'ನಾವೆಲ್ಲ ಸೇರಿ ಝೊಮ್ಯಾಟೊ ಡೆಲಿವರಿ ಬಾಯ್ ನ ಅನ್ನ ಕಿತ್ಕೊಬಾರ್ದಿತ್ತು'
ಝೊಮ್ಯಾಟೊ ಡೆಲಿವರಿ ಬಾಯ್ ವೊಬ್ಬರ ವಿಡಿಯೋ ವೈರಲ್ ಹಾಗೂ ಆ ನಂತರದ ಬೆಳವಣಿಗೆ ಬಗ್ಗೆ ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಪ್ರಕಟಿಸಲಾಗುತ್ತಿದೆ. ಇದು ಲೇಖಕರ ಅಭಿಪ್ರಾಯವೇ ಹೊರತು ಇದಕ್ಕೆ ಒನ್ ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ- ಸಂಪಾದಕ
***
ನಿನ್ನೆ ಒಬ್ರು Zomato ಡೆಲಿವರಿಯವರು ಅವರ ಪಾರ್ಸೆಲ್ ನಿಂದ ಊಟ ಕದ್ದು ತಿಂದರು ಎಂದು ಬಂದಿರೋ ವಿಡಿಯೋನ Social networkನಲ್ಲಿ ಜನ ಶೇರ್ ಮಾಡಿದ್ದೇ ಮಾಡಿದ್ದು. ಅಷ್ಟಕ್ಕೂ ಆ ವ್ಯಕ್ತಿಯೇ ಸ್ಪಷ್ಟನೆ ಕೊಟ್ಟಿದ್ದಾರೆ: ನಾನು ತಿಂದಿರೊ ಊಟ ಅದು ಕಸ್ಟಮರ್ cancel ಮಾಡಿದ ಐಟಮ್. ಆಗ ನಂಗೆ ಬೇರೆ ಒಂದು ಆರ್ಡರ್ ಬಂತು. ಹಾಗಾಗಿ ತಿಂದು ನಾನದನ್ನು ಅಲ್ಲೇ ಇಟ್ಟೆ ಎಂದು.
ನನ್ನಲ್ಲಿ ನಿನ್ನೆಯಿಂದ ಈ ವಿಷಯದಲ್ಲಿ ಅವ ತಪ್ಪೇ ಮಾಡಿದ್ದಾನೆ ಎಂದು ವಾದ ಮಾಡಿದವರಿಗೆ ಒಂದು ಸ್ಪಷ್ಟನೆ. Online food ಪ್ಯಾಕೆಟ್ ಪ್ಯಾಕ್ ಮಾಡಿಯೇ ಕಳಿಸ್ತಾರೆ. ಕೆಲವು ರೈಸ್ ಐಟಮ್ ಗಳು ಮಾತ್ರ ಪ್ಲಾಸ್ಟಿಕ್ ಡಬ್ಬದಲ್ಲಿ ಬರ್ತವೆ. ಒಂದು ವೇಳೆ ಅದರಲ್ಲಿ ಸಣ್ಣ ವ್ಯತ್ಯಾಸ ಆದರೂ ಕಸ್ಟಮರ್ ಗೆ ಗೊತ್ತಾಗುತ್ತದೆ. ಆಗ ಅವನು ಕಂಪ್ಲೇಂಟ್ ಮಾಡ್ಬಹುದು.
ಅದು ಬಿಟ್ಟು ಅವ ಕದ್ದೇ ತಿಂದದ್ದು ಎಂದು ಪ್ರೂ ಮಾಡೋದಲ್ಲ. ಅಲ್ಲಿನ ಪರಿಸ್ಥಿತಿ ಹಾಗಿರ್ಬಹುದು. ಒಂದು ವೇಳೆ ಅವ ಕದ್ದು ತಿಂದಿದ್ರೂ ಅದಕ್ಕೆ ಕ್ಷಮೆ ಇತ್ತು. ಯಾಕಂದ್ರೆ ಅವ ಕೋಟಿ ಕೋಟಿ ನುಂಗಿದ್ದಲ್ವಲ್ಲ.

