Harangi Dam: ಭಾರೀ ಮಳೆಗೆ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ, ಇಂದಿನ ವಿವರ
ಕೊಡಗು, ಜುಲೈ 11: ಜೂನ್ ಎರಡನೇ ವಾರದಿಂದಲೇ ಕೊಡಗಿನಲ್ಲಿ ಆಗಾಗ ಭಾರೀ ಮಳೆ ಆಗುತ್ತಲೇ ಇದೆ. ಇನ್ನೂ ಮಲೆನಾಡಿನ ಭಾಗದಲ್ಲಿ ಕೆಲವು ವಾರಗಳಿಂದ ಸಾಧಾರಣದಿಂದ ಭಾರೀ ಮಳೆ ಆಗುತ್ತಲೇ ಇದೆ. ಹೀಗಾಗಿ ಹಾರಂಗಿ ಸೇರಿದಂತೆ ರಾಜ್ಯದ ಕೆಲವು ಜಲಾಶಯಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಣೆ ಆಗುತ್ತಿದೆ.
ಇದೀಗ ಕೊಡಗು ಜಿಲ್ಲೆಯ ಕುಶಾಲನಗರದ ಸಮಯ ಕಾವೇರಿ ಉಪನದಿ ಹಾರಂಗಿ ಅಡ್ಡಲಾಗಿ ಹದಗೂರಿನಲ್ಲಿ ನಿರ್ಮಿಸಲಾಗಿರುವ ಹಾರಂಗಿ ಜಲಾಶಯದಲ್ಲಿ ಗುರುವಾರ ಅತ್ಯಧಿಕ ನೀರು ಕಂಡು ಬಂದಿದೆ. ಬುಧವಾರ ಡ್ಯಾಂ ನಿಂದ ಬಿಡುಗಡೆ ಮಾಡಿದರೂ ಸಹ ಗುರುವಾರ 2059 ಕ್ಯೂಸೆಕ್ಸ ಒಳಹರಿವು ಕಂಡು ಬಂದಿದೆ.

ನೆನ್ನೆ ಬುಧವಾರ 2377 ಕ್ಯೂಸೆಕ್ ಒಳಹರಿವು ನೀರಿತ್ತು. ಈ ಜಲಾಶಯ ಭರ್ತಿಗೆ ಹತ್ತು ಅಡಿ ನೀರು ತಂಬುವುದು ಮಾತ್ರವೇ ಬಾಕಿ ಇತ್ತು. ಅಷ್ಟಲ್ಲಾಗಲೇ ನೀರು ಬಿಡುಗಡೆ ಮಾಡಲಾಗಿದೆ. ಹೀಗಿದ್ದರೂ ಸಹ ಗುರುವಾರ ಅತ್ಯಧಿಕ ಒಳಹರಿವು ಕಂಡು ಬಂದಿದೆ.
ಹಾರಂಗಿ ಡ್ಯಾಂ ಒಟ್ಟು ಸಾಮರ್ಥ್ಯ 871 ಟಿಎಂಸಿ
ಈ ಜಲಾಶಯದ ಒಟ್ಟು ಸಾಮರ್ಥ್ಯ 871 ಟಿಎಂಸಿ ಇದ್ದು, ಸದ್ಯ 868 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೇನು ಭರ್ತಿ ಆಗಲು ಕೆಲವೇ ಅಡಿಗಳು ಬಾಕಿ ಇದೆ. ಅದಾಗಲೇ ನದಿ ಹಾಗೂ ಜಲ ಮೂಲಗಳಿಗೆ ನೀರು ಬಿಡಲಾಗಿದೆ. ನೀರು ಬಿಟ್ಟ ಹಿನ್ನೆಲೆಯಲ್ಲಿ ತೀರದ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮಳೆಗಾಲ ಇನ್ನೂ ಎರಡೂವರೆ ತಿಂಗಳು ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಲಾಶಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಲಿವೆ. ಇನ್ನು ರಾಜ್ಯದ ಇತರ ಕೆಲವು ಜಲಾಶಯಗಳ ಇಂದಿನ (ಜುಲೈ 11) ನೀರಿನ ಮಟ್ಟ ಇಲ್ಲಿದೆ.
ಭದ್ರಾ ಜಲಾಶಯ
ಒಳ ಹರಿವು : 6246 ಕ್ಯೂಸೆಕ್
ಹೊರ ಹರಿವು : 158 ಕ್ಯೂಸೆಕ್
ಒಟ್ಟು ಸಾಮರ್ಥ್ಯ : 186 ಅಡಿ
ಇಂದಿನ ನೀರಿನ ಮಟ್ಟ 136.0 ಅಡಿ
ಒಟ್ಟು ಸಾಮರ್ಥ್ಯ: 71.5 ಟಿಎಂಸಿ
ಲಿಂಗನಮಕ್ಕಿ ಜಲಾಶಯ
ಒಳ ಹರಿವು : 13128 ಕ್ಯೂಸೆಕ್
ಹೊರ ಹರಿವು : 3422.14 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1772.05 ಅಡಿ
ಒಟ್ಟು ಸಾಮರ್ಥ್ಯ : 151.64 ಟಿಎಂಸಿ
ತುಂಗಾ ಜಲಾಶಯ
ಒಳ ಹರಿವು : 11619 ಕ್ಯೂಸೆಕ್
ಹೊರ ಹರಿವು : 11619 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು ಸಾಮರ್ಥ್ಯ : 3.24 ಟಿಎಂಸಿ
ಹೇಮಾವತಿ ಜಲಾಶಯ
ಒಳಹರಿವು - 6767 ಕ್ಯೂಸೆಕ್
ಹೊರಹರಿವು - 250 ಕ್ಯೂಸೆಕ್
ಇಂದಿನ ಮಟ್ಟ - 2899 ಅಡಿ
ಗರಿಷ್ಠ ಮಟ್ಟ - 2922 ಅಡಿ
ಒಟ್ಟು ಸಾಮರ್ಥ್ಯ - 37.103 ಟಿಎಂಸಿ
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications