ವಿಕಲಚೇತನರ ಯೋಜನೆಗಳಿಗೆ 80% ರಷ್ಟು ಹಣವನ್ನು ಕಡಿತಗೊಳಿಸಿದ ಕರ್ನಾಟಕ ಸರ್ಕಾರ!
ಬೆಂಗಳೂರು ನವೆಂಬರ್ 29: ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಇರುವ ಯೋಜನೆಗಳಿಗೆ ನೀಡುವ ಹಣವನ್ನು ಶೇಕಡ 80ರಷ್ಟು ಕಡಿತಗೊಳಿಸಿರುವ ಆರೋಪ ರಾಜ್ಯ ಸರ್ಕಾರದ ಮೇಲೆ ಕೇಳಿ ಬಂದಿದೆ. ಶ್ರವಣ ಸಾಧನ, ಬ್ರೈಲ್ ಕಿಟ್, ದ್ವಿಚಕ್ರ ವಾಹನಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳಿಗೆ ಕಳೆದ ವರ್ಷದ ಹಂಚಿಕೆಗಿಂತ ರಾಜ್ಯ ಸರ್ಕಾರವು ಈ ವರ್ಷ ಶೇಕಡಾ 80 ರಷ್ಟು ಹಣವನ್ನು ಕಡಿತಗೊಳಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ದುರ್ಬಲ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು... ದುರ್ಬಲ ವರ್ಗಗಳಿಗೆ ಬಜೆಟ್ನಲ್ಲಿ ಇಂತಹ ನಿಧಿ ಕಡಿತವು ಎಲ್ಲಿಯೂ ನಡೆದಿಲ್ಲ ಎಂದು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ಪ್ರಧಾನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಕಿಡಿ ಕಾರಿದ್ದಾರೆ. "ಇವು ಉಚಿತ ಯೋಜನೆಗಳಲ್ಲ. ಇವು ಸಮಾಜದ ಅತ್ಯಂತ ದುರ್ಬಲ ವರ್ಗಗಳಲ್ಲಿ ಒಂದನ್ನು ಮೇಲಕ್ಕೆತ್ತಲು ಯಾವುದೇ ಚುನಾಯಿತ ಸರ್ಕಾರದ ಬದ್ಧತೆಯಾಗಿರುತ್ತವೆ. ದುರದೃಷ್ಟವಶಾತ್ ಅಂತಹ ಅಗತ್ಯಗಳನ್ನು ಹೊಂದಿರುವ ಜನರನ್ನು ಮರೆತುಬಿಡಲಾಗಿದೆ" ಎಂದು ಅವರು ಆಕ್ರೋಶಗೊಂಡಿದ್ದಾರೆ.

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನೀಡುತ್ತಿರುವ 14 ಯೋಜನೆಗಳಲ್ಲಿ ವಿಕಲಚೇತನರಿಗೆ ಮೂಲಭೂತ ನೆರವು ನೀಡಲಾಗುತ್ತದೆ. ಇವುಗಳಲ್ಲಿ ಶ್ರವಣ ಸಾಧನಗಳು, ಊರುಗೋಲುಗಳು, ಬ್ರೈಲ್ ಕಿಟ್ಗಳು, ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರಗಳು, 10 ಮತ್ತು ಮೇಲ್ಪಟ್ಟ ತರಗತಿಯಲ್ಲಿ ಓದುತ್ತಿರುವ ದೃಷ್ಟಿಹೀನ ವಿದ್ಯಾರ್ಥಿಗಳಿಗೆ 'ಮಾತನಾಡುವ ಲ್ಯಾಪ್ಟಾಪ್', ದ್ವಿಚಕ್ರ ವಾಹನಗಳು ಮತ್ತು 'ದೈಹಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ' ಬ್ಯಾಟರಿ ಚಾಲಿತ ಗಾಲಿಕುರ್ಚಿಗಳ ವಿತರಣೆ ಸೇರಿವೆ.
ಆದರೆ ಈ ಯೋಜನೆಗಳಿಗೆ ನೀಡಬೇಕಾದ ಹಣದಲ್ಲಿ ರಾಜ್ಯ ಸರ್ಕಾರ ಶೇಕಡ 80% ರಷ್ಟು ಹಣವನ್ನು ಕಡಿತಗೊಳಿಸಿದೆ. ಕಳೆದ ವರ್ಷ ವಿಕಲಚೇತನರ ಅಗತ್ಯಗಳಿಗೆ ಸರ್ಕಾರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ನೀಡಿತ್ತು. ಆದರೆ ಈ ಮೊತ್ತದ ಹಣ ಅತ್ಯಲ್ಪವಾಗಿದ್ದರೂ 2024-25ನೇ ಸಾಲಿನಲ್ಲಿ 10 ಕೋಟಿ ರೂ.ಗೆ ಈ ಹಣವನ್ನು ಇಳಿಕೆ ಮಾಡಿದೆ. ಅಲ್ಲದೆ 22,790 ಮಂದಿ ಅರ್ಜಿ ಸಲ್ಲಿಸಿರುವ ಆರು ಯೋಜನೆಗಳನ್ನು ಕುಂಠಿತಗೊಳಿಸಲಾಗಿದೆ. ಜೊತೆಗೆ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ಗಾಲಿಕುರ್ಚಿಗಳನ್ನು ನೀಡುವ ಮತ್ತೊಂದು ಯೋಜನೆ ವಿಳಂಬವಾಗಿದೆ. ಹೀಗಾಗಿ ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ಈ ಕಡಿತವನ್ನು ಅನ್ಯಾಯ ಎಂದು ಕರೆದಿದೆ.
ಅಂಗವಿಕಲರ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ವಿಭಾಗವಾಗಿದ್ದು, ಇದು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಇದನ್ನು ಪೂರೈಸಲು ಆಗದೆ ಅರ್ಜಿದಾರರನ್ನು ಹೇಗೆ ಹೊರಗಿಡಬೇಕು ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ ಇಲಾಖೆಯು ಶ್ರವಣ ಸಾಧನಗಳು, ಊರುಗೋಲುಗಳು ಮತ್ತು ಉಪಕರಣಗಳಿಗಾಗಿ 5,173 ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಇಲಾಖೆ ಬಳಿ ನೂರಕ್ಕೂ ಹೆಚ್ಚು ಜನರಿಗೆ ಸಾಧನಗಳನ್ನು ವಿತರಿಸಲು ಹಣವಿಲ್ಲ. 553 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲಾಖೆಯ ಬಳಿ ಇಷ್ಟೊಂದು ಹಣವಿಲ್ಲ. ಹೀಗಾಗಿ 35ಕ್ಕಿಂತ ಹೆಚ್ಚು ಲ್ಯಾಪ್ಟಾಪ್ ವಿತರಣೆಯನ್ನು ಅನುಮತಿಸುತ್ತಿಲ್ಲ.
'ಸಾವಿರಾರು ಅರ್ಹ ಅರ್ಜಿಗಳಿಂದ ಬೆರಳೆಣಿಕೆಯಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡುವುದು ನಿಜಕ್ಕೂ ಕಷ್ಟ. ಬ್ರೈಲ್ ಕಿಟ್ನಂತಹ ಮೂಲಭೂತವಾದ ಅಪ್ಲಿಕೇಶನ್ಗಳನ್ನು ಕಡೆಗಣಿಸುವುದು ನಿಜವಾಗಿಯೂ ಸುಲಭವಲ್ಲ. ನಾವು ಈ ವಿಷಯವನ್ನು ಸರ್ಕಾರಕ್ಕೆ ತಿಳಿಸುತ್ತಿದ್ದೇವೆ' ಎಂದು ಅಗರ್ವಾಲ್ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಮಾತನಾಡಿ, ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದ್ದೇವೆ. "ನಾನು ವಿಷಯವನ್ನು ಪ್ರಸ್ತಾಪಿಸಿದ್ದೇನೆ ಮತ್ತು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದೇನೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂದೇಶ ಮತ್ತು ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪರಿಶೀಲಿಸುವುದಾಗಿ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ಕೆ ಅತೀಕ್ ಹೇಳಿದ್ದಾರೆ. "ನಾನು ಫೆಡರೇಶನ್ನಿಂದ ದೂರನ್ನು ಸಹ ಸ್ವೀಕರಿಸಿದ್ದೇನೆ ಮತ್ತು ನಾವು ಅವರಿಗೆ ಉತ್ತರಿಸಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ,'' ಎಂದಿದ್ದಾರೆ.












Click it and Unblock the Notifications