ಉಡುಪಿಯ ಈ ತಾಯಿ-ಮಗನ ಅಭಿಯಾನವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು..!
ಉಡುಪಿ, ಸೆಪ್ಟೆಂಬರ್.14: ಇದು ತಾಯಿ -ಮಗ ಹಮ್ಮಿಕೊಂಡಿರುವ ವಿಶಿಷ್ಟ ಅಭಿಯಾನ. ಇದರ ಹಿಂದೆ ಒಂದು ಉತ್ತಮ ಉದ್ದೇಶವೂ ಅಡಗಿದೆ. ವಿಶೇಷವಾಗಿ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಸಂಕಲ್ಪ ಈ ಅಭಿಯಾನದ ಹಿಂದಿದೆ.
ಯಾರು ಈ ತಾಯಿ ಮಗ ? ಇವರು ಹಮ್ಮಿಕೊಂಡಿರುವ ಅಭಿಯಾನವಾದ್ರೂ ಏನು ಅಂತೀರಾ?. ಈ ಲೇಖನ ಓದಿ ನಿಮಗೇ ತಿಳಿಯುತ್ತದೆ.
ರಾಷ್ಟ್ರೀಯ ಅಪರಾಧ ದಳದ ಇತ್ತೀಚಿನ ವರದಿ ಬೆಚ್ಚಿ ಬೀಳಿಸುವಂಥದ್ದು. ಈ ವರದಿಯ ಪ್ರಕಾರ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಲ್ಲಿ ಶೇ.40 ರಷ್ಟು ಅಪ್ರಾಪ್ತ ವಯಸ್ಸಿನ ಬಾಲಕಿಯರೇ ಇದ್ದಾರೆ. ದೇಶದಲ್ಲಿ ಪ್ರತೀ ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ.

ಇನ್ನು ದಾಖಲಾಗದ ಬೆಳಕಿಗೆ ಬಾರದ ಕಿರುಕುಳಗಳು ಅವೆಷ್ಟೋ? ಹಾಗಾದರೆ ಮಹಿಳಾ ದೌರ್ಜನ್ಯ ಕಡಿಮೆಯಾಗುವುದೆಂದು? ಇದಕ್ಕೊಂದು ಪರಿಹಾರ ಬೇಡವೇ? ಈ ಪ್ರಶ್ನೆ ಇಟ್ಟುಕೊಂಡು ವಿಶಿಷ್ಟ ಅಭಿಯಾನವನ್ನು ಕೈಗೊಂಡವರೇ ಈ ತಾಯಿ ಮಗ.
ಸ್ವರಕ್ಷಾ ಫಾರ್ ವಿಮೆನ್ ಎಂಬ ಘೋಷವಾಕ್ಯದಡಿ ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ್ ಎಸ್ ಕಟೀಲ್, ಮತ್ತವರ ತಾಯಿ ಶೋಭಲತಾ ಬಾಲಕಿಯರು ಮತ್ತು ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮುಖ್ಯವಾಗಿ ದೌರ್ಜನ್ಯಗಳಾದಾಗ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳಬೇಕು? ಸ್ಥಳದಲ್ಲಿ ತಕ್ಷಣಕ್ಕೆ ಪ್ರತಿರೋಧಿಸುವ ಟೆಕ್ನಿನಿಕ್ ಗಳೇನು ಎಂಬುದನ್ನು 11 ವರ್ಷದ ಬಾಲಕಿಯರಿಂದ ಹಿಡಿದು 60 ವರ್ಷದ ಮಹಿಳೆಯರವರೆಗೆ ಹೇಳಿಕೊಡುತ್ತಿದ್ದಾರೆ.

ನೀವು ನಂಬಲಿಕ್ಕಿಲ್ಲ, ಕಳೆದ ನಾಲ್ಕು ವರ್ಷದಲ್ಲಿ ಇವರಿಬ್ಬರು 430 ಸಂಸ್ಥೆಗಳ ಸುಮಾರು ಒಂದು ಲಕ್ಷ ಮೂವತ್ತು ಸಾವಿರಕ್ಕೂ ಅಧಿಕ ಬಾಲಕಿಯರಿಗೆ ,ಯುವತಿಯರಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಈ ತಾಯಿ ಮಗ ನಡೆಸಿರುವ ಕಾರ್ಯಾಗಾರಗಳು ಏಳುನೂರಕ್ಕೂ ಹೆಚ್ಚು.
ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಕಾರ್ಯಾಗಾರಗಳನ್ನು ನಡೆಸಿ ಮಹಿಳೆಯರಿಗೆ ಸ್ವರಕ್ಷಣೆಯ ಪಾಠವನ್ನು ಸದ್ದಿಲ್ಲದೆ ಹೇಳಿ ಕೊಟ್ಟಿದ್ದಾರೆ. ಇದೀಗ ಮತ್ತಷ್ಟು ಪರಿಣಾಮಕಾರಿಯಾಗಿ ಈ ಕಾರ್ಯ ನಡೆಸಲು ಇವರಿಬ್ಬರು ಮಿಕ್ಸ್ ಡ್ ಮಾರ್ಷಲ್ ಆರ್ಟ್ಸ್ ನ್ನು ಪರಿಚಯಿಸುತ್ತಿದ್ದಾರೆ.
ಬಹುಶಃ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಇಂತಹದ್ದೊಂದು ತರಬೇತಿ ಬೇರೆಲ್ಲೂ ಸಿಗುತ್ತಿಲ್ಲ. ಕರಾಟೆ ಸಹಿತ ಮಾರ್ಷಲ್ ಆರ್ಟ್ಸ್ ನ ಕೆಲವೊಂದು ಟಿಪ್ಸ್ ಗಳನ್ನು ಕಲಿಸಿ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಹೊಸ ಪ್ರಯತ್ನ ಇದಾಗಿದೆ.

ಉಡುಪಿಯ ಮಣಿಪಾಲ ಶಿಕ್ಷಣ ಕಾಶಿಯಲ್ಲಿ ಸಾವಿರಾರು ವಿದ್ಯಾರ್ಥಿನಿಯರಿದ್ದಾರೆ. ಇವರನ್ನೇ ಗುರಿಯಾಗಿಟ್ಟುಕೊಂಡು ತಾಯಿ ಮಗ ಮಣಿಪಾಲದಲ್ಲಿ ಮಿಕ್ಸ್ ಡ್ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಪ್ರಾರಂಭಿಸಿದ್ದಾರೆ. ಬಡ ಹೆಣ್ಣುಮಕ್ಕಳಿಗೂ ನೆರವಾಗುವ ಉದ್ದೇಶ ಈ ಅಕಾಡೆಮಿಯ ಹಿಂದೆ ಇದೆ.
ಇಂತಹ ಅಪೂರ್ವ ಅಭಿಯಾನದ ಮೂಲಕ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯ ಕಲೆ ಕಲಿಸೋ ಈ ತಾಯಿ ಮಗನಿಗೆ ಪ್ರೋತ್ಸಾಹ ನೀಡಬೇಕಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications