Get Updates
Get notified of breaking news, exclusive insights, and must-see stories!

ಕನ್ನಡ ಪರ ಹೋರಾಟಗಾರರಿಗೆ ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ: ಕರವೇ ಆಕ್ರೋಶ!

ಕನ್ನಡ ಚಳವಳಿಗಾರರ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬಹಿರಂಗವಾಗಿ ಘೋಷಿಸಿದ್ದರು. ಒಂದು ತಿಂಗಳು ಕಳೆದರೂ ಆ ದಿಶೆಯಲ್ಲಿ ಯಾವುದೇ ಸೂಚನೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ಘೋಷಣೆ ಕೇವಲ ಘೋಷಣೆಯಾಗಿ ಉಳಿದುಬಿಡುವ ಲಕ್ಷಣ ಕಂಡುಬರುತ್ತಿದೆ. ಕರ್ನಾಟಕ ಸರ್ಕಾರದ ಕೆಲವು ಸಚಿವರಿಗೆ ಕನ್ನಡ ಹೋರಾಟಗಾರರ ಮೊಕದ್ದಮೆಗಳನ್ನು ಹಿಂಪಡೆಯುವಲ್ಲಿ ಆಸಕ್ತಿ ಇಲ್ಲವೆಂಬಂತೆ ತೋರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ (Narayanagowdru T.A.) ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರೂ, ಮುಖಂಡರೂ ಎದುರಿಸುತ್ತಿರುವ ಮೊಕದ್ದಮೆಗಳನ್ನು ಹಿಂಪಡೆಯುತ್ತವೆ. ತಮ್ಮ ಪರಿವಾರದ ಮುಖಂಡರ ಮೇಲಿರುವ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನೂ ಹಿಂಪಡೆಯಲಾಗುತ್ತದೆ. ಆದರೆ ಈ ನಾಡು-ನುಡಿಗಾಗಿ ಹೋರಾಡುವ ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಲು ಯಾರಿಗೂ ಮನಸ್ಸಾಗುವುದಿಲ್ಲ. ಕನ್ನಡ ಚಳವಳಿ ಮತ್ತು ಕನ್ನಡ ಚಳವಳಿಗಾರರ ಬಗ್ಗೆ ಇವರಿಗಿರುವ ತಿರಸ್ಕಾರ ಮತ್ತು ತಾತ್ಸಾರ ಮನೋಭಾವ ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದ್ದಾರೆ.

Pro-Kannada Activists Betrayed Government U-Turn Triggers Outrage

ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಘೋಷಿಸಿದರೂ ರಾಜ್ಯ ಸರ್ಕಾರದ ಸಚಿವ ಸಂಪುಟ ಇನ್ನೂ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲವೇಕೆ? ಇದರ ಹಿಂದಿನ ಷಡ್ಯಂತ್ರ ಏನು? ಯಾವ ಶಕ್ತಿಗಳು ಸರ್ಕಾರವನ್ನು ತಡೆಯುತ್ತಿವೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೆಲ್ಲವೂ ನಮಗೆ ತಿಳಿಯದ ವಿಷಯವಲ್ಲ. ಈ ಶಕ್ತಿಗಳ ವಿರುದ್ಧ ತೀವ್ರ ಸ್ವರೂಪದ ಚಳವಳಿ ಸಂಘಟಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಮೂಲಮಂತ್ರಗಳನ್ನು ಧ್ಯೇಯವಾಗಿಟ್ಟುಕೊಂಡು ಬೀದಿಗಿಳಿದು ಹೋರಾಟ ಮಾಡಿದಾಗೆಲ್ಲ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ನಮಗೆ ನೀಡುವ "ಪ್ರಶಸ್ತಿ"ಯೇ ಮೊಕದ್ದಮೆಗಳು ಮತ್ತು ಜೈಲುವಾಸ. ನಮ್ಮ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಲ್ಲಸಲ್ಲದ ಸೆಕ್ಷನ್‌ಗಳನ್ನು ಸೇರಿಸಿ ಕನ್ನಡ ಚಳವಳಿಗಾರರನ್ನು ಕ್ರಿಮಿನಲ್‌ಗಳಂತೆ ಬಿಂಬಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯೋತ್ಸವದ ದಿನ ನೀಡಿದ ವಾಗ್ದಾನವನ್ನು ಈಡೇರಿಸಬೇಕು. ಇದು ಅವರ ನೈತಿಕ ಜವಾಬ್ದಾರಿ. ಅಪಾರ ಕನ್ನಡ ಪ್ರೇಮಿಗಳಾದ ಸಿದ್ದರಾಮಯ್ಯನವರು ವಚನಭ್ರಷ್ಟರಾಗಬಾರದು. ಕನ್ನಡ ಚಳವಳಿಗಾರರ ವಿರುದ್ಧ ನಿಂತಿರುವ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಕೊಟ್ಟ ಮಾತನ್ನು ಈಡೇರಿಸಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸರಣಿ ಚಳವಳಿಗಳನ್ನು ಆಯೋಜಿಸುತ್ತಿದೆ.

ದಿನಾಂಕ 5-12-2025 ಶುಕ್ರವಾರ ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ನಿಯೋಗದೊಂದಿಗೆ ಭೇಟಿ ಮಾಡಿ ಈ ಕುರಿತು ನಮ್ಮ ಮನವಿಯನ್ನು ಸಲ್ಲಿಸಲಿದ್ದೇವೆ. ಮುಂದೆ ನಡೆಯಲಿರುವ ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಂಡು ಹೋರಾಟಗಾರರ ಮೇಲಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಅಧಿವೇಶನಕ್ಕೆ ಮುತ್ತಿಗೆ, ಸಚಿವ-ಶಾಸಕರ ನಿವಾಸಗಳ ಮುಂದೆ ಪ್ರತಿಭಟನೆ, ಘೇರಾವ್, ಕಪ್ಪು ಬಟ್ಟೆ ಪ್ರದರ್ಶನದಂತಹ ತೀವ್ರ ಚಳವಳಿಗಳನ್ನು ನಡೆಸಲಿದ್ದೇವೆ. ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+