ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದ ಹವಾಮಾನ ವೈಪರೀತ್ಯ
ಮಂಗಳೂರು, ಮಾರ್ಚ್ 04 : ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಹಾಟ್ ಏರ್ ಬಲೂನ್ ಹಾರಾಟವನ್ನು, ಇಂಗ್ಲೆಂಡ್ನ ಇಬ್ಬರು ಪೈಲಟ್ಗಳಾದ ಪೌಲ್ ಬುರೋಸ್, ಮಾರ್ಟಿನ್ ಕೌಲಿಂಗ್ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು.
ಹಾಟ್ ಏರ್ ಬಲೂನ್ಸ್, ಗ್ಲೈಡರ್ಸ್, ಸ್ಕೈ ಡೈವಿಂಗ್, ಡ್ರೋನ್ಸ್ ಮತ್ತು ಪ್ಯಾರಾ ಮೋಟರಿಂಗ್ ಮೊದಲಾದ ಆಕಾಶಕಾಯ ಸಾಹಸಗಳ ಹಾರಾಟ ಆಯೋಜಿಸಲಾಗಿತ್ತು. ಹವಾಮಾನ ವೈಪರೀತ್ಯದ ಕಾರಣ ಆಕಾಶದೆತ್ತರಕ್ಕೆ ಹಾರಾಟ ನಡೆಸುವ ಯೋಜನೆಯನ್ನು ಕೈಬಿಡಲಾಯಿತು. ಆದರೆ ಕೆಳಮಟ್ಟದಲ್ಲಿ ಹಾರಾಟ ನಡೆಸಲಾಯಿತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಿರುವುದು ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಯಿತು.

ಅಂತಾರಾಷ್ಟ್ರೀಯ ಮಟ್ಟದ ಪರಿಣಿತರ ತಂಡ ಈ ಸಾಹಸದಲ್ಲಿ ಇತರ ನಗರಗಳಲ್ಲಿ ಕೂಡ ನಡೆಸಲಿದ್ದು, ಮಂಗಳೂರಿನ ಬಳಿಕ ಮಾ.8ರಂದು ಕೊಚ್ಚಿನ್ನಲ್ಲಿ, ಮಾ.10ರಂದು ಕೊಯಮತ್ತೂರಿನಲ್ಲಿ ಮತ್ತು ಮಾ.12ರಂದು ಬೆಂಗಳೂರಿನಲ್ಲಿ ಈ ಪ್ರಾಯೋಗಿಕ ಆಕಾಶಕಾಯ ಸಾಹಸಗಳ ಹಾರಾಟ ನಡೆಯಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದಕ್ಷಿಣ ಭಾರತದ ಮೂರು ರಾಜ್ಯಗಳ ನಾಲ್ಕು ನಗರಗಳಲ್ಲಿ ಹಾಟ್ ಏರ್ ಬಲೂನಿಂಗ್ ಆಯೋಜಿಸಲಾಗಿದೆ.












Click it and Unblock the Notifications