ. ಮುಂದಿನ ಸ್ಕಿಟ್ ಗಳಲ್ಲಿ ಆತನ ಮತ್ತಷ್ಟು ಉತ್ಸಾಹದಿಂದ ನಟಿಸಲು ಆರಂಭಿಸಿದ," ಎನ್ನುತ್ತಾರೆ ಅನ್ನಪೂರ್ಣ.
ಹೀಗೆ ಅನ್ನಪೂರ್ಣ ತನ್ನ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಆಕೆಯ ನಡೆ ಉಳಿದವರಿಗೂ ಪ್ರೇರಣೆಯಾಗುವ ಜತೆಗೆ ಸರಕಾರ ಇಂಥಹವರನ್ನು ಗುರುತಿಸಬೇಕಾಗಿದೆ. ಆಗ ಹೆಚ್ಚು ಹೆಚ್ಚು ಶಿಕ್ಷಕರು ಇಂಥಹ ಕೆಲಸದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ.
ಏನೇ ಆಗಲಿ ನಮ್ಮ ಕಡೆಯಿಂದ ಮಾದರಿ ಶಿಕ್ಷಕಿ ಅನ್ನಪೂರ್ಣ ಮೋಹನ್ ಅವರಿಗೊಂದು ಸಲಾಂ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications