ಮಂಗಳೂರು: ಹಠಾರ್ ಕುಸಿದ ಬಾವಿ, ಭೂವಿಜ್ಞಾನ ಅಧಿಕಾರಿಗಳಿಂದ ಪರಿಶೀಲನೆ
ಮಂಗಳೂರು, ಮೇ 16 : ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪದ ಮಾಡೂರು ಎಂಬಲ್ಲಿ ಬಾವಿಯೊಂದು ಸುಮಾರು 21 ಅಡಿ ಆಳದವರಿಗೆ ಹಠಾತ್ ಕುಸಿದಿದೆ.
ಮಾಡೂರಿನ ಬಲ್ಯ ಎನ್ನುವರ ತೋಟದಲ್ಲಿರುವ ಬಾವಿ ಸುಮಾರು 21 ಅಡಿ ಆಳಕ್ಕೆ ಕುಸಿದಿದೆ. ಹಠಾತ್ ಕುಸಿತದ ಸುದ್ದಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಆಗಮಿಸಿದ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಸುರಂಗದ ಮಾದರಿಯಲ್ಲಿ ಬಾವಿ ಕುಸಿದಿದ್ದು ಇದನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ. ಕುಸಿದಿರುವ ಬಾವಿ ಮೇಲ್ಭಾಗದಲ್ಲಿ ಮರದ ತುಂಡುಗಳನ್ನು ಇಟ್ಟು ಅಪಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಕೆಲವರು ಇಲ್ಲಿ ನಿಧಿ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೇ ಜಾಗದಲ್ಲಿ ರಾಜವಂಶಸ್ಥರು ವಾಸ ಮಾಡಿಕೊಂಡಿದ್ದು, ಇಲ್ಲಿ ನಿಧಿಯನ್ನು ಹೂತಿಟ್ಟಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications