ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ: ರಾಜಾರಾಂ ತಲ್ಲೂರು ಬರಹ
New AI: ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
Moltbook ಎಂಬುದು ಇತ್ತೀಚೆಗೆ (ಜನವರಿ 2026) ಆರಂಭಗೊಂಡಿರುವ ಒಂದು ಸೋಷಿಯಲ್ ಮೀಡಿಯಾ. ಅದರ ವಿಶೇಷ ಎಂದರೆ, AI ಆಧರಿತ chatbotಗಳೇ ಅಲ್ಲಿ ಪೋಸ್ಟ್ ಮಾಡುವುದು, ಚರ್ಚೆ ಮಾಡುವುದು. ಅದು AI-only Social Network. ಇದು ಹೊಸ ಆವೃತ್ತಿ ಆದರೆ, ಇದರ ಹಳೇ ಆವೃತ್ತಿ ನಮ್ಮ ರಾಜಕಾರಣದಲ್ಲಿನ ಸೋಷಿಯಲ್ ಮೀಡಿಯಾ ಬಳಕೆ.

ಈಗೀಗ ಎಲ್ಲ ರಾಜಕಾರಣಿಗಳೂ FB ಅಥವಾ X ಖಾತೆ, Insta ಇತ್ಯಾದಿ ಖಾತೆಗಳನ್ನು ಹೊಂದಿರುತ್ತಾರೆ, ಅವರ ಖಾತೆಯನ್ನು ಬೇರೆ ಯಾರೋ ಗೋಸ್ಟ್ ಹ್ಯಾಂಡ್ಲಿಂಗ್ ಮಾಡುತ್ತಿರುತ್ತಾರೆ. ಅವರನ್ನೀಗ ಸೋಷಿಯಲ್ ಮೀಡಿಯಾ ಟೀಮ್ ಎಂದೇ ಗುರುತಿಸಲಾಗುತ್ತದೆ. ಈ ಗೋಸ್ಟ್ಗಳೇ ಪೋಸ್ಟ್ ಹಾಕಿಕೊಂಡು, ರಾಜಕಾರಣಿಗಳಿಗಿಂತ ಒಂದು ಕೈ ಮಿಗಿಲೆಂಬಂತೆ ರಾಜಕೀಯ ಮಾಡುವುದು ನಿಜಕ್ಕೂ ಅಸಂಗತದ ಪರಮಾವಧಿ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇವತ್ತೇ ಇಲ್ಲಿ ನೋಡಲು ಸಿಕ್ಕಿತು.
ಆಗ ನನಗೆ ತಕ್ಷಣ ನೆನಪಾದದ್ದು ಈ Moltbook!!! ಆ ಉದಾಹರಣೆ ಏನೆಂದರೆ, ಬೆಳಗ್ಗೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಲೆಟರ್ಹೆಡ್ ಬಳಸಿಕೊಂಡು, ಯಾವುದೋ ಒಬ್ಬರು ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ ಪುಟಗಳಲ್ಲೇ ಓಡಾಟ ನಡೆಸುತ್ತಿದೆ. ಸರಿಯಾಗಿ ಗಮನಿಸಿದರೆ ಅದು ಫೇಕ್ ಇರಬಹುದೆಂಬ ಯೋಚನೆ ಯಾರಿಗಾದರೂ ಬರುತ್ತದೆ. ರಾಜಕಾರಣಿಗಳೆಲ್ಲ ಇದನ್ನು ಕಂಡಿದ್ದಾರೋ ಇಲ್ಲವೋ. ಆದರೆ ಅವರ ಸೋಷಿಯಲ್ ಮೀಡಿಯಾ ಟೀಮ್ ಭರಾಟೆಯಿಂದ ಅದನ್ನು ಪ್ರಸಾರ ಮಾಡಿದೆ. ಅಲ್ಲಿಂದ ಕೆಲವು ಮೇನ್ಸ್ಟ್ರೀಮ್ ಮಾಧ್ಯಮಗಳೂ ಅದನ್ನು ಹೆಕ್ಕಿಕೊಂಡಿರುವುದನ್ನು ಗಮನಿಸಿದೆ.
ಸಂಜೆ ಹೊತ್ತಿಗೆ ಮುಖ್ಯಮಂತ್ರಿಗಳ ಸೋಷಿಯಲ್ ಮೀಡಿಯಾ ಖಾತೆಯಿಂದ ಅದು "ಫೇಕ್" ಎಂದು ಎಚ್ಚರಿಸುವ ಪ್ರಕಟಣೆ ಹೊರಬಿದ್ದಿದೆ. ವಿಷಯ ಅದಲ್ಲ. ಇಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿರುವ ಜನರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ತಂಡಗಳ ಬೇಜವಾಬ್ದಾರಿ ಗಮನಾರ್ಹ. ಅದನ್ನು ಬೇಜವಾಬ್ದಾರಿ ಎಂದು ಬೊಟ್ಟುಮಾಡುವುದು ಇನ್ನೊಂದು ತಂಡ.
ಇವೆಲ್ಲವೂ ಥರ್ಡ್ ಪಾರ್ಟಿಗಳೇ! ರಾಜಕಾರಣಿಗಳ ಹೆಸರಲ್ಲಿ ಅವರು ವ್ಯವಹರಿಸುತ್ತಿರುತ್ತಾರೆ ಮತ್ತು ತಮ್ಮ ಉದ್ಯೋಗದಾತರಿಗೆ ಒಳ್ಳೆಯ / ಕೆಟ್ಟ ಹೆಸರುಗಳನ್ನು ತರುತ್ತಿರುತ್ತಾರೆ. ರಾಜಕಾರಣಿಗಳು ಈ ಪೋಸ್ಟ್ ವ್ಯವಹಾರಗಳಲ್ಲಿ ನೇರ ಭಾಗಿ ಆಗದಿದ್ದರೂ, ಅದರ ಕ್ರೆಡಿಟ್/ಡೆಬಿಟ್ಗೆ ಅವರು ನೇರ ಹೊಣೆ. ಈ ಹಿಂದೆ ಕೂಡ ಇಂತಹ ಹಲವು ಘಟನೆಗಳು ನಡೆದದ್ದಿದೆ. ಸಹಜ ಬುದ್ಧಿಮತ್ತೆ ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆಗಳು ಅರ್ಥಾತ್, Chatbot ಗಳೇ ತಮ್ಮತಮ್ಮೊಳಗೆ ವ್ಯವಹರಿಸುವುದು ಒಂಥರಾ ಹೀಗೇ ಅಲ್ವಾ ?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications