ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?
ಬೆಂಗಳೂರು, ಜು.8 : ಕರ್ನಾಟಕದವರಾದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದು ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ತವರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ವಿವರಗಳು ಇಲ್ಲಿವೆ.
ಬೆಂಗಳೂರು ನಗರದ ಸುತ್ತಲಿನ ಊರುಗಳಿಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ರೈಲು ವಿಕಾಸ ನಿಗಮ ಸ್ಥಾಪಿಸುವ ಚಿಂತನೆ ಇದೆ ಎಂದು ಹಿಂದೆ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು. ಬೆಂಗಳೂರಿಗೆ ಸಬ್ ಅರ್ಬನ್ ಉಪನಗರಿ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಸದಾನಂದ ಗೌಡರು, ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. [ರೈಲ್ವೆ ಬಜೆಟ್ ಮುಖ್ಯಾಂಶಗಳನ್ನು ಇಲ್ಲಿ ನೋಡಿ]
ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ, ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ, ಬೆಂಗಳೂರಿಗೆ ಸಬ್ ಅರ್ಬನ್ ರೈಲು, ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್ ಟರ್ಮಿನಲ್ ಸ್ಥಾಪನೆ ಸೇರಿದಂತೆ ಸದಾನಂದ ಗೌಡರು ಹಲವಾರು ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಅವುಗಳ ವಿವರ ಇಲ್ಲಿದೆ. ['ಸದಾನಂದ' ಗೌಡ್ರು ಬಿಟ್ಟಿದ್ದು 58 ಹೊಸ ರೈಲುಗಳು]

ಎಕ್ಸ್ಪ್ರೆಸ್ ರೈಲುಗಳು
* ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ (ಪ್ರತಿದಿನ)
* ಬೆಂಗಳೂರು-ಶಿವಮೊಗ್ಗ ಎಕ್ಸ್ಪ್ರೆಸ್ (2 ವಾರಕ್ಕೊಮ್ಮೆ)
* ಬೀದರ್-ಮುಂಬೈ ಎಕ್ಸ್ಪ್ರೆಸ್ (ವಾರಕ್ಕೊಮ್ಮೆ)
* ಟಾಟಾನಗರ ಬೈಯಪ್ಪನಹಳ್ಳಿ (ಬೆಂಗಳೂರು) ಎಕ್ಸ್ಪ್ರೆಸ್ (ವಾರಕ್ಕೊಮ್ಮೆ)
* ಬೆಂಗಳೂರು-ಮೈಸೂರು-ಚೆನ್ನೂ ನಡುವೆ ಹೈಸ್ಪೀಡ್ ರೈಲು

ಪ್ಯಾಸೆಂಜರ್ ರೈಲುಗಳು
* ಧಾರವಾಡ-ದಾಂಡೇಲಿ ಪ್ಯಾಸೆಂಜರ್ (ಪ್ರತಿದಿನ) ಅಳ್ನಾವರ ಮೂಲಕ
* ಬೈಂದೂರು-ಕಾಸರಗೋಡು ಪ್ಯಾಸೆಂಜರ್ (ಪ್ರತಿದಿನ)
* ಯಶವಂತಪುರ-ತುಮಕೂರು ಪ್ಯಾಸೆಂಜರ್ (ಪ್ರತಿದಿನ)

MEMU ಮತ್ತು DEMU ಸೇವೆಗಳು
MEMU ಸೇವೆ [Mainline Electric Multiple Unit]
* ಬೆಂಗಳೂರು-ರಾಮನಗರ ವಾರಕ್ಕೆ 6 ದಿನ (3 ಜೋಡಿ)
DEMU ಸೇವೆ [Diesal electric multiple unit]
* ಬೆಂಗಳೂರು-ನೆಲಮಂಗಲ (ಪ್ರತಿದಿನ)
* ಯಶವಂತಪುರ-ಹೊಸೂರು (ವಾರಕ್ಕೆ 6 ದಿನ)

ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು
* ರಾಮೇಶ್ವರದಿಂದ ಬೆಂಗಳೂರು ಮಾರ್ಗವಾಗಿ ಹರಿದ್ವಾರಕ್ಕೆ ರೈಲು
* ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು ವ್ಯವಸ್ಥೆ
* ವಾರಕ್ಕೊಮ್ಮೆ ಪಾಟ್ನಾ ಬೆಂಗಳೂರು ಎಕ್ಸ್ ಪ್ರೆಸ್ ರೈಲು
* ಹೌರಾ-ಯಶವಂತಪುರ ಎಸಿ ಎಕ್ಸ್ ಪ್ರೆಸ್ ವಾರಕ್ಕೊಮ್ಮೆ
* ಬೆಂಗಳೂರು ವಾರಣಾಸಿ ಮಾರ್ಗವಾಗಿ ಹರಿದ್ವಾರಕ್ಕೆ ರೈಲು
* ಬೆಂಗಳೂರು-ಚೆನ್ನೈ ಪ್ರತಿದಿನ ಬಂಗಾರಪೇಟೆ ಮಾರ್ಗ
* ಹುಬ್ಬಳ್ಳಿ-ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ಪ್ರತಿದಿನ

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಹೊಸ ರೈಲು
* ತಿಪಟೂರು-ದುದ್ದಾ ನಡುವೆ ಹೊಸ ಮಾರ್ಗ
* ಬೀದರ್-ಯಶವಂತಪುರ ಪ್ರತಿದಿನ
* 18 ಕಿಮೀ ಬೀರೂರು-ಅಜ್ಜಂಪುರಕ್ಕೆ ಜೋಡಿ ಮಾರ್ಗ
* ಬೈಂದೂರು-ಕಾಸರಗೋಡು ಪ್ಯಾಸೆಂಜರ್ ರೈಲು
* ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್ ಸೆಂಟರ್
* ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ
* ಬೆಂಗಳೂರು-ನೆಲಮಂಗಲ ಪ್ಯಾಸೆಂಜರ್ ರೈಲು
* ಬೆಂಗಳೂರು-ಮಂಗಳೂರು ಹೊಸ ಎಕ್ಸ್ ಪ್ರೆಸ್ ರೈಲು

ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ
* ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ
* ಬೆಂಗಳೂರು ಸುತ್ತಮುತ್ತ ಲೋಕಲ್ ರೈಲು
* ಬೆಂಗಳೂರು-ರಾಮನಗರ ವಾರಕ್ಕೆ 6 ದಿನ
* ಗಬ್ಬೂರು-ಬಳ್ಳಾರಿ ಹೊಸ ರೈಲು
* ಬಾಗಲಕೋಟೆ-ವಿಜಾಪುರ-ಸೊಲ್ಲಾಪುರ ಟೂರಿಸ್ಟ್ ರೈಲು
* ಕಾಮಾಕ್ಯ - ಬೆಂಗಳೂರು ನಡುವೆ ಪ್ರೀಮಿಯಂ ರೈಲು
* ಬೆಂಗಳೂರು - ಮಂಡ್ಯ ನಡುವೆ ಪ್ರತಿದಿನ ರೈಲು

ಮಂಗಳೂರು-ಉಳ್ಳಾಲ-ಸುರತ್ಕಲ್ ಜೋಡಿ ಮಾರ್ಗ
* ರಾಮೇಶ್ವರ -ಬೆಂಗಳೂರು-ಅಯೋಧ್ಯೆ ನಡುವೆ ಹೊಸ ರೈಲು
* ವಾರಕ್ಕೊಮ್ಮೆ ಜೈಪುರ-ಬೆಂಗಳೂರು ನಡುವೆ ಹೈಸ್ಪೀಡ್ ರೈಲು
* ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೊಸ ರೈಲು
* ಮಂಗಳೂರು-ಉಳ್ಳಾಲ-ಸುರತ್ಕಲ್ ಜೋಡಿ ಮಾರ್ಗ

ಚನ್ನರಾಯಪಟ್ಟಣಕ್ಕೆ ಹೊಸ ಮಾರ್ಗ
* ಚನ್ನರಾಯಪಟ್ಟಣಕ್ಕೆ ಹೊಸ ಮಾರ್ಗ
* ಬೆಂಗಳೂರು - ಶಿವಮೊಗ್ಗ ಎಕ್ಸ್ಪ್ರೆಸ್ ರೈಲು ವಾರಕ್ಕೆ ಎರಡು ಬಾರಿ
* ಯಶವಂತಪುರ - ಜೈಪುರ ಸಿಟಿ ನಡುವೆ ಹವಾನಿಯಂತ್ರಿತ ರೈಲು
* ಏರ್ಪೋರ್ಟ್ ಮಾದರಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications