Get Updates
Get notified of breaking news, exclusive insights, and must-see stories!

Nikhil Kumaraswamy: ಚನ್ನಪಟ್ಟಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ನಿಖಿಲ್ ಕುಮಾರಸ್ವಾಮಿ!

ರಾಮನಗರ, ಅಕ್ಟೋಬರ್ 24: ಸಿ. ಪಿ. ಯೋಗೇಶ್ವರ V/S ನಿಖಿಲ್ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪ ಚುನಾವಣೆ ಕಣ ಅಂತಿಮವಾಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಇಡೀ ಕಾಂಗ್ರೆಸ್ ಸರ್ಕಾರ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರ ದಂಡು ಚನ್ನಪಟ್ಟಣದಲ್ಲಿ ಬೀಡು ಬಿಟ್ಟು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಗೆಲುವು ಯಾರಿಗೆ?.

ಚನ್ನಪಟ್ಟಣ ಉಪ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೇಂದ್ರ ಸಚಿವ, ಮಂಡ್ಯ ಸಂಸದ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿಯೇ ಘೋಷಣೆ ಮಾಡಿದ್ದಾರೆ. ಈಗ ಚನ್ನಪಟ್ಟಣದ ಉಪ ಚುನಾವಣೆ ಕಣದ ಲೆಕ್ಕಾಚಾರ ಆರಂಭವಾಗಿದೆ.

Channapatna By Election 2024 Nikhil Kumaraswamy To Tests His Luck

ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯ ಹಲವು ದಿನಗಳಿಂದ ಇತ್ತು. ಆದರೆ ಸಿ. ಪಿ. ಯೋಗೇಶ್ವರ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು. ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆಯೂ ಆಯಿತು. ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 25 ಕೊನೆಯ ದಿನ. ಆದರೆ ಗುರುವಾರ ಸಂಜೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂದು ಘೋಷಣೆ ಮಾಡಲಾಗಿದೆ.

ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆ: ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಒಮ್ಮೆ ಲೋಕಸಭೆಯಲ್ಲಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಲಾಂಚ್ ಮಾಡಿಸಲಾಗಲಿಲ್ಲ ಎನ್ನುವ ಕೊರಗು ಎಚ್. ಡಿ. ಕುಮಾರಸ್ವಾಮಿಯನ್ನು ಕಾಡುತ್ತಿದೆ.

ಅದು 2019ರ ಲೋಕಸಭೆ ಚುನಾವಣೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಎಚ್. ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಕಾಂಗ್ರೆಸ್ ಸಹ ಅಭ್ಯರ್ಥಿ ಹಾಕದೇ ಅವರನ್ನು ಬೆಂಬಲಿಸಿತು.

ಆದರೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ 577,784 ಮತಗಳನ್ನು ಪಡೆದು ಸೋಲು ಕಂಡರು. ಎದುರಾಳಿಯಾಗಿ ಇದ್ದಿದ್ದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ. ಅಂಬರೀಶ್ ಸಾವಿನ ಬಳಿಕ ನಡೆದ ಚುನಾವಣೆಯಲ್ಲಿ ಅನುಕಂಪದ ಮತಗಳು ಸುಮಲತಾ ಅವರನ್ನು ಗೆಲ್ಲಿಸಿತು.

ಅದು 2023ರ ವಿಧಾನಸಭೆ ಚುನಾವಣೆ. ರಾಮನಗರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಭಾವ ಇರುವ ಕ್ಷೇತ್ರ, ತವರು ಜಿಲ್ಲೆ. ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಬದಲು ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಮಂಡ್ಯದಲ್ಲಿ ಸೋತ ನಿಖಿಲ್ ರಾಮನಗರದಲ್ಲಿ ಗೆದ್ದು ಶಾಸಕರಾಗುತ್ತಾರೆ ಎಂದೇ ಅಂದಾಜಿಸಲಾಗಿತ್ತು.

ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯಿತು. ಕಾಂಗ್ರೆಸ್‌ನ ಹೆಚ್. ಎ. ಇಕ್ಬಾಲ್ ಹುಸೇನ್ 87690 ಮತಗಳನ್ನು ಪಡೆದು ಗೆದ್ದರು. ನಿಖಿಲ್ ಕುಮಾರಸ್ವಾಮಿ 76975 ಮತಗಳನ್ನು ಪಡೆದು ಸೋತರು. ಎರಡು ಚುನಾವಣೆಯಲ್ಲಿಯೂ ಸೋಲು ಕಂಡ ನಿಖಿಲ್ ಚನ್ನಪಟ್ಟಣದ ಹೆಸರು ಕೇಳಿ ಬಂದಾಗಲೆಲ್ಲಾ ನಾನು ಅಭ್ಯರ್ಥಿಯಲ್ಲ ಎಂದೇ ಹೇಳುತ್ತಿದ್ದರು.

ಆದರೆ ಸಿ. ಪಿ. ಯೋಗೇಶ್ವರ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಮೈತ್ರಿಕೂಟಕ್ಕೆ ಸಂಕಷ್ಟ ತಂದಿತು. ಶಿಗ್ಗಾವಿ, ಸಂಡೂರು ಬಿಜೆಪಿಗೆ ಬಿಟ್ಟುಕೊಟ್ಟಿದ್ದ ಜೆಡಿಎಸ್‌ಗೆ ಚನ್ನಪಟ್ಟಣಕ್ಕೆ ತನ್ನ ಅಭ್ಯರ್ಥಿ ಘೋಷಣೆ ಮಾಡುವುದು ಅನಿವಾರ್ಯವಾಗಿತ್ತು. ಜಯಮುತ್ತು ಅವರ ಹೆಸರು ಕೇಳಿಬಂದರೂ ಸಹ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಪರವಾಗಿದ್ದರು. ಅಂತಿಮವಾಗಿ ನಿಖಿಲ್‌ ಅಭ್ಯರ್ಥಿಯಾಗಿದ್ದು, ಈ ಬಾರಿಯಾದರೂ ಅದೃಷ್ಟ ಕೈ ಹಿಡಿಯಲಿದೆಯೇ? ಕಾದು ನೋಡಬೇಕಿದೆ.

ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೊಂದಿರುವ ಪ್ರಭಾವ. ಬಿಜೆಪಿಯ ಬೆಂಬಲ ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಬೆಂಬಲವಾಗಿದೆ. ಆದರೆ ಎದುರಾಳಿಯಾಗಿರುವುದು ಸಿ. ಪಿ. ಯೋಗೇಶ್ವರ. ಆದ್ದರಿಂದ ಚುನಾವಣೆ ಸುಲಭದ ತುತ್ತಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+