ಆಭರಣವೆಂದರೆ ಶೀರೂರು ಶ್ರೀಗಳಿಗೆ ಬಲು ಅಚ್ಚು ಮೆಚ್ಚು
Recommended Video

ಉಡುಪಿ, ಜುಲೈ.20: ಶೀರೂರು ಶ್ರೀಗಳೆಂದರೆ ಅವರ ಹಾವ ಭಾವ, ನಡೆ ನುಡಿಗೆ ಹೆಚ್ಚು ಹೆಸರಾದವರು. ಅವರ ಕಟ್ಟುಮಸ್ತಾದ ಶರೀರ, ದಿನನಿತ್ಯದ ಯೋಗ, ಪೂಜೆ - ಪುನಸ್ಕಾರಗಳು, ಒಟ್ಟಿನಲ್ಲಿ ಅವರನ್ನು ನೋಡಿದರೆ ಸಾಕು ಕೈ ಮುಗಿಯಬೇಕೆಂಬ ಮನೋಭಾವ ರೂಢಿಸಿಕೊಂಡವರು.
ಶ್ರೀ ಕೃಷ್ಣನ ಸೇವಕರಾದ ಶ್ರೀಗಳು ಓರ್ವ ಕೊಳಲುವಾದಕ, ಡ್ರಮ್ಸ್ , ಸಂಗೀತ , ಈಜು, ಕರಾಟೆ ಹೀಗೆ ಕೈಯಾಡಿಸಿದ ಕ್ಷೇತ್ರವೇ ಇಲ್ಲ. ಅಲೆಗಳ ವಿರುದ್ಧ ಈಜಿ ದಡ ಸೇರುತ್ತಿದ್ದ ಶ್ರೀಗಳು ಅರಬ್ಬೀ ಸಮುದ್ರದಲ್ಲಿ ಧುಮುಕಿ ದಡ ಸೇರಿದವರಾಗಿದ್ದರು.
ವಿದೇಶದಿಂದ ಬಂದಿದ್ದ ಅನೇಕರಿಗೆ ತಮ್ಮ ಜಲಯೋಗದ ಪಟ್ಟನ್ನು ಸಹ ಹೇಳಿಕೊಟ್ಟಿದ್ದರು ಶ್ರೀಗಳು. ಇಂತಹ ಶ್ರೀಗಳಿಗೆ ಇದ್ದದ್ದು ಒಂದೇ ಒಂದು ಆಸೆ..ದಿನಕ್ಕೊಂದು ತೆರನಾದ ಆಭರಣ ಹಾಗೂ ಸರಗಳನ್ನು ಧರಿಸಿಕೊಳ್ಳುವುದು.
ಹೌದು, ಸಾಮಾನ್ಯವಾಗಿ ಶ್ರೀಗಳ ಎಲ್ಲಾ ಚಿತ್ರಪಟ ಗಮನಿಸಿದರೆ ಮೊದಲು ಕಾಣಸಿಗುವುದೇ ಶ್ರೀಗಳ ವೈಭವೋಪೇತ ಆಭರಣಗಳು. ಅವೆಲ್ಲವೂ ಮುಕ್ಕಾಲುಭಾಗ ಚಿನ್ನದ್ದೇ. ದೊಡ್ಡ - ದೊಡ್ಡ ಪೆಂಡೆಂಟ್ ಮಾದರಿಯಲ್ಲಿ ಸರಗಳನ್ನು ಧರಿಸುತ್ತಿದ್ದ ಶ್ರೀಗಳು ಮಿಕ್ಕೆಲ್ಲಾ ಶ್ರೀಗಳಿಗಿಂತ ಭಿನ್ನ.

ಕೈಗೆ ಖಡ್ಗ, ಉಂಗುರ, ಕುತ್ತಿಗೆಗೆ ಹಾಕುತ್ತಿದ್ದ ದಪ್ಪ -ದಪ್ಪ ಮಣಿಯ ತುಳಸಿ ಹಾರ ಎಲ್ಲರನ್ನೂ ಸೆಳೆಯುವಂತೆ ಮಾಡುತ್ತಿತ್ತು. ಒಮ್ಮೆಲೆ 8 ರಿಂದ 10 ಸರಗಳನ್ನು ಧರಿಸುತ್ತಿದ ಶ್ರೀಗಳಿಗೆ ಹೊಸ ಮಾದರಿಯ ಹಾರಗಳನ್ನು ಮಾಡಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದವರು.
ಮಠಕ್ಕೆ ಬೇಕಾದ ಚಿನ್ನಾಭರಣ ಮಾಡಿಕೊಡುವವರ ಬಳಿಯೇ ತಮಗೆ ಬೇಕಾದ ಮಾದರಿಯಲ್ಲಿ ಹೊಸ ವಿನ್ಯಾಸವನ್ನು ನೀಡಿ ಹಾರವನ್ನು ಮಾಡಿಸಿ ಧರಿಸಿಕೊಳ್ಳುತ್ತಿದ್ದರು ಶ್ರೀಗಳು.
ಲಕ್ಷ್ಮೀವರ ತೀರ್ಥರಿಗೆ ನೂತನ ಮಾದರಿಯ ಆಭರಣಗಳ ಜೊತೆ - ಜೊತೆಗೆ ಅದಕ್ಕೆ ಧಾರ್ಮಿಕ ಟಚ್ ನೀಡಿ ಉಡುವಲ್ಲಿನ ಆಸಕ್ತಿ ಬೇರೆಲ್ಲದಕ್ಕಿಂತ ಹೆಚ್ಚು ಸಂತಸಕೊಡುತ್ತಿತ್ತು ಎನ್ನುತ್ತದೆ ಮಠದ ಆಪ್ತವಲಯ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications