ಸದ್ಯದಲ್ಲೇ ಭದ್ರಾವತಿ ಎಂಪಿಎಂ ಪುನರಾರಂಭ
ಶಿವಮೊಗ್ಗ, ಡಿ. 17 : ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ (ಎಂಪಿಎಂ) ಎಲ್ಲ ಘಟಕಗಳನ್ನು ಮುಚ್ಚಲಾಗಿದೆ. ಮಾಲಿನ್ಯ ಕಡಿಮೆ ಮಾಡಲು ಕೆಲವು ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ
ಸಂಜೆಯಿಂದ
ಎಂಪಿಎಂ
ಕಾರ್ಖಾನೆಯ
ಎಲ್ಲಾ
ಘಟಕಗಳನ್ನು
ಬಂದ್
ಮಾಡಲಾಗಿದೆ.
ಇದರಿಂದಾಗಿ
ಕಾರ್ಖಾನೆ
ಪ್ರತಿ
ದಿನ
1.9
ಕೋಟಿ
ರೂ.
ನಷ್ಟ
ಅನುಭವಿಸಲಿದೆ.
ಕಾರ್ಖಾನೆ
ವಾಯು,
ಜಲ
ಮಾಲಿನ್ಯ
ನಿಯಂತ್ರಣಕ್ಕೆ
ಅಗತ್ಯ
ಯಂತ್ರೋಪಕರಣಗಳನ್ನು
ಅಳವಡಿಸದೇ
ಕಾನೂನನ್ನು
ಉಲ್ಲಂಘಿಸಿದ
ಹಿನ್ನಲೆಯಲ್ಲಿ
ಅದನ್ನು
ಬಂದ್
ಮಾಡಲಾಗಿದೆ.
[ಎಂಪಿಎಂ
ವೆಬ್
ಸೈಟ್
ನೋಡಿ]
ಕಾರ್ಖಾನೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹಿನ್ನಲೆಯಲ್ಲಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯನ್ನು ಮುಚ್ಚುವಂತೆ ಆದೇಶ ನೀಡಿತ್ತು. ಮಂಡಳಿ ಸೂಚನೆಯಂತೆ ಬದಲಾವಣೆಗೆ ಕಾಲಾವಕಾಶ ಕೊಡುವಂತೆ ಕೋರಿ ಕಾರ್ಖಾನೆಯು ಮಂಡಳಿ ಪರಿಸರ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.
ಸದನದಲ್ಲಿ ಪ್ರಸ್ತಾಪ : ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿರುವ ಕುರಿತು ಮಂಗಳವಾರದ ಕಲಾಪದಲ್ಲಿ ಚರ್ಚೆ ನಡೆಯಿತು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಪರಿಸರ ಮಾಲಿನ್ಯ ಕಡಿಮೆ ಮಾಡಲು ಕೆಲವು ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸದನಲ್ಲಿ ಉತ್ತರ ನೀಡಿದ್ದಾರೆ.
ಇದು ತಾತ್ಕಾಲಿಕ ಮಾತ್ರ : ಎಂಪಿಎಂ ಕಾರ್ಖಾನೆ ಉಳಿಸಲು ರೈತರು, ಹಲವು ಸಂಘ ಸಂಸ್ಥೆಗಳ ಪ್ರಮುಖರನ್ನು ಒಳಗೊಂಡ ಭದ್ರಾವತಿ ಸರ್ವತೋಮುಖ ಅಭಿವೃದ್ಧಿ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ. ಇದು ತಾತ್ಕಾಲಿಕ ಆದೇಶವಷ್ಟೆ ಎಂದು ಆಡಳಿತ ಮಂಡಳಿ ಭರವಸೆ ನೀಡಿದೆ.