ಮಂಗಳೂರಿನ ಮೀನೂಟ ಸವಿಯುತ್ತಾ ಹೊಸವರ್ಷಾಚರಣೆಗೆ ಸಿದ್ಧರಾಗಿದ್ದಾರಾ? ಇಲ್ಲಿದೆ ನಿಮಗೆ ಬೇಕಾದ ಪ್ಲಾನ್
ಮಂಗಳೂರು, ಡಿಸೆಂಬರ್ 23: ಕ್ರಿಸ್ಮಸ್ ಜೊತೆಗೆ ಹೊಸವರ್ಷಾಚರಣೆಗೆ ದಿನಗಣನೆ ಆರಂಭವಾಗಿದೆ. ವರ್ಷಾಂತ್ಯದ ದಿನ ನೆನಪಿನಂಗಳದಲ್ಲಿ ಶಾಶ್ವತ ವಾಗಿ ಉಳಿಯಲು ಈಗಾಗಲೇ ಹಲವು ಜನ ಹತ್ತಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದರಲ್ಲೂ ರಾಜ್ಯದ ಕಡಲ ನಗರಿ ಮಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ.
ಮಂಗಳೂರಿಗೆ ಬಂದು ಮೀನೂಟ ಮಾಡಿ ಹೋಗದಿದ್ದರೆ ಹೇಗೆ ಎನ್ನುವ ಜನ ಈಗಾಗಲೇ ಪ್ರವಾಸಿ ತಾಣ ಗಳ ಜೊತೆ ಒಳ್ಳೆಯ ಮೀನೂಟ ಎಲ್ಲಿ ಸಿಗುತ್ತದೆ ಅಂತಾ ಗೂಗಲ್ನಲ್ಲಿ ಜಾಲಾಡಿದ್ದಾರೆ. ಹಾಗಾದರೆ ವರ್ಷಾಂತ್ಯದಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಯಾವ ಪ್ರದೇಶಗಳಿಗೆ ಭೇಟಿ ನೀಡಬಹುದು. ಯಾವ ಹೊಟೇಲ್ಗಳಲ್ಲಿ ಮೀನೂಟ ಸವಿಯಬಹುದು ಎಂಬುವುದರ ವಿಸ್ತಾರವಾದ ಮಾಹಿತಿ ಇಲ್ಲಿದೆ ನೋಡಿ.

ಮಂಗಳೂರು ಅಂದಾಕ್ಷಣ ರಪ್ ಅಂತಾ ಪ್ರವಾಸಿಗರಿಗೆ ಕಣ್ಣೆದುರು ಬರೋದು ಬೀಚ್ಗಳು. ಮಂಗಳೂರಿನ ಪ್ರಸಿದ್ಧ ಬೀಚ್ಗಳಲ್ಲಿ ಪಣಂಬೂರು ಬೀಚ್ ಕೂಡಾ ಒಂದು. ಈಗಾಗಲೇ ಬೀಚ್ ಹೊಸವರ್ಷಾಚರಣೆಗೆ ಬರುವ ಪ್ರವಾಸಿಗರಿಗೆ ಸಿದ್ಧವಾಗಿದೆ. ಖಾಸಗಿ ಮತ್ತು ಸರ್ಕಾರ ಸಹಭಾಗಿತ್ವದಲ್ಲಿ ಬೀಚ್ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಸಾಹಸ ಕ್ರೀಡೆ ಗಳನ್ನು ಅಳವಡಿಸಲಾಗಿದೆ
ಫ್ಲೋಟಿಂಗ್ ಬ್ರಿಡ್ಜ್, ಪ್ಯಾರಾ ಸೇಲಿಂಗ್, ಸೇರಿದಂತೆ ವಿವಿಧ ಸಾಹಸ ಮಯ ಕ್ರೀಡೆಗಳನ್ನು ಪಣಂಬೂರು ಬೀಚ್ನಲ್ಲಿ ಅಳವಡಿಸಲಾಗಿದೆ. ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರಿಗೆ ಕಡಲಿನಲ್ಲಿ ಈಜಾಟ ಮಾಡಬಹುದು. ಬೀಚ್ ಬದಿಯಲ್ಲಿ ತರಹೇವಾರಿ ಮೀನಿನ ಖಾದ್ಯಗಳು ಸಿಗೋದರಿಂದ ಪಣಂಬೂರು ಬೀಚ್ ಪ್ರವಾಸಿಗರ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಪಣಂಬೂರು ಬೀಚ್ ಮಂಗಳೂರು ನಗರದಿಂದ ಹನ್ನೆರಡು ಕೀಮೀ ಅಂತರದಲ್ಲಿದೆ.

