ನಾಳೆ ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಕೋದು ಗ್ಯಾರಂಟಿ... Virat Kohli
100 ಪರ್ಸಂಟ್ ಗ್ಯಾರಂಟಿ, ದೆಹಲಿ ಎದುರು ಆರ್ಸಿಬಿ ಗೆದ್ದು ಬೀಗುವುದು 100 ಪರ್ಸಂಟ್ ಗ್ಯಾರಂಟಿ. ಯಾಕಪ್ಪಾ ಅಂದ್ರೆ ಬೆಂಗಳೂರಿಗೆ ಬಂದು ಕಿರಿಕ್ ಮಾಡಿ ಗೆದ್ದು ಹೋಗಿದ್ದ ಇದೇ ದೆಹಲಿ ತಂಡದ ವಿರುದ್ಧ ಆರ್ಸಿಬಿ ಅಭಿಮಾನಿಗಳು & ಕನ್ನಡಿಗರು ಇದೀಗ ಕೊತ ಕೊತನೇ ಕುದಿಯುತ್ತಿದ್ದಾರೆ. ಹೀಗಿದ್ದಾಗಲೇ, ನಾಳೆ ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆಗೆ ಬಿಸಾಕೋದು ಗ್ಯಾರಂಟಿ...
ಬೆಂಗಳೂರು ತಂಡ ಆರ್ಸಿಬಿ ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲ, ಕ್ರಿಕೆಟ್ ಅಖಾಡದಲ್ಲಿ ಸೇಡಿಗೆ ಸೇಡು ತೀರಿಸಕೊಳ್ಳುವ ವಿಚಾರದಲ್ಲೂ ನಂಬರ್ 1 ಅಂತಾ ಹೇಳಬಹುದು. ಯಾಕೆ ಅಂದ್ರೆ, ಆರ್ಸಿಬಿ ತಂಡವನ್ನು ಅಥವಾ ವಿರಾಟ್ ಕೊಹ್ಲಿ ಅವರನ್ನು ಯಾರೇ ಕೆಣಕಿದರೂ ಆರ್ಸಿಬಿ ಬಿಡೋದೆ ಇಲ್ಲ. ರಾಯಲ್ ಚಾಲೆಂಜರ್ಸ್ ಕೊಡುವ ಒಂದೊಂದು ಏಟಿಗೂ ಎದುರಾಳಿಗಳ ಎದೆ ನಡುಗುವುದು ಗ್ಯಾರಂಟಿ. ಅದೇ ರೀತಿ ಇದೀಗ ದೆಹಲಿ ತಂಡದ ವಿರುದ್ಧ ಭರ್ಜರಿಯಾಗಿ ಪ್ಲಾನ್ ಮಾಡಿರುವ ವಿರಾಟ್ ಕೊಹ್ಲಿ ಹುಡುಗರು, ಡೆಲ್ಲಿನ ಗಿಲ್ಲಿ ಮಾಡಲು ರೆಡಿಯಾಗಿದ್ದಾರೆ!

ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ...
ಕನ್ನಡಿಗರು ಇವತ್ತು ಅಂದ್ರೆ ಶನಿವಾರ ನಿದ್ದೆ ಮಾಡೋದಿಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ನಮ್ಮ ಬೆಂಗಳೂರು ತಂಡ ಆರ್ಸಿಬಿ & ದೆಹಲಿ ತಂಡಗಳ ನಡುವೆ ನಾಳೆ ಮ್ಯಾಚ್ ನಡೆಯಲಿದೆ. ಇದು ಸಾಮಾನ್ಯವಾದ ಪಂದ್ಯ ಅಲ್ಲ, ಯಾಕಂದ್ರೆ ಬೆಂಗಳೂರಿಗೆ ಬಂದು ಅವಮಾನ ಮಾಡಿ ಹೋಗಿದ್ದ ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ದೆಹಲಿ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ವಿರುದ್ಧವೂ ಆರ್ಸಿಬಿ ಫ್ಯಾನ್ಸ್ ಇದೀಗ ರೊಚ್ಚಿಗೆದ್ದಿದ್ದಾರೆ...












Click it and Unblock the Notifications