'ನಾವೆಲ್ಲ ಸೇರಿ ಝೊಮ್ಯಾಟೊ ಡೆಲಿವರಿ ಬಾಯ್ ನ ಅನ್ನ ಕಿತ್ಕೊಬಾರ್ದಿತ್ತು'
ಝೊಮ್ಯಾಟೊ ಡೆಲಿವರಿ ಬಾಯ್ ವೊಬ್ಬರ ವಿಡಿಯೋ ವೈರಲ್ ಹಾಗೂ ಆ ನಂತರದ ಬೆಳವಣಿಗೆ ಬಗ್ಗೆ ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಪ್ರಕಟಿಸಲಾಗುತ್ತಿದೆ. ಇದು ಲೇಖಕರ ಅಭಿಪ್ರಾಯವೇ ಹೊರತು ಇದಕ್ಕೆ ಒನ್ ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ- ಸಂಪಾದಕ
***
ನಿನ್ನೆ ಒಬ್ರು Zomato ಡೆಲಿವರಿಯವರು ಅವರ ಪಾರ್ಸೆಲ್ ನಿಂದ ಊಟ ಕದ್ದು ತಿಂದರು ಎಂದು ಬಂದಿರೋ ವಿಡಿಯೋನ Social networkನಲ್ಲಿ ಜನ ಶೇರ್ ಮಾಡಿದ್ದೇ ಮಾಡಿದ್ದು. ಅಷ್ಟಕ್ಕೂ ಆ ವ್ಯಕ್ತಿಯೇ ಸ್ಪಷ್ಟನೆ ಕೊಟ್ಟಿದ್ದಾರೆ: ನಾನು ತಿಂದಿರೊ ಊಟ ಅದು ಕಸ್ಟಮರ್ cancel ಮಾಡಿದ ಐಟಮ್. ಆಗ ನಂಗೆ ಬೇರೆ ಒಂದು ಆರ್ಡರ್ ಬಂತು. ಹಾಗಾಗಿ ತಿಂದು ನಾನದನ್ನು ಅಲ್ಲೇ ಇಟ್ಟೆ ಎಂದು.
ನನ್ನಲ್ಲಿ ನಿನ್ನೆಯಿಂದ ಈ ವಿಷಯದಲ್ಲಿ ಅವ ತಪ್ಪೇ ಮಾಡಿದ್ದಾನೆ ಎಂದು ವಾದ ಮಾಡಿದವರಿಗೆ ಒಂದು ಸ್ಪಷ್ಟನೆ. Online food ಪ್ಯಾಕೆಟ್ ಪ್ಯಾಕ್ ಮಾಡಿಯೇ ಕಳಿಸ್ತಾರೆ. ಕೆಲವು ರೈಸ್ ಐಟಮ್ ಗಳು ಮಾತ್ರ ಪ್ಲಾಸ್ಟಿಕ್ ಡಬ್ಬದಲ್ಲಿ ಬರ್ತವೆ. ಒಂದು ವೇಳೆ ಅದರಲ್ಲಿ ಸಣ್ಣ ವ್ಯತ್ಯಾಸ ಆದರೂ ಕಸ್ಟಮರ್ ಗೆ ಗೊತ್ತಾಗುತ್ತದೆ. ಆಗ ಅವನು ಕಂಪ್ಲೇಂಟ್ ಮಾಡ್ಬಹುದು.
ಅದು ಬಿಟ್ಟು ಅವ ಕದ್ದೇ ತಿಂದದ್ದು ಎಂದು ಪ್ರೂ ಮಾಡೋದಲ್ಲ. ಅಲ್ಲಿನ ಪರಿಸ್ಥಿತಿ ಹಾಗಿರ್ಬಹುದು. ಒಂದು ವೇಳೆ ಅವ ಕದ್ದು ತಿಂದಿದ್ರೂ ಅದಕ್ಕೆ ಕ್ಷಮೆ ಇತ್ತು. ಯಾಕಂದ್ರೆ ಅವ ಕೋಟಿ ಕೋಟಿ ನುಂಗಿದ್ದಲ್ವಲ್ಲ.

