ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ
ಪುತ್ತೂರು, ಆಗಸ್ಟ್ 24: ಶಿಕ್ಷಣ ವ್ಯಾಪಾರವಾಗಿಬಿಟ್ಟಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ, ಕೆಲವು ಖಾಸಗಿ ವಿದ್ಯಾ ಸಂಸ್ಥೆಗಳು ಈ ಮಾತನ್ನು ಸುಳ್ಳು ಮಾಡುವತ್ತ ಮಹತ್ವದ ಮಾನವೀಯ ಹೆಜ್ಜೆ ಇಟ್ಟಿವೆ.
ಕೊಡಗಿನ ಪ್ರವಾಹದಿಂದ ತೊಂದರೆಗೊಳಪಟ್ಟ ಮಕ್ಕಳಿಗೆ ಒಂದುವರ್ಷದ ಕಾಲ ಉಚಿತವಾಗಿ ಶಿಕ್ಷಣ ನೀಡಲು ಕೆಲವು ಖಾಸಗಿ ವಿದ್ಯಾಸಂಸ್ಥೆಗಳು ಮುಂದೆ ಬಂದಿದೆ.
ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಈ ಮಾನವೀಯ ನಿರ್ಧಾರ ಕೈಗೊಂಡಿದ್ದು, 5 ವರ್ಷದ ವಿದ್ಯಾರ್ಥಿಗಳಿಂದ ಹಿಡಿದು ಎಂಜಿನಿಯರಿಂಗ್ ವರೆಗೆ ಒಂದು ವರ್ಷದ ಕಾಲ ಈ ವಿದ್ಯಾ ಸಂಸ್ಥೆಗಳಿಗೆ ಉಚಿತವಾಗಿ ಅಡ್ಮಿಷನ್ ಪಡೆದು ಶಿಕ್ಷಣ ಪಡೆಯಬಹುದು.

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಐದನೇ ತರಗತಿಯಿಂ ಎಂಜಿನಿಯರ್ ಕೋರ್ಸ್ ವರೆಗೂ ಪ್ರವಾಹದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದು. ಪ್ರಗತಿ ವಿದ್ಯಾಸಂಸ್ಥೆಯಲ್ಲಿ 8 ಮತ್ತು 9 ನೇ ತರಗತಿ ಮಕ್ಕಳು ಉಚಿತ ವಿದ್ಯಾಭ್ಯಾಸ ಪಡೆಯಬಹುದು.












Click it and Unblock the Notifications