2018ರ ಚುನಾವಣೆಗೆ ಕಹಳೆ ಊದಿದ ಕಾಂಗ್ರೆಸ್!
ಬೆಂಗಳೂರು, ಜುಲೈ 11 : 'ಕರ್ನಾಟಕ ಸರ್ಕಾರದ ಸಾಧನೆಯನ್ನು ಮನೆ-ಮನೆಗೆ ತಲುಪಿಸಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಎಷ್ಟು ಸುಳ್ಳು ಪ್ರಚಾರ ಮಾಡಿದರೂ ಜನರು ಅವರ ಮಾತಿಗೆ ಬೆಲೆ ಕೊಡುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ
ರೇಸ್ಕೋರ್ಸ್
ರಸ್ತೆಯಲ್ಲಿರುವ
ಕಾಂಗ್ರೆಸ್
ಭವನದಲ್ಲಿ
ಭಾನುವಾರ
ಕೆಪಿಸಿಸಿ
ಕಾರ್ಯಾಧ್ಯಕ್ಷರಾಗಿ
ಮಾಜಿ
ಸಚಿವ
ದಿನೇಶ್
ಗುಂಡೂರಾವ್
ಅವರು
ಅಧಿಕಾರ
ಸ್ವೀಕರಿಸಿದರು.
ಈ
ಸಮಾರಂಭದಲ್ಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಸೇರಿದಂತೆ
ವಿವಿಧ
ನಾಯಕರು
ಪಾಲ್ಗೊಂಡಿದ್ದರು.
[ರಾಜ್ಯ
ಕಾಂಗ್ರೆಸ್
ಕಾರ್ಯಾಧ್ಯಕ್ಷರಾಗಿ
ದಿನೇಶ್
ಗುಂಡೂರಾವ್]
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಮುಂದಿನ 22 ತಿಂಗಳ ಅಧಿಕಾರವನ್ನು ಚುನಾವಣಾ ಕಾಲ ಎಂದು ತೀರ್ಮಾನಿಸಿ, ಮುಂದಿನ ಚುನಾವಣೆಯಲ್ಲೂ ನಾವೇ ಅಧಿಕಾರ ಹಿಡಿಯಲು ಕಾರ್ಯಕರ್ತರು ಕೆಲಸ ಮಾಡಬೇಕು' ಎಂದು ಕರೆ ನೀಡಿದರು. [ಕಾಂಗ್ರೆಸ್, ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತ!]
ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು..... [ಐದು ರಾಜ್ಯಗಳ ಫಲಿತಾಂಶ : ಕರ್ನಾಟಕ ಕಾಂಗ್ರೆಸ್ಸಿಗೆ ಪಾಠ!]
*
ಸರ್ಕಾರ
ಮೂರು
ವರ್ಷದಲ್ಲಿ
ನೂರಾರು
ಕಾರ್ಯಕ್ರಮಗಳನ್ನು
ನೀಡಿದೆ.
ಈ
ಬಗ್ಗೆ
ಕಿರುಹೊತ್ತಿಗೆ
ಸಿದ್ಧಪಡಿಸಿದ್ದು
ಪಕ್ಷಕ್ಕೆ
ನೀಡುತ್ತೇವೆ.
ನಾವು
ಮಾಡಿರುವ
ಸಾಧನೆಗಳನ್ನು
ಜನರ
ಮುಂದಿಡಿ.
ಇಂತಹ
ಪರಿಸ್ಥಿತಿಯಲ್ಲಿ
ಪಕ್ಷದೊಳಗೆ
ಒಡಕಿನ
ಮಾತುಗಳು
ಬಂದರೆ
ಜನರು
ಸಹಿಸುವುದಿಲ್ಲ.
*
ರಾಜ್ಯದಲ್ಲಿ
ಬಿಜೆಪಿ
ಅಧಿಕಾರ
ನಡೆಸುವಾಗ
ಮಾಡಿದ
ಅನಾಚಾರ,
ಭ್ರಷ್ಟಾಚಾರವನ್ನು
ಜನರು
ಮರೆತಿಲ್ಲ.
ಆದ್ದರಿಂದ,
2018ರ
ಚುನಾವಣೆಯಲ್ಲಿ
ಕಾಂಗ್ರೆಸ್
ಮತ್ತೆ
ಅಧಿಕಾರ
ಹಿಡಿಯಲಿದೆ.
ಬಿಜೆಪಿ
ಎಷ್ಟು
ಸುಳ್ಳು
ಪ್ರಚಾರ
ಮಾಡಿದರೂ
ಜನರು
ಅವುಗಳನ್ನು
ಕೇಳುವುದಿಲ್ಲ.
ಎಲ್ಲರೂ
ಸೇರಿ
ಪಕ್ಷವನ್ನು
ಸಂಘಟಿಸಿ,
ಮತ್ತೆ
ಅಧಿಕಾರಕ್ಕೆ
ತರಲು
ಪ್ರಯತ್ನ
ನಡೆಸೋಣ.
* ಬಿಜೆಪಿ ಅನೇಕ ರಾಜ್ಯಗಳಲ್ಲಿ ಜಯಗಳಿಸಿದ್ದೇವೆ, ಇಲ್ಲೂ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ಮತ್ತು ಉಳಿದ ನಾಯಕರು ಮಿಷನ್ - 150 ಎಂದು ಹೇಳುತ್ತಿದ್ದಾರೆ. ಜನರು ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ಅವರ ನಂಬಿಕೆಯೇ ಸುಳ್ಳು.
*
ಕೇಂದ್ರ
ಸರ್ಕಾರದ
ಎಲ್ಲಾ
ಯೋಜನೆಗಳಿಗೆ
ರಾಜ್ಯ
ಸರ್ಕಾರ
ಹಣ
ಮತ್ತು
ಜಾಗವನ್ನು
ನೀಡುತ್ತಿದೆ.
ಆದರೆ,
ಹೆಸರು
ಮಾತ್ರ
ಕೇಂದ್ರ
ಸರ್ಕಾರದವರು
ತೆಗೆದುಕೊಳ್ಳುತ್ತಿದ್ದಾರೆ.
ಸ್ವಚ್ಛ
ಭಾರತ್
ಎನ್ನುವ
ಎಲ್ಲರೂ
ಒಂದು
ದಿನ
ಪೊರಕೆ
ಹಿಡಿಯುವುದು
ಬಿಟ್ಟು
ಏನೂ
ಮಾಡಿಲ್ಲ.
*
ಪ್ಲಾಸ್ಟಿಕ್
ಸಂಶೋಧನಾ
ಘಟಕಕ್ಕೆ
ಹಣ
ಮತ್ತು
ಜಾಗವನ್ನು
ರಾಜ್ಯ
ಸರ್ಕಾರ
ನೀಡಿದೆ.
ಆದರೆ,
ಕೇವಲ
50
ಕೋಟಿ
ಕೊಟ್ಟ
ಕೇಂದ್ರ
ಸಚಿವ
ಅನಂತ
ಕುಮಾರ್
ಅವರು
ಈ
ವಿಚಾರದಲ್ಲಿ
ಬಿಟ್ಟಿ
ಪ್ರಚಾರವನ್ನು
ತೆಗೆದುಕೊಳ್ಳುತ್ತಿದ್ದಾರೆ
ಎಂದು
ಸಿದ್ದರಾಮಯ್ಯ
ಆರೋಪಿಸಿದರು.