ಮಂಡ್ಯ: ರೈತರ ಜತೆ ಕುಳಿತು ಸಿಎಂಗೆ ಪ್ರಶ್ನೆ ಎಸೆದ ಯಡಿಯೂರಪ್ಪ
ಮಂಡ್ಯ, ಸೆ. 11: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಭಾನುವಾರದಂದು ರೈತರ ಜತೆ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾಣಿಸಿಕೊಂಡಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಗ್ಯಾಲರಿ: ಕಾವೇರಿಗಾಗಿ ಸಿಡಿದೆದ್ದ ಕರ್ನಾಟಕ, ಯಶಸ್ವಿ ಬಂದ್
ಮಂಡ್ಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡರ ನೇತೃತ್ವದಲ್ಲಿ ಜಿಲ್ಲಾಡಳಿತ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಜಲ ಸಂಪನ್ಮೂಲ ಸಚಿವರೊಂದಿಗೆ ನಾನು ಮಾತನಾಡಿದ್ದೇನೆ. ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದಾರೆ.[ಫಾಲಿ ಎಸ್.ನಾರಿಮನ್ ವಿರುದ್ಧ ಅಕ್ರೋಶವೇಕೆ?]
ಆದರೆ,
ಸದ್ಯ
ಪ್ರಕರಣ
ಸುಪ್ರೀಂಕೋರ್ಟಿನಲ್ಲಿರುವುದರಿಂದ
ಕೇಂದ್ರ
ಸರ್ಕಾರ
ಕೂಡಾ
ಮಧ್ಯ
ಪ್ರವೇಶಿಸುವಂತಿಲ್ಲ.
ಸಿದ್ದರಾಮಯ್ಯ
ಅವರ
ಸರ್ಕಾರ
ಎಚ್ಚರಿಕೆಯಿಂದ
ನಡೆದುಕೊಳ್ಳಬೇಕಿತ್ತು
ಎಂದು
ಯಡಿಯೂರಪ್ಪ
ಹೇಳಿದರು.[ಪ್ರತಿ
ಎಕರೆಗೆ
25
ಸಾವಿರ
ರು.
ಪರಿಹಾರ
ಘೋಷಿಸಿ
:
ಮಾದೇಗೌಡ]
Press Statement by Sri. @BSYBJP, State President, BJP Karnataka. #KarnatakaBandh #BJP pic.twitter.com/4YQTAGOVsP
— BJP Karnataka (@BJP4Karnataka) September 9, 2016
ಸರ್ವಪಕ್ಷ
ಸಭೆಯಲ್ಲಿ
ತಮಿಳುನಾಡಿಗೆ
ಕಾವೇರಿ
ನೀರು
ಹರಿಸದಂತೆ
ಒಕ್ಕೊರಲ
ನಿರ್ಣಯ
ಕೈಗೊಳ್ಳಲಾಗಿತ್ತು.
ಆದರೆ,
ಕೋರ್ಟಿನ
ಮುಂದೆ
ಪ್ರತಿದಿನ
15,000
ಕ್ಯೂಸೆಕ್ಸ್
ನೀರು
ಹರಿಸುವುದಾಗಿ
ಹೇಳಿದ್ದೇಕೆ?
ನೀರು
ಬಿಡುವುದಿಲ್ಲ
ಎಂದು
ಹೇಳಿ,
ನೀರು
ಬಿಡುತ್ತಿರುವುದೇಕೆ?
ಕಾಂಗ್ರೆಸ್
ಸರ್ಕಾರ
ದ್ವಂದ್ವ
ನೀತಿ
ಅನುಸರಿಸಿ,
ರೈತರ
ಪಾಲಿಗೆ
ಮುಳುವಾಗಿದೆ
ಎಂದು
ಮಾಜಿ
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ
ಅವರು
ಪ್ರಶ್ನಿಸಿದ್ದಾರೆ.
[ಬೂದಿ
ಮುಚ್ಚಿದ
ಕೆಂಡದಂತಿರುವ
ಮಂಡ್ಯ,
ಇಳಿಯದ
ಕಾವು]
ಸ್ವಯಂ ಪ್ರೇರಣೆಯಿಂದ ತಮಿಳುನಾಡಿಗೆ ನೀರು
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣ ಕುರಿತು ವಾಸ್ತವಾಂಶದ ಅಧ್ಯಯನಕ್ಕಾಗಿ ರಾಜ್ಯಕ್ಕೆ ತಜ್ಞರ ತಂಡ ಕಳುಹಿಸಲು ಸುಪ್ರೀಂಕೋರ್ಟ್ ಒಪ್ಪಿತ್ತು. ಆದರೆ, ರಾಜ್ಯ ಸರ್ಕಾರವೇ ಸ್ವಯಂ ಪ್ರೇರಣೆಯಿಂದ ತಮಿಳುನಾಡಿಗೆ ಪ್ರತಿ ದಿನ 10 ಸಾವಿರ ಕ್ಯೂಸೆಕ್ ನೀರು ಹರಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದು ತಪ್ಪು ಎ೦ದು ಯಡಿಯೂರಪ್ಪ ಹೇಳಿದ್ದಾರೆ.
