2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ಶ್ರೀರಾಮುಲು
Recommended Video
ಮಂಡ್ಯ, ಜುಲೈ 09: ನಾನು ಮುಂದಿನ ಲೋಕಸಭೆ ಚುನಾವಣೆ ನಾನು ಸ್ಪರ್ಧಿಸುತ್ತಿಲ್ಲ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಇನ್ನೂ ತಯಾರಾಗಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ಹೇಳಿದರು.
'ನಾನು
ಶಾಸಕನಾಗಿಯೇ
ಮುಂದುವರಿಯುವೆ.
ಮತ್ತೆ
ಲೋಕಸಭೆಗೆ
ಹೋಗುವ
ಪ್ರಶ್ನೆಯೇ
ಇಲ್ಲ'
ಎಂದು
ಮಾಜಿ
ಸಚಿವ
ಶ್ರೀರಾಮುಲು
ಹೇಳಿದರು.
ಲೋಕಸಭಾ
ಸದಸ್ಯನಾಗಿದ್ದ
ನನಗೆ
ಪಕ್ಷ
ಶಾಸಕನಾಗೋ
ಅವಕಾಶ
ನೀಡಿದೆ.
ರಾಜ್ಯ
ಸರ್ಕಾರದ
ಆಡಳಿತ
ಗಮನಿಸುತ್ತಿದ್ದೇನೆ.
ವಿರೋಧ
ಪಕ್ಷದಲ್ಲಿ
ಕುಳಿತು
ಸರ್ಕಾರದ
ವಿರುದ್ಧ
ಹೋರಾಟ
ಮಾಡುತ್ತೇನೆ.
ಅಷ್ಟೇ
ಅಲ್ಲದೇ
ಹಿಂದಿನಿಂದಲೂ
ಪಕ್ಷ
ಸಂಘಟನೆ
ಮಾಡ್ತಿದ್ದೇವೆ
ಎಂದು
ಹೇಳಿದರು.
ಈಗಾಗಲೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಆರಂಭವಾಗಿದ್ದು, ಯಾವ ಸಂಸದರನ್ನ ಮುಂದುವರಿಸಬೇಕು. ಯಾರನ್ನ ಅಭ್ಯರ್ಥಿ ಮಾಡಬೇಕೆಂಬ ಅಂತಿಮ ಚರ್ಚೆ ನಡೆಯುತ್ತಿದೆ. ನಾವೇನು ಮಾಡಬೇಕೆಂಬ ಪ್ರಯತ್ನದಲ್ಲಿದ್ದೇವೆ. ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ದೇವೇಗೌಡರು ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ಹೇಳಿದರು.