ಕೆಲವು ತಿಂಗಳ ಹಿಂದೆ ಕೇರಳದಲ್ಲಿ ಮಹಾನ್ ಮಾನವತಾವಾದಿ ಮುಖವಾಡ ಹಾಕಿದ ಕಮ್ಯುನಿಸ್ಟರು ಮಧು ಎಂಬ ಮನುಷ್ಯನನ್ನು ಹೊಡೆದು ಕೊಂದದ್ದು, ಕದ್ದು ಊಟ ಮಾಡಿದ ಎಂದು ಆ ವೀಡಿಯೋ ಶೇರ್ ಮಾಡಿ ನಮ್ಮ ಜನ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಅವನನ್ನು ಕೊಲ್ಬಾರ್ದಿತ್ತು ಎಂದು. ಹಾಗಾದರೆ ಈ ವಿಡಿಯೋ ಶೇರ್ ಮಾಡುವವರಿಗೂ ಆ ಹೊಡೆದು ಕೊಂದವರಿಗೂ ಏನೂ ವ್ಯತ್ಯಾಸ ಇಲ್ಲ.
ಇದು ಕೂಡಾ ಯಾರೋ ಒಬ್ಬ ಮಾಡಿದ ವಿಡಿಯೋದಿಂದ ಆ ಊಟ ಮಾಡಿದ ವ್ಯಕ್ತಿ ಎಷ್ಟು ಮಾನಸಿಕ ಹಿಂಸೆ ಅನುಭವಿಸುವಂತಾಯಿತು. ಅವರು ಕೊಡೋ ಚಿಲ್ಲರೆ ಸಂಬಳಕ್ಕೆ ಆ ಬಿಸಿಲಲ್ಲಿ ಹತ್ತೇ ನಿಮಿಷಕ್ಕೆ ನಿಮಗೆ ಆಹಾರ ತಲುಪಿಸ್ತಾರಲ್ವ ಅವರಿಗೆ ನಾವು ಕೊಡೋ ಉಡುಗೊರೆ ಇದು.
ಮಲಯಾಳಂನಲ್ಲಿ Ustad hotel ಅಂತ ಒಂದು ಸಿನಿಮಾ ಇದೆ. ನೋಡಿ. ಅದ್ರಲ್ಲಿ ಒಬ್ಬ ಹಸಿವು ತಾಳಲಾರದೆ ತಾನು ಮಾಡಿದ ಮಲವನ್ನೇ ತಿಂತಾನೆ. ಅದನ್ನು ಕೇಳೋದಕ್ಕೆ ಅಸಹ್ಯ. ಅದು ಸಿನಿಮಾ ಮಾತ್ರ ಅಲ್ಲ, ನಿಜ ಕೂಡಾ. ಈಗಲೂ ಇದೆಯಂತೆ ಅದು ನಮ್ಮ ಭಾರತದಲ್ಲಿ.
ಅಷ್ಟಕ್ಕೂ ಅ ವ್ಯಕ್ತಿ ಅಪರಾಧಿಯೇನೂ ಅಲ್ಲ. ಅವ ಊಟ ಮಾಡಿದ್ದಷ್ಟೇ. ಜಗತ್ತಿನಲ್ಲಿ ನೀನು ಯಾವ ವಸ್ತು ಕೊಟ್ಟರೂ ಜನ ಸಾಕು ಅನ್ನಲ್ಲ. ಆದ್ರೆ ಊಟ ಹಾಗಲ್ಲ. ಹೊಟ್ಟೆ ತುಂಬಿದ ಮೇಲೆ ಸಾಕು ಅಂತೀವಿ. ಅದೇ ಅದರ ವಿಶೇಷತೆ. ಆದ್ರೆ ನಾವಿನ್ನೊಬ್ರಿಗೆ ಊಟ ಕೊಡ್ಬೇಕು. ಅದನ್ನು ಕಿತ್ಕೊಳ್ಳೊದಕ್ಕೆ ಹೋಗ್ಬಾರ್ದು.
ಈಗ ಈ ವಿಡಿಯೋದಿಂದ ಅವನ ಅನ್ನವನ್ನೇ ಕಿತ್ಕೊಂಡಿದ್ದೇವೆ ನಾವುಗಳು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications