ಎಚ್ಚರ! ಮೈಸೂರಿನಲ್ಲಿದ್ದಾರೆ ಖತರ್ನಾಕ್ ಬೈಕ್ ಕಳ್ಳರು
ಮೈಸೂರು, ಸೆಪ್ಟೆಂಬರ್ 16: ದ್ವಿಚಕ್ರ ವಾಹನ ಹೊಂದಿದ್ದೀರಾ? ಹಾಗಿದ್ದರೆ ಎಚ್ಚರವಾಗಿರುವುದು ಒಳಿತು. ಮೈಸೂರಿನಲ್ಲಿ ದ್ವಿಚಕ್ರವಾಹನ ಕಳ್ಳರ ದೊಡ್ಡ ದಂಡೇ ಬೀಡು ಬಿಟ್ಟಿದ್ದು, ಕಷ್ಟಪಟ್ಟು ದುಡಿಯುವ ಬದಲು ಯಾರೋ ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ ಬೈಕ್, ಸ್ಕೂಟಿಗಳನ್ನು ಕದ್ದು ಮಾರಾಟ ಮಾಡಿ ಬದುಕುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ.
ಕಳೆದ ಕೆಲವು ಸಮಯಗಳಿಂದ ಪೊಲೀಸರು ನಗರದಲ್ಲಿ ದ್ವಿಚಕ್ರ ವಾಹನ ಕಳ್ಳರನ್ನು ಸೆರೆಹಿಡಿದು ಜೈಲಿಗೆ ತಳ್ಳುತ್ತಿದ್ದರೂ ಒಬ್ಬರಾದ ಮೇಲೊಬ್ಬರಂತೆ ಸಿಕ್ಕಿ ಬೀಳುತ್ತಲೇ ಇದ್ದಾರೆ. ಇದೀಗ ವಿವಿಪುರಂ ಠಾಣಾ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದು ಅವರಿಂದ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇಟಗಳ್ಳಿ ನಿವಾಸಿ ಶೇಷಾದ್ರಿ ಎಂಬುವರ ಪುತ್ರ ಜೀವನ್ಕುಮಾರ್ ಅಲಿಯಾಸ್ ಜಂಗ್ಲಿ, ಬೆಂಗಳೂರಿನ ಶ್ರೀನಗರ ನಿವಾಸಿ ತಿಮ್ಮೇಗೌಡ ಅವರ ಪುತ್ರ ಮಂಜುನಾಥ ಅಲಿಯಾಸ್ ಮಂಜು ಬಂಧಿತರಾಗಿದ್ದಾರೆ. ಇವರಿಬ್ಬರು ಭಲೇ ಖತರ್ನಾಕ್ ಗಳಾಗಿದ್ದು, ಯಾರಾದರೂ ತಮ್ಮ ಮನೆ ಮುಂದೆ ಬೀಗ ಹಾಕದೆ ನಿಲ್ಲಿಸುತ್ತಿದ್ದ ದ್ವಿಚಕ್ರವಾಹನಗಳನ್ನು ಪತ್ತೆ ಹಚ್ಚಿ ಅವುಗಳ ಇಗ್ನಿಷನ್ ಡೈರೆಕ್ಟ್ ಮಾಡಿ ಕದಿಯುತ್ತಿದ್ದರು. ಇದುವರೆಗೆ ಅದೆಲ್ಲೆಲ್ಲ ಈ ರೀತಿ ಕದ್ದಿದ್ದಾರೋ ಗೊತ್ತಿಲ್ಲ.

ಆದರೆ ಮೈಸೂರು ನಗರದಲ್ಲಿ ಇವರು ವಿ.ವಿ.ಪುರಂ, ದೇವರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಯಮಹಾ ಆರ್.ಎಕ್ಸ್ 135, ಹಿರೋ ಹೊಂಡಾ ಸ್ಪ್ಲೆಂಡರ್, ಸುಜುಕಿ ಆಕ್ಸೆಸ್ ಹೀಗೆ ಮೂರು ವಾಹನಗಳನ್ನು ಕದ್ದು ಅದರ ನಂಬರ್ ಪ್ಲೇಟ್ ತೆಗೆದು ಓಡಿಸುತ್ತಾ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ.
ನಂಬರ್ ಪ್ಲೇಟ್ ತೆಗೆದು ಓಡಾಟ
ಶುಕ್ರವಾರ ಇವರಿಬ್ಬರು ನಂಬರ್ ಪ್ಲೇಟ್ ಇಲ್ಲದ ಯಮಹ ಆರ್.ಎಕ್ಸ್ 135 ಬೈಕ್ ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಗಮನಿಸಿದ ವಿವಿಪುರಂ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು ಬಳಿಕ ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಉಮೇಶ್ ಜಿ.ಸೇಠ್ ಅವರ ಉಸ್ತುವಾರಿಯಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸಿ.ವಿ. ರವಿ, ಸಿಬ್ಬಂದಿ ಸೋಮಶೇಖರ್, ಪ್ರಸನ್ನ, ಈರಣ್ಣ, ಮಹೇಶ ಅವರು ವಿಚಾರಣೆಗೊಳಪಡಿಸಿದಾಗ ನಗರದ ಮೂರು ಕಡೆ ವಾಹನಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ ವಶಪಡಿಸಿಕೊಳ್ಳಲಾದ ವಾಹನಗಳ ಮೌಲ್ಯ ಒಂದು ಲಕ್ಷವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಸರಾಕ್ಕೆ ಬರ್ತಿರಾ ಎಚ್ಚರವಾಗಿರಿ
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸರಗಳ್ಳತನದೊಂದಿಗೆ ದ್ವಿಚಕ್ರ ವಾಹನ ಕಳ್ಳರ ಸಂಖ್ಯೆಯೂ ಜಾಸ್ತಿಯಾಗಿರುವ ಕಾರಣ ಮತ್ತು ದಸರಾ ಆರಂಭವಾಗಿರುವ ಹಿನ್ನಲೆಯಲ್ಲಿ ಕಳ್ಳರು ಇಲ್ಲಿ ಬೀಡು ಬಿಡುವ ಲಕ್ಷಣಗಳಿದ್ದು, ರಾತ್ರಿ ಆಹಾರಮೇಳ, ಯುವದಸರಾ, ವಸ್ತುಪ್ರದರ್ಶನ ಹೀಗೆ ಜನಜಂಗುಳಿಯಲ್ಲಿ ತೆರಳುವ ಜನರು ತಮ್ಮ ಆಭರಣಗಳತ್ತ ಎಚ್ಚರವಾಗಿರುವುದು ಒಳ್ಳೆಯದು.
ಇನ್ನು ಬೈಕ್ ಸೇರಿದಂತೆ ಇತರೆ ದ್ವಿಚಕ್ರವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೆ ನಿರ್ಧಿಷ್ಟ ಜಾಗದಲ್ಲಿ ನಿಲ್ಲಿಸಲು ಮತ್ತು ಬೀಗ ಹಾಕುವುದನ್ನು ಮರೆಯದಿರಿ. ಯಾವಾಗ ಯಾವ ಕ್ಷಣದಲ್ಲಿ ಬೈಕ್ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಾರೆ ಎಂಬುದೇ ಗೊತ್ತಾಗದಿಂದ ಕಾರಣದಿಂದ ತಮ್ಮ ಎಚ್ಚರಿಕೆಯಲ್ಲಿ ತಾವಿರುವುದು ಉತ್ತಮ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications