ಕಿಟಕಿ ಮುರಿದು ಹಾಸ್ಟೆಲ್ ನಿಂದ ರಾತ್ರೋರಾತ್ರಿ ಪರಾರಿಯಾದ ವಿದ್ಯಾರ್ಥಿನಿಯರು!
ಮಂಗಳೂರು, ಸೆಪ್ಟೆಂಬರ್ 21: ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಿಟಕಿ ಮುರಿದು ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಯಶಸ್ವಿನಿ, ದಕ್ಷತಾ, ಸಿಂಚನಾ ಎಂಬ ಮೂವರು ಪರಾರಿಯಾದ ವಿದ್ಯಾರ್ಥಿನಿಯರು.
ಯಶಸ್ವಿನಿ ಹಾಗೂ ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದರೆ. ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾರೆ. ನಸುಕಿನ ವೇಳೆ 3 ಗಂಟೆಗೆ ಪರಾರಿಯಾಗಿದ್ದಾರೆ. ಇವರು ಮೂವರೂ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.
'ನಾವು ಹೋಗುತ್ತಿದ್ದೇವೆ, ಕ್ಷಮಿಸಿ' ಎಂದು ಪತ್ರ ಬರೆದಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವಿದ್ಯಾರ್ಥಿನಿಯರು ಹೋಗಿರುವುದೆಲ್ಲಿಗೆ?, ಯಾಕಾಗಿ ಹೋಗಿರುವುದು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕಾಲೇಜಿಗೆ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ.
ಕಿಟಕಿಯ ರಾಡ್ ಗಳನ್ನು ಬಗ್ಗಿಸಿದ ಕಿಟಕಿ ಮೂಲಕ ಹೊರಹೋಗಿ ಹಾಸ್ಟೆಲ್ನಿಂದ ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿಯರು ಬ್ಯಾಗ್ ಸಮೇತ ಹಾಸ್ಟೆಲ್ ನಿಂದ ಹೊರಬಂದು ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ದೃಶ್ಯ ಹಾಸ್ಟೆಲ್ ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ವಿದ್ಯಾರ್ಥಿನಿಯರು ಪರಾರಿಯಾಗಿರುವ ಬಗ್ಗೆ ಸುದ್ದಿ ಮಾಡಲು ಕಾಲೇಜು ಆವರಣದ ಬಳಿ ಹೋದ ಸುದ್ದಿವಾಹಿನಿಗಳ ಕ್ಯಾಮೆರಾವನ್ನು ಕಿತ್ತುಕೊಳ್ಳುವ ಪ್ರಯತ್ನವೂ ನಡೆದಿದೆ. ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿಯೋರ್ವ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಕ್ಯಾಮೆರಾಗೆ ಹಾನಿಯಾಗಿದೆ. ಟ್ರಸ್ಟಿಯ ದರ್ಪಕ್ಕೆ ಪತ್ರಕರ್ತರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಎಸಿಪಿ ದಿನಕರ್ ಶೆಟ್ಟಿ ಆಗಮಿಸಿದ ಪರಿಶೀಲನೆ ಮಾಡಿದ್ದಾರೆ. ವಿದ್ಯಾರ್ಥಿನಿ ಯರು ನಾಪತ್ತೆಯಾದ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ
ಆರೋಪಿಗೆ
3
ವರ್ಷ
ಜೈಲು
ಶಿಕ್ಷೆ
ನಗರದ
ಕಾಸ್ಮೋಸ್
ಲೇನ್
ಬಳಿ
ವಾಯುವಿಹಾರಕ್ಕೆ
ತೆರಳಿದ್ದ
ಮಹಿಳೆಯ
ಕತ್ತಿನಲ್ಲಿದ್ದ
ಚಿನ್ನದ
ಸರವನ್ನು
ಕಿತ್ತೊಯ್ದ
ಪ್ರಕರಣದಲ್ಲಿ
ಮಹಮ್ಮದ್
ನಿಯಾಜ್
ಕೆ.,
ವಿರುದ್ಧದ
ಆರೋಪ
ಸಾಬೀತಾಗಿದ್ದು,
ಆತನಿಗೆ
ಎರಡನೇ
ಸಿಜೆಎಂ
ನ್ಯಾಯಾಲಯದ
ನ್ಯಾಯಾಧೀಶರಾದ
ಮಧುಕರ
ಪಿ.ಭಾಗವತ್
ಅವರು
3
ವರ್ಷ
6
ತಿಂಗಳ
ಜೈಲು
ಶಿಕ್ಷೆ
ಹಾಗೂ
₹
10
ಸಾವಿರ
ದಂಡ
ವಿಧಿಸಿ
ತೀರ್ಪು
ನೀಡಿದ್ದಾರೆ.
ಅಪರಾಧಿಯು
ದಂಡ
ಪಾವತಿಸಲು
ತಪ್ಪಿದ್ದಲ್ಲಿ
ಮತ್ತೆ
ಎರಡು
ತಿಂಗಳ
ಜೈಲು
ಶಿಕ್ಷೆ
ಅನುಭವಿಸಬೇಕು
ಎಂದು
ಅವರು
ತೀರ್ಪಿನಲ್ಲಿ
ತಿಳಿಸಿದ್ದಾರೆ.
016ರ ಅಕ್ಟೋಬರ್ 16ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಕದ್ರಿ ಕಂಬಳ ರಸ್ತೆಯ ನಿವಾಸಿ ಅನುರಾಧಾ ಎಸ್. ರಾವ್ ವಾಯುವಿಹಾರಕ್ಕೆ ತೆರಳಿದ್ದಾಗ 10.71 ಗ್ರಾಂ ತೂಕದ ಚಿನ್ನದ ಸರವನ್ನು ಮಹಮ್ಮದ್ ನಿಯಾಜ್ ಕೆ. ಕಿತ್ತುಕೊಂಡು ಹೋಗಿದ್ದ. ಈ ಬಗ್ಗೆ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಮಾರುತಿ ಜಿ.ನಾಯ್ಕ ಅವರು ಆರೋಪಿಯನ್ನು ಬಂಧಿಸಿದ್ದರು. ಬೆಳ್ಳಾರೆಯ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಸರವನ್ನು ವಶಪಡಿಸಿಕೊಂಡಿದ್ದರು.
ಆದರೆ ಈ ಕೃತ್ಯಕ್ಕೆ ಸಹಕರಿಸಿದ ಆರೋಪಿ ಜುರೈಸ್ ಕೆ.ಎಂ. ಹಾಗೂ ಕದ್ದ ಚಿನ್ನವನ್ನು ಖರೀದಿಸಿದ ಆರೋಪಿ ಎಂ.ತಾರಾ ಕುಮಾರಿ ಎಂಬುವವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರಿ ವಕೀಲ ಮೋಹನ್ ಕುಮಾರ್ ಬಿ. ಅವರು ಸರ್ಕಾರದ ಪರವಾಗಿ ವಾದಿಸಿದ್ದರು.