ಸುಪ್ರೀಂಕೋರ್ಟಿಗೆ ಸರಿಯಾದ ಮಾಹಿತಿ ನೀಡಿಲ್ಲ
ರಾಜ್ಯದಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಸುಪ್ರೀಂಕೋರ್ಟಿಗೆ ಸರಿಯಾದ ಮಾಹಿತಿ ನೀಡಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ತಪ್ಪಿನಿಂದಾಗಿ ರಾಜ್ಯದ ರೈತರು ಬಲಿಪಶುಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಜನತೆಗೂ ಕುಡಿವ ನೀರಿನ ಅಭಾವ ಎದುರಾಗಲಿದೆ ಎ೦ದರು.
ಪ್ರಧಾನಿ ಮಧ್ಯ ಪ್ರವೇಶ ಮಾಡ್ಬೇಕು ಅಂತೀರಾ ಏಕೆ
ಸುಪ್ರೀಂಕೋರ್ಟಿಗೆ
ಅಫಿಡವಿಟ್
ಸಲ್ಲಿಸುವ
ಮುನ್ನ
ಪ್ರಧಾನಿ
ಭೇಟಿ
ಮಾಡಿ
ಸಮಸ್ಯೆ
ಯಾಕೆ
ಮನವರಿಕೆ
ಮಾಡಲಿಲ್ಲ.
ರೈತರ
ಜೀವನದ
ಜೊತೆ
ಚೆಲ್ಲಾಟವಾಡ್ತಾ
ಇದ್ದೀರಾ?
ಮಾದೇಗೌಡರು
ಹೇಳಿದಂತೆ
ಪ್ರತಿ
ಎಕರೆಗೆ
25
ಸಾವಿರ
ಪರಿಹಾರ
ಘೋಷಿಸಬೇಕು.
ಇದಕ್ಕೆ
ನಮ್ಮ
ಬೆಂಬಲವಿದೆ.
ಸಿಎಂ
ಅವರ
ಅಕ್ಷಮ್ಯ
ಅಪರಾಧದಿಂದ
ರೈತರು
ಸಂಕಷ್ಟಕ್ಕೆ
ಸಿಲುಕಿದ್ದಾರೆ.
ಸರ್ಕಾರದ
ಖಜಾನೆ
ಹಣ
ರೈತನ
ಕಣ್ಣೀರು
ರೋಸೋಕೆ
ಆಗದಿದ್ದರೇ
ಇನ್ಯಾಕೆ
ಬೇಕು
ಎಂದು
ಗುಡುಗಿದರು.
ಕಾನೂನು ಸುವ್ಯವಸ್ಥೆ ಹಾಳಾದ್ರೆ ಸಿಎಂ ನೇರ ಹೊಣೆ
ರೈತರು
ಹಾಗೂ
ಚಳವಳಿಗಾರರ
ಮೇಲೆ
ಹೂಡಲಾಗಿರುವ
ಎಲ್ಲಾ
ಮೊಕದ್ದಮೆಗಳನ್ನು
ರಾಜ್ಯ
ಸರ್ಕಾರ
24
ಗಂಟೆಯೊಳಗೆ
ವಾಪಸ್
ಪಡೆಯಬೇಕು.
ಇಲ್ಲದಿದ್ದಲ್ಲಿ
ಚಳವಳಿಯನ್ನು
ತೀವ್ರಗೊಳಿಸಲಾಗುವುದು.
ಅದರ
ಪರಿಣಾಮ
ಎದುರಿಸಬೇಕಾಗುತ್ತದೆ
ಎಂದು
ಎಚ್ಚರಿಕೆ
ನೀಡಿದರು.
ರೈತರ
ಮೇಲೆ
ಪ್ರಕರಣ
ದಾಖಲಿಸಿರುವುದೇ
ದೊಡ್ಡ
ಅಪರಾಧ.
ತಕ್ಷಣ
ಮೊಕದ್ದಮೆ
ವಾಪಸ್
ಪಡೆಯಬೇಕು
ಎಂದ
ಅವರು,
ರೈತರು
ಯಾವುದೇ
ಕಾರಣಕ್ಕೂ
ಕಾನೂನನ್ನು
ಕೈಗೆ
ತೆಗೆದುಕೊಳ್ಳಬಾರದು.
ಶಾಂತಿಯುತವಾಗಿ
ಹೋರಾಟ
ಮಾಡಬೇಕು.