ಕೆಲವು ತಿಂಗಳ ಹಿಂದೆ ಕೇರಳದಲ್ಲಿ ಮಹಾನ್ ಮಾನವತಾವಾದಿ ಮುಖವಾಡ ಹಾಕಿದ ಕಮ್ಯುನಿಸ್ಟರು ಮಧು ಎಂಬ ಮನುಷ್ಯನನ್ನು ಹೊಡೆದು ಕೊಂದದ್ದು, ಕದ್ದು ಊಟ ಮಾಡಿದ ಎಂದು ಆ ವೀಡಿಯೋ ಶೇರ್ ಮಾಡಿ ನಮ್ಮ ಜನ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಅವನನ್ನು ಕೊಲ್ಬಾರ್ದಿತ್ತು ಎಂದು. ಹಾಗಾದರೆ ಈ ವಿಡಿಯೋ ಶೇರ್ ಮಾಡುವವರಿಗೂ ಆ ಹೊಡೆದು ಕೊಂದವರಿಗೂ ಏನೂ ವ್ಯತ್ಯಾಸ ಇಲ್ಲ.
ಇದು ಕೂಡಾ ಯಾರೋ ಒಬ್ಬ ಮಾಡಿದ ವಿಡಿಯೋದಿಂದ ಆ ಊಟ ಮಾಡಿದ ವ್ಯಕ್ತಿ ಎಷ್ಟು ಮಾನಸಿಕ ಹಿಂಸೆ ಅನುಭವಿಸುವಂತಾಯಿತು. ಅವರು ಕೊಡೋ ಚಿಲ್ಲರೆ ಸಂಬಳಕ್ಕೆ ಆ ಬಿಸಿಲಲ್ಲಿ ಹತ್ತೇ ನಿಮಿಷಕ್ಕೆ ನಿಮಗೆ ಆಹಾರ ತಲುಪಿಸ್ತಾರಲ್ವ ಅವರಿಗೆ ನಾವು ಕೊಡೋ ಉಡುಗೊರೆ ಇದು.
ಮಲಯಾಳಂನಲ್ಲಿ Ustad hotel ಅಂತ ಒಂದು ಸಿನಿಮಾ ಇದೆ. ನೋಡಿ. ಅದ್ರಲ್ಲಿ ಒಬ್ಬ ಹಸಿವು ತಾಳಲಾರದೆ ತಾನು ಮಾಡಿದ ಮಲವನ್ನೇ ತಿಂತಾನೆ. ಅದನ್ನು ಕೇಳೋದಕ್ಕೆ ಅಸಹ್ಯ. ಅದು ಸಿನಿಮಾ ಮಾತ್ರ ಅಲ್ಲ, ನಿಜ ಕೂಡಾ. ಈಗಲೂ ಇದೆಯಂತೆ ಅದು ನಮ್ಮ ಭಾರತದಲ್ಲಿ.
ಅಷ್ಟಕ್ಕೂ ಅ ವ್ಯಕ್ತಿ ಅಪರಾಧಿಯೇನೂ ಅಲ್ಲ. ಅವ ಊಟ ಮಾಡಿದ್ದಷ್ಟೇ. ಜಗತ್ತಿನಲ್ಲಿ ನೀನು ಯಾವ ವಸ್ತು ಕೊಟ್ಟರೂ ಜನ ಸಾಕು ಅನ್ನಲ್ಲ. ಆದ್ರೆ ಊಟ ಹಾಗಲ್ಲ. ಹೊಟ್ಟೆ ತುಂಬಿದ ಮೇಲೆ ಸಾಕು ಅಂತೀವಿ. ಅದೇ ಅದರ ವಿಶೇಷತೆ. ಆದ್ರೆ ನಾವಿನ್ನೊಬ್ರಿಗೆ ಊಟ ಕೊಡ್ಬೇಕು. ಅದನ್ನು ಕಿತ್ಕೊಳ್ಳೊದಕ್ಕೆ ಹೋಗ್ಬಾರ್ದು.
ಈಗ ಈ ವಿಡಿಯೋದಿಂದ ಅವನ ಅನ್ನವನ್ನೇ ಕಿತ್ಕೊಂಡಿದ್ದೇವೆ ನಾವುಗಳು.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ












Click it and Unblock the Notifications