Live

Karnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನ

ಬೆಂಗಳೂರು, ನವೆಂಬರ್ 03 : ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಯ ಮತದಾನ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮತದಾನ ನಡೆಯುತ್ತಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕೋವಿಡ್ ಸೋಂಕಿತರು ಸಹ ಸಂಜೆ 5 ರಿಂದ 6 ಗಂಟೆಯ ತನಕ ಮತದಾನ ಮಾಡಬಹುದಾಗಿದೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

ಬೆಂಗಳೂರು ನಗರದ ಆರ್. ಆರ್. ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. 2018ರ ಚುನಾವಣೆಯಲ್ಲಿ ಆರ್. ಆರ್. ನಗರದಲ್ಲಿ ಕಾಂಗ್ರೆಸ್, ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು.

Karnataka Bypolls 2020 : RR Nagar And Sira By-Election Live News Updates

ಕರ್ನಾಟಕದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು ಉಪ ಚುನಾವಣೆಯನ್ನು ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಆರ್. ಆರ್. ನಗರದಲ್ಲಿ 16 ಮತ್ತು ಶಿರಾದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಪ ಚುನಾವಣೆ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ.

Nov 03, 2020, 8:13 pm IST

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ.45.24 ರಷ್ಟು ಮತದಾನವಾಗಿದೆ.
Nov 03, 2020, 8:10 pm IST

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ.82.31 ರಷ್ಟು ಮತದಾನವಾಗಿದೆ.
Nov 03, 2020, 7:29 pm IST

ಕರ್ನಾಟಕದ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆಯ ಎರಡು ಕ್ಷೇತ್ರಗಳು ಸೇರಿ ಶೇ.51.3 ರಷ್ಟು ಮತದಾನವಾಗಿದೆ.
Nov 03, 2020, 6:02 pm IST

2 ಕ್ಷೇತ್ರಗಳ ಉಪ ಚುನಾವಣೆ ಮತದಾನಕ್ಕೆ ತೆರೆ. ಶಿರಾ ಹಾಗೂ ಆರ್.ಆರ್ ನಗರ ಕ್ಷೇತ್ರಗಳಲ್ಲಿ ಶಾಂತಯುತವಾಗಿ ನಡೆದ ಮತದಾನ. ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
Nov 03, 2020, 5:59 pm IST

ಆರ್.ಆರ್ ನಗರದಲ್ಲಿ 7 ಕೊರೊನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ
Nov 03, 2020, 5:47 pm IST

ಶಿರಾ ಉಪ ಚುನಾವಣೆಯಲ್ಲಿ ಇಬ್ಬರು ಕೊರೊನಾ ಸೋಂಕಿತರಿಂದ ಮತದ ಹಕ್ಕು ಚಲಾವಣೆಯಾಯಿತು. ಸಂತೆ ಮೈದಾನದ 177ನೇ ಮತಗಟ್ಟೆಯಲ್ಲಿ ಮತದಾನ ಮಾಡಲಾಯಿತು. ಪಿಪಿಇ ಕಿಟ್ ಧರಿಸಿ‌ಯೇ ಚುನಾವಣೆ ನಡೆಸಿದ ಸಿಬ್ಬಂದಿಗಳು. ಸಾಯಂಕಾಲ 5 ರಿಂದ 6 ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
Nov 03, 2020, 5:45 pm IST

ಆರ್.ಆರ್ ನಗರದ ಮತಗಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕಿತನಿಂದ ಮತದಾನ. ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಜೊತೆಗೆ ಆ್ಯಂಬುಲೆನ್ಸ್ ನಲ್ಲಿ ಸೋಂಕಿತರು ಆಗಮಿಸಿದ್ದಾರೆ. ಸೋಂಕಿತನ ಮತದಾನದ ಬಳಿಕ ಮತಗಟ್ಟೆ ಸ್ಯಾನಿಟೈಸ್ ಮಾಡಲಾಯಿತು. ಮತಗಟ್ಟೆ ಸಿಬ್ಬಂದಿ ಕೂಡ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Nov 03, 2020, 5:36 pm IST

ಕೊರೊನಾ ಸೋಂಕಿತರಿಂದ ಮತದಾನ ಹಿನ್ನೆಲೆ, ಪಿಪಿಇ ಕಿಟ್ ಹಾಕಿಕೊಂಡು ಮತಗಟ್ಟೆ ಸಿಬ್ಬಂದಿ ತಯಾರಾಗಿದ್ದಾರೆ. ಲಗ್ಗೆರೆಯ ಮೌಂಟ್ ಸೆನೋರಿಯಾ ಶಾಲೆಯಲ್ಲಿ ಸಿದ್ಧತೆ ನಡೆಸಲಾಗಿದೆ. ಕೊರೊನಾ ವೈರಸ್ ಸೋಂಕಿತರು ಮತದಾನ ಮಾಡಲಿರುವ ಮತಗಟ್ಟೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಭೇಟಿ ನೀಡಿದರು.
Nov 03, 2020, 5:32 pm IST

ಆರ್.ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮತಗಟ್ಟೆಗಳಿಗೆ ಭೇಟಿ ನೀಡಿದರು. ಪೀಣ್ಯ ಭಾಗದ ಮತಗಟ್ಟೆಗಳಿಗೆ ಭೇಟಿ ಮಾಡಿದರು.
Nov 03, 2020, 5:17 pm IST

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 5 ಗಂಟೆಯವರೆಗೆ ಶೇ.77.34 ರಷ್ಟು ಮತದಾನವಾಗಿದೆ.
Nov 03, 2020, 5:15 pm IST

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 5 ಗಂಟೆಯವರೆಗೆ ಶೇ.39.15 ರಷ್ಟು ಮತದಾನವಾಗಿದೆ.
Nov 03, 2020, 4:40 pm IST

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 71 ಕೊರೊನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ
Nov 03, 2020, 4:36 pm IST

ಆರ್.ಆರ್ ನಗರ ಉಪ ಚುನಾವಣೆ ಬಗ್ಗೆ ಜನ ನಿರುತ್ಸಾಹ ತೊರುತ್ತಿದ್ದಾರೆ. ಮತಗಟ್ಟೆಯಲ್ಲಿ ಮತದಾರರು ಕಾಣಿಸುತ್ತಿಲ್ಲ. ಕೊರೊನಾಗೆ ಹೆದರಿ ಮತಗಟ್ಟೆಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.
Nov 03, 2020, 4:25 pm IST

ಶಿರಾ ವಿಧಾನಸಭೆ ಉಪ ಚುನಾವಣೆ: ಮತದಾನದ ಬಳಿಕ ಗ್ಲೌಸ್ ಗಳನ್ನು ಮತದಾರರು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಗ್ಲೌಸ್ ಎಸೆಯುವುದಕ್ಕೆ ಪಕ್ಕದಲ್ಲೇ ಡಸ್ಟ್ ಬಿನ್ ಇಟ್ಟರೂ ಉಪಯೋಗವಿಲ್ಲದಂತಾಗಿದೆ. ಮತದಾನದ ಬಳಿಕ ರಸ್ತೆಯಲ್ಲಿ ಎಸೆಯುತ್ತಿರುವ ಮತದಾರರು.
Nov 03, 2020, 3:48 pm IST

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ. ಬೆಳಿಗ್ಗೆಯಿಂದಲೂ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಎಲ್ಲೂ ಸಹ ಗಲಾಟೆಯಾದ ಘಟನೆ ಬಗ್ಗೆ ವರದಿಯಾಗಿಲ್ಲ. ಮತಗಟ್ಟಿಗಳಿಗೆ ಬೇಕಾದ ಬಂದೊಬಸ್ತ್ ನಾವು ಮಾಡಿದ್ದೇವೆ. ಜನ ಸಹ ಮತಗಟ್ಟೆಗೆ ಬಂದು ಮತದಾನ ಮಾಡಬೇಕು.. ಮತದಾನ ಮಾಡಲು ಕೊರೊನಾ ಸಂದರ್ಭದಲ್ಲಿ ಸೂಕ್ತ ಕ್ರಮ ಇದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಅದಕ್ಕೆ ನಾವು ಅವಕಾಶ ಮಾಡಿಕೊಡೊದಿಲ್ಲ. ಎಲ್ಲೂ ಸಹ ಹಣ ಹಂಚಿಕೆ ಬಗ್ಗೆ ಸಹ ವರದಿಯಾಗಿಲ್ಲ.
Nov 03, 2020, 3:47 pm IST

ಸುಂಕದಕಟ್ಟೆ ಮತಗಟ್ಟೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ, ಪರಿಶೀಲನೆ. ಭದ್ರತೆ, ಕೈಗೊಂಡರಿರೊ ಕ್ರಮಗಳ ಬಗ್ಗೆ ಪರಿಶೀಲನೆ. ಸುಂಕದಕಟ್ಟೆ ದೊಡ್ಡಣ್ಣ ಶಾಲೆಯಲ್ಲಿ ಒಟ್ಟು 10 ಮತಗಟ್ಟೆಗಳು. ಸಿಬ್ಬಂದಿ ಜತೆ ಮಾಹಿತಿ ಪಡೀತಿರೊ ಆಯುಕ್ತ
Nov 03, 2020, 3:40 pm IST

ಮೌಂಟ್ ಕಾರ್ಮೆಲ್ ಸ್ಕೂಲ್ ನಲ್ಲಿ ಮತದಾನ ಮಾಡಿ ಸೆಲ್ಫಿ ತೆಗೆದುಕೊಂಡ ಕಿರುತೆರೆ ನಟ ಸತೀಶ್ ಹಾಗೂ ಪತ್ನಿ. ಕಿರುತೆರೆ ನಟ ಸತೀಶ್ ಹೇಳಿಕೆ, "ಮತದಾನ ಮಾದುವುದು ನಮ್ಮ ಬಾಧ್ಯತೆ ಅದಕ್ಕೆ ಬಂದು ಮತದಾನ ಮಾಡಿದ್ದೇವೆ. ಮತದಾನ ಮಾಡಿ ಸೆಲ್ಫಿ ತೆಗೆದುಕೊಂಡೆ. ನನ್ನ ನೋಡಿ ಮಲಗಿರುವ ಒಂದಿಬ್ರು ಬಂದು ಮತದಾನ ಮಾಡ ಅಂತ. ಬೂತ್ ನಲ್ಲಿ ತುಂಬಾ ಚೆನ್ನಾಗಿ ಅರೆಂಜ್ಮೆಂಟ್ ಮಾಡಿದ್ದಾರೆ" ಎಂದರು.
Nov 03, 2020, 3:14 pm IST

ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯ ತನಕ ಶೇಕಡಾ 61.1 ರಷ್ಟು, ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 32.41ರಷ್ಟು ಮತದಾನವಾಗಿದೆ.
Nov 03, 2020, 3:01 pm IST

ಜಾಲಹಳ್ಳಿ ವಿಲೇಜ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ. ಹೆಚ್ ಅವರು ಆಗಮನ. ಮತದಾರರಿಗೆ ಕೈ ಮುಗಿದು ಬೂತ್ ಗಳಿಗೆ ಎಂಟ್ರಿ ಕೊಟ್ಟು ವಾಪಸ್ ಆದ ಕುಸುಮಾ.
Nov 03, 2020, 3:00 pm IST

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ. ರಸ್ತೆಯಲ್ಲೇ ನಿಂತು ಕೈ ಮೀಸಲಾಯಿಸಿದ ಕಾರ್ಯಕರ್ತರು. ಪೊಲೀಸರು ಮಧ್ಯಸ್ಥಿಕೆ ವಹಿಸಿದರೂ ನೋ ಯೂಸ್. ಟ್ರಾಫಿಕ್ ನಿಬಾಯಿಸಲು ಪೊಲೀಸರು ಹರಸಾಹಸ. ಮತದಾರರಿಗೆ ನಮ್ಮ ಪಕ್ಷ ವೋಟ್ ಹಾಕಿ ಅನ್ನುತ್ತಿರುವ ಕಾರ್ಯಕರ್ತರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ. ರಾಜೀವ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜು ಬಳಿ ಘಟನೆ.
Nov 03, 2020, 2:54 pm IST

ಶಿರಾ ವಿಧಾನಸಭೆ ಉಪಚುನಾವಣೆ. ಮಧ್ಯಾಹ್ನದ ನಂತರ ಮತದಾರರ ಸಂಖ್ಯೆ ಹೆಚ್ಚಳ. ಬಿಸಿಲಿದ್ದರೂ ಉತ್ಸಾಹದಿಂದ ಮತದಾನ ಕೇಂದ್ರಕ್ಕೆ ಜನರ ಆಗಮನ.
Nov 03, 2020, 2:52 pm IST

ಆರ್. ಆರ್. ನಗರ ಉಪ ಚುನಾವಣೆಗೆ ಜಾಲಹಳ್ಳಿ ವಾರ್ಡ್‌ ಕ್ಲಾರೆಂಟ್‌ ಶಾಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಮತದಾನ ಮಾಡಿದರು.
Nov 03, 2020, 2:40 pm IST

"ಮುಂದಿನ ಪೀಳಿಗೆಗೆ ನಾಯಕರನ್ನು ಆರಿಸಬೇಕೆಂದರೆ ಮತ ಚಲಾವಣೆ ಮಾಡಬೇಕು. ನಮ್ಮ ನಾಯಕರನ್ನು ನಾವು ಆರಿಸಬೇಕು ಅದಕ್ಕಾಗಿ ನಾವು ಮತದಾನ ಮಾಡಬೇಕು. ನಾಗರಿಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ" ಎಂದು ನಟ ದಿಗಂತ್ ಆರ್. ಆರ್. ನಗರ ಕ್ಷೇತ್ರದಲ್ಲಿ ಮತದಾನ ಮಾಡಿದ ಬಳಿಕ ಹೇಳಿಕೆ ನೀಡಿದರು.
Nov 03, 2020, 1:54 pm IST

ಆರ್. ಆರ್. ನಗರ ವ್ಯಾಪ್ತಿಯ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ನಟ ದರ್ಶನ್
Nov 03, 2020, 1:44 pm IST

ಆರ್. ಆರ್. ನಗರ ಕ್ಷೇತ್ರದಲ್ಲಿ ನಟ ನೆನಪಿರಲಿ ಪ್ರೇಮ್ ಪತ್ನಿ ಸಮೇತರಾಗಿ ಮತದಾನ ಮಾಡಿದರು.
Nov 03, 2020, 1:29 pm IST

ಎರಡು ಕ್ಷೇತ್ರಗಳ ಉಪ ಚುನಾವಣೆ. ಮಧ್ಯಾಹ್ನ 1 ಗಂಟೆಗ ತನಕ ಶಿರಾದಲ್ಲಿ 44.13ರಷ್ಟು ಮತದಾನ. ಆರ್. ಆರ್. ನಗರ ಕ್ಷೇತ್ರದಲ್ಲಿ 26.58ರಷ್ಟು ಮತದಾನವಾಗಿದೆ.
Nov 03, 2020, 1:12 pm IST

ಮೌಂಟ್ ಕಾರ್ಮಲ್ ಶಾಲೆ ಮತಗಟ್ಟೆ ಕೇಂದ್ರಕ್ಕೆ ಹಕ್ಕು ಚಲಾವಣೆ ಮಾಡಲು ನಟ ದರ್ಶನ್ ಆಗಮಿಸಿದ್ದಾರೆ.
Nov 03, 2020, 1:08 pm IST

ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಸುಗೂಸಿನೊಂದಿಗೆ ಬಂದು ಮಹಿಳೆ ಮತ ಚಲಾವಣೆ ಮಾಡಿದರು. ಮುದ್ದೇವಳ್ಳಿಯ ಮಹಿಳೆ ಕಲ್ಪನಾ 4 ತಿಂಗಳ ಮಗುವಿನ ಜೊತೆಗೆ ಬಂದು ಹಕ್ಕು ಚಲಾಯಿಸಿದರು.
Nov 03, 2020, 12:58 pm IST

ಆರ್‌. ಆರ್. ನಗರ ವ್ಯಾಪ್ತಿಯ ಜೆ. ಪಿ. ಪಾರ್ಕ್ 17ನೇ ವಾರ್ಡ್‌ನ 147, 151ನೇ ಬೂತ್‌ನಲ್ಲಿ ಪಕ್ಷದ ಶಲ್ಯ ಧರಿಸಿ ಆಗಮಿಸಿದ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
Nov 03, 2020, 12:42 pm IST

ಕಂದಾಯ ಸಚಿವ ಆರ್. ಅಶೋಕ ಸೈಂಟ್ ಕ್ಲಾರಟ್ ಮತಗಟ್ಟೆಗೆ ಆಗಮಿಸಿ ಮತಚಲಾವಣೆ ಮಾಡಿದರು.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+