Get Updates
Get notified of breaking news, exclusive insights, and must-see stories!

ಮೈಸೂರು: ಮಿರೆಲ್ಲಾ ಸಾವಿಗೆ ವಿಷಪ್ರಾಶನ ಕಾರಣ

ಮೈಸೂರು, ಸೆ. 01: ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಜೂನ್ ತಿಂಗಳಲ್ಲಿ ಮೃತಪಟ್ಟ ಹೆಣ್ಣು ಚಿಂಪಾಂಜಿ ಮಿರೆಲ್ಲಾ ಸಾವಿಗೆ ವಿಷಪ್ರಾಶನ ಕಾರಣ ಎಂದು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಪ್ರಯೋಗಾಲಯ ವರದಿ ನೀಡಿದೆ.

ಜುಲೈ 13 ರಂದು ಪ್ರಯೋಗಾಲಯದ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗಿದೆ. ಮಾನವರು ಆತ್ಮಹತ್ಯೆಗೆ ಬಳಸುವಂಥ ರಾಸಾಯನಿಕದ ಅಂಶ ಚಿಂಪಾಂಜಿಯ ಹೊಟ್ಟೆಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

mysuru

ಆರಾಮವಾಗಿ ಓಡಾಡಿಕೊಂಡಿದ್ದ ಮಿರೆಲ್ಲಾ ಜೂನ್ 29 ರಂದು ಇದ್ದಕ್ಕಿದ್ದಂತೆ ಸಾವಿಗೀಡಾಗಿತ್ತು. ಮೃಗಾಲಯದ ಅಧಿಕಾರಿಗಳು ಚಿಂಪಾಂಜಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿಕೆ ನೀಡಿದ್ದರು.

ಖಾಸಗಿ ಪ್ರಯೋಗಾಲಯದ ವರದಿಯಲ್ಲೂ ಚಿಂಪಾಂಜಿ ವಿಶಪ್ರಾಶನದಿಂದಲೇ ಸಾವನ್ನಪ್ಪಿದೆ ಎಂದು ಹೇಳಲಾಗಿತ್ತು. ಸಿಬ್ಬಂದಿಗಳನ್ನು ಸಹ ತನಿಖೆಗೆ ಒಳಪಡಿಸಲಾಗಿದ್ದು ಹೇಗೆ ಸಾವು ಸಂಭವಿಸಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಹಿಂದೆ ಸಹ ಸಹ ಸಿಂಹವೊಂದಕ್ಕೆ ವಿಶಪ್ರಾಶನ ಮಾಡಿದ ಪ್ರಕರಣ ಮೈಸೂರು ಮೃಗಾಲಯದಲ್ಲಿ ನಡೆದಿತ್ತು.

ಮೃಗಾಲಯಗಳ ಪ್ರಾಣಿ ವಿನಿನಿಮಯ ಯೋಜನೆಯಡಿ ಸ್ವೀಡನ್ ನ ಕೋಲ್ ಮಾರ್ಡೆನ್ ವನ್ಯಜೀವಿ ಧಾಮಕ್ಕೆ 1994 ರಲ್ಲಿ ಭಾರತದ ಒಂದು ಆನೆಯನ್ನು ಕೊಟ್ಟು 5 ಚಿಂಪಾಂಜಿಗಳನ್ನು ತರಲಾಗಿತ್ತು. ಈ ಪೈಕಿ 2 ಚಿಂಪಾಂಜಿಗಳು ಮಾತ್ರ ಬದುಕುಳಿದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+