ಇನ್ನು ಮಂಗಳೂರಿನ ತಣ್ಣೀರು ಬಾವಿ ಬೀಚ್ ಕೂಡಾ ಪ್ರವಾಸಿಗರ ಫೇವರೇಟ್ ಸ್ಥಳಗಳಲ್ಲಿ ಒಂದಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯುಳ್ಳ ಈ ಬೀಚ್ನಲ್ಲಿ ಈಜಾಡೋದು ಅಪಾಯಕಾರಿ. ಹೀಗಾಗಿ ಪ್ರವಾಸಿಗರು ಕಡಲ ದಡದಲ್ಲಿ ಕೂತು ಸಮುದ್ರದ ಅಲೆಗಳ ಏರಿಳಿತ, ಅಲೆಗಳ ಸದ್ದು ಅಸ್ವಾದಿಸಲು ಇಚ್ಛೆ ಪಡುವವರು ತಣ್ಣೀರುಬಾವಿ ಬೀಚ್ಗೆ ಹೋಗಬಹುದಾಗಿದೆ.
ತಣ್ಣೀರುಬಾವಿ ಮೂರು ಕಿ.ಮೀ ಅಂತರದಲ್ಲಿ ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಇದ್ದು, ಕಡಲದಡದ ಪಾರ್ಕ್ನಲ್ಲಿ ಕಾಲಕಳೆಯಬಹುದಾಗಿದೆ.ಇನ್ನು ಮಂಗಳೂರು ನಗರ ಹೊರವಲಯದ ಸುರತ್ಕಲ್ನ ಗೊಡ್ಡೆಕೊಪ್ಪಲು ಪ್ರದೇಶದಲ್ಲಿ ಸಮುದ್ರದಲ್ಲಿ ಕೆಟ್ಟುನಿಂತಿರುವ ಹಡಗನ್ನು ಕಾಣಲು, ಫೋಟೋಶೂಟ್ಗಾಗಿ ಉತ್ತಮ ಜಾಗ ಇದಾಗಿದೆ. ಸೋಮೇಶ್ವರದಿಂದ ಪಡುಬಿದ್ರಿ ತನಕದ ಕಡಲಕಿನಾರೆ ಅದ್ಭುತ ಸೌಂದರ್ಯದ ಗಣಿಯಾಗಿದ್ದು, ವರ್ಷಾಂತ್ಯವನ್ನು ಅವಿಸ್ಮರಣೀಯವಾಗಿ ಕಳೆಯಬಹುದಾಗಿದೆ.

ಪಿಲಿಕುಳ ಜೈವಿಕ ಉದ್ಯಾನವನ
ಮಂಗಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಪಿಲಿಕುಳದ ಜೈವಿಕ ಉದ್ಯಾನವನ ದಲ್ಲಿ ನಾನಾ ಜಾತಿಯ ಪ್ರಾಣಿ-ಪಕ್ಷಿಗಳು, ಉರಗ-ಸರೀಸೃಪಗಳಿದ್ದು ಮಕ್ಕಳಿಗೆ ಇಷ್ಟವಾಗುವ ಪ್ರದೇಶಗಳಲ್ಲಿ ಒಂದಾಗಿದೆ.. ಇಡೀ ಕುಟುಂಬ ಪಿಲಿಕುಳದಲ್ಲಿ ಸುತ್ತಾಡಿ, ಪ್ರಾಣಿ-ಪಕ್ಷಿಗಳನ್ನು ನೋಡುತ್ತಾ ದಿನದ ಅರ್ಧದಿನವನ್ನು ಸಂಭ್ರಮದಿಂದ ಕಳೆಯಬಹುದಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದ ಸನಿಹದಲ್ಲಿ ಮಾನಸ ವಾಟರ್ ಅಮ್ಯೂಸಿಂಗ್ ಪಾರ್ಕ್ ಇದ್ದು, ಹೊಸ ಕ್ರೀಡೆಗಳು ಅಮ್ಯೂಸಿಂಗ್ ಪಾರ್ಕ್ಗೆ ಸೇರ್ಪಡೆಯಾಗಿದೆ. ಹೊಸದಾಗಿ ಗುತ್ತಿಗೆ ಪಡೆದ ಕಂಪೆನಿ ಪಾರ್ಕ್ಗೆ ನೂತನ ಟಚ್ ನೀಡಿದ್ದು, ಪೈಸಾ ವಸೂಲ್ ಗ್ಯಾರಂಟಿ ಅನ್ನೋದು ಮಾನಸ ಅಮ್ಯೂಸ್ ಪಾರ್ಕ್ ಗೆ ಭೇಟಿ ನೀಡಿದ ಪ್ರವಾಸಿಗರ ಮಾತಾಗಿದೆ. ಪಿಲಿಕುಳ ಝೂನಿಂದ ಕಾಲ್ನಡಿಗೆಯ ದೂರದಲ್ಲಿ ವಾಟರ್ ಸ್ಪೋರ್ಟ್ಸ್ ಸೆಂಟರ್, ಪಾರ್ಕ್, ಲೇಕ್ ಸ್ಪಾಟ್ ಇರೋದರಿಂದ ವಾಮಂಜೂರಿನ ಪಿಲಿಕುಳ ಪ್ರದೇಶ ಪ್ರವಾಸಿಗರಿಗೆ ಸಂಪೂರ್ಣ ಮನರಂಜನೆಯ ಪ್ಯಾಕೇಜ್ ನೀಡಬಹುದು.
ದಕ್ಷಿಣ ಕನ್ನಡ ಕಡಲು ಮತ್ತು ಪಶ್ಚಿಮ ಘಟ್ಟ ಪ್ರದೇಶವನ್ನು ಹೊಂದಿರೋದರಿಂದ ಚಾರಣ ಪ್ರಿಯರು ಕುದುರೆಮುಖ, ಕುಮಾರಪರ್ವತ, ಗಡಾಯಿಕಲ್ಲು ಸೇರಿದಂತೆ ಪೃಕೃತಿ ರಮಣೀಯ ಪ್ರದೇಶಗಳಿಗೆ ಚಾರಣ ಮಾಡಲು ಯೋಜನೆ ರೂಪಿಸಿದ್ದಾರೆ.
ಮಂಗಳೂರಿನ ಬೆಸ್ಟ್ ಹೋಟೆಲ್ಗಳು
ಇನ್ನು ಮಂಗಳೂರಿಗೆ ಬರುವ ಪ್ರವಾಸಿಗರು ಒಳ್ಳೆಯ ಊಟದ ಹೋಟೆಲ್ಗಳನ್ನು ಹೆಚ್ಚಾಗಿ ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ. ಮಂಗಳೂರು ನಗರದಲ್ಲಿ ಮೀನು ಪ್ರಿಯರಿಗೆ ಬಂದರು ಪ್ರದೇಶದಲ್ಲಿರುವ ಹೊಟೇಲ್ ನಾರಾಯಣ, ನವಭಾರತ್ ಸರ್ಕಲ್ ಬಳಿಯಿರುವ ಮಚ್ಲಿ, ಹಂಪನಕಟ್ಟೆಯಲ್ಲಿರುವ ಅಕ್ಕಮಕ್ಕನ ಹೋಟೆಲ್, ಪಡೀಲ್ ಬಳಿ ಇರುವ ಹೊಟೇಲ್ ಉನ್ಕ-ತಿನ್ಕ, ಬಲ್ಮಠದಲ್ಲಿರುವ ಕೇಸರಿ ಮಿಲಿಟರಿ ಹೋಟೆಲ್ ಸೇರಿದಂತೆ ಹಲವು ಹೊಟೇಲ್ಗಳು ಉತ್ತಮ ಆಯ್ಕೆಯಾಗಿದೆ. ಐಸ್ ಕ್ರೀಂ ಪ್ರೀಯರು ವಿಶ್ವವಿಖ್ಯಾತ ಪಬ್ಬಾಸ್ ಐಸ್ ಕ್ರೀಂಗೆ ಭೇಟಿ ನೀಡಬಹುದಾಗಿದೆ. ಎಳನೀರಿನ ಐಸ್ ಕ್ರೀಂಗಾಗಿ ಮಂಗಳೂರು ನಗರದ ಅಡ್ಯಾರ್ ಕಟ್ಟೆ ಬಳಿಯಿರುವ ಬೊಂಡಾ ಫ್ಯಾಕ್ಟರಿಗೆ ಭೇಟಿ ನೀಡಬಹುದಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications