ಕಾವೇರಿ ನೀರು ಬಿಡದಿರುವ ಬಗ್ಗೆ ಸೆ. 23ರಂದು ಅಧಿಕೃತ ಪ್ರಕಟಣೆ
ಬೆಂಗಳೂರು, ಸೆ. 22: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ. ತಮಿಳುನಾಡಿಗೆ ನೀರು ಬಿಡುವ ಅಗತ್ಯವಿಲ್ಲ ಎಂಬ ಒಮ್ಮತದ ನಿರ್ಧಾರವನ್ನು ವಿಶೇಷ ಅಧಿವೇಶನದ ನಂತರ ಪ್ರಕಟಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.[ಬಿಜೆಪಿ ನಾಯಕರೇ ನೀವಿಟ್ಟ ಹೆಜ್ಜೆ ತಪ್ಪು!]
ರಾಜ್ಯಪಾಲರಾದ
ವಜುಭಾಯಿವಾಲಾ
ಅವರನ್ನು
ರಾಜಭವನದಲ್ಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಇಂದು
ಭೇಟಿ
ಮಾಡಿದರು.
ಕಾವೇರಿ
ನದಿ
ನೀರು
ವಿವಾದ
ಮತ್ತು
ಶುಕ್ರವಾರ
ವಿಧಾನ
ಮಂಡಲ
ಅಧಿವೇಶನ
ಕರೆದಿರುವ
ಕುರಿತು
ಚರ್ಚೆ
ನಡೆಸಿದರು.
ಸಚಿವರಾದ
ಮಹದೇವಪ್ಪ,
ಮಹದೇವಪ್ರಸಾದ್,
ಜಯಚಂದ್ರ
ಮತ್ತಿತರರು
ಇದ್ದರು.[ಕಾವೇರಿ
ನಿರ್ವಹಣಾ
ಮಂಡಳಿ
ರಚನೆಯಾದ್ರೆ,
ಏನಾಗುತ್ತೆ?]
ಸೆಪ್ಟೆಂಬರ್ 23ರಂದು ವಿಶೇಷ ಅಧಿವೇಶನ ಕರೆಯುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲರನ್ನು ಗುರುವಾರ ಬೆಳಗ್ಗೆ ಭೇಟಿ ಮಾಡಿದರು. ಸೆ.23ರ ಅಧಿವೇಶನ ಮುಗಿಯುವ ತನಕ ಕಾವೇರಿ ನೀರು ಹರಿಸದಿರಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.[ಬಂಗಾರಪ್ಪ ಬಗ್ಗೆ ಮಾತನಾಡ್ತೀರಿ, 1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ']
ನಂತರ ಮಾಜಿ ಮುಖ್ಯಮಂತ್ರಿ ಎಸ್ಸೆಂಕೃಷ್ಣರನ್ನು ಭೇಟಿ ಮಾಡಿ ಅವರ ಸಲಹೆ ಪಡೆದುಕೊಂಡರು. ಮಧ್ಯಾಹ್ನದ ನಂತರ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಅವರು ಎಐಸಿಸಿ ಮುಖಂಡರನ್ನು ಭೇಟಿ ಮಾಡಿ, ಕರ್ನಾಟಕದ ನಿಲುವನ್ನು ತಿಳಿಸಲಿದ್ದಾರೆ.[ಕಾವೇರಿಗಾಗಿ ಕೋಪ ಮರೆತು ಗೌಡ್ರ ಮನೆಗೆ ಬಂದ ಸಿದ್ದರಾಮಯ್ಯ]
ಈ ನಡುವೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಮುಂದುವರೆಸಲಾಗಿದೆ. ಬೆಂಗಳೂರಿನಲ್ಲಿ ಮದ್ಯ ರಹಿತ ದಿನಗಳು ಸೆಪ್ಟೆಂಬರ್ 22 ರಿಂದ 25ರ ತನಕ ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.