ಅಚ್ಚರಿ : ಚಾಮರಾಜನಗರದ ಮಹಿಳೆ ತಲೆಯಲ್ಲಿ ಕೊಂಬು!
ಚಾಮರಾಜನಗರ, ಮಾರ್ಚ್ 24 : ದನದ ಕರುಗಳಿಗೆ ಕೊಂಬುಗಳು ಮೂಡಿ ಬರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಕೆಲವರಿಗೆ 'ಅಹಂಕಾರ'ದ ಕೊಂಬು ಬಂದಿರುವುದನ್ನೂ ನೋಡಿದ್ದೇವೆ. ಆದರೆ, ಈ ಮಹಿಳೆಯ ಮೇಲೆ ಬೆಳೆಯುತ್ತಿರುವ ಕೊಂಬಿದೆಯಲ್ಲ, ಅದು ತಲೆನೋವಿನ ಕೊಂಬು!
ಹೌದು, ಇದು ಅಚ್ಚರಿಯಾದರೂ ಸತ್ಯ. ಚಾಮರಾಜನಗರ ಜಿಲ್ಲೆಯ ಪುಣಜನೂರು ಸಮೀಪದ ಹೊಸಪೋಡು ಕಾಲೋನಿಯಲ್ಲಿ ವಾಸವಿರುವ ಮಹಿಳೆಯ ತಲೆಮೇಲೆ ಕೊಂಬು ಕಾಣಿಸಿಕೊಂಡಿದ್ದು, ಮಹಿಳೆ ಮತ್ತು ಕುಟುಂಬದವರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. [ಬೆತ್ತಲಾದಳು ಚಾಮರಾಜನಗರದ ಗುರುಬಸವಿ!]

ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಗೆ ಸೇರಿದ ಹೊಸಪೋಡು ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮರವರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ಬಳಿಕ ಉದುರಿ ಬೀಳುತ್ತದೆಯಂತೆ. ಮತ್ತೆ ಪುನಃ ಬೆಳೆಯುತ್ತದೆಯಂತೆ. ಈ ವಿಚಿತ್ರ ಘಟನೆ ನಿರಂತರವಾಗಿ ನಡೆಯುತ್ತಲೇ ಇದೆಯಂತೆ.
ಮೂಲತಃ ಬೇಡಗುಳಿ ನಿವಾಸಿಯಾಗಿರುವ ಮಾದಮ್ಮ ಕಳೆದ ಕೆಲ ವರ್ಷಗಳಿಂದ ಬೇಡಗುಳಿಯಿಂದ ಹೊಸಪೋಡಿಗೆ ಬಂದು ಸಂಸಾರ ಸಾಗಿಸುತ್ತಿದ್ದಾರೆ. ತಲೆಯಲ್ಲಿ ಕೊಂಬು ಮೂಡುತ್ತಿದ್ದಾಗ ತಲೆ ನೋವು ಆರಂಭವಾಗುತ್ತದೆ. ಕೊಂಬು ತಲೆಯಲ್ಲಿ ಇರುವ ತನಕ ವಿಪರೀತ ತಲೆನೋವು ಇರುತ್ತದೆಯಂತೆ. [ಚಾಮರಾಜನಗರದಲ್ಲಿ ಕಾವಲುಗಾರನನ್ನು ಬೇಟೆಯಾಡಿದ ಹುಲಿ]

ತುಂಬು ಸಂಸಾರದ ಮಧ್ಯೆ ಜೀವನ ನಡೆಸುತ್ತಿರುವ ಮಾದಮ್ಮನಿಗೆ ಸದಾ ತಲೆಯ ಕೊಂಬಿನದೇ ಚಿಂತೆಯಾಗಿದೆ. ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬು ಬಳಿಕ ಉದುರಿ ಬೀಳುತ್ತದೆ. ಬಡತನದಲ್ಲಿರುವ ಕಾರಣ ಮಹಿಳೆ ಯಾವುದೇ ಆಸ್ಪತ್ರೆಗೆ ತೆರಳಿಲ್ಲ.
ಒಂದು ವೇಳೆ ಯಾರಾದರೂ ಈ ಬಗ್ಗೆ ಅಧ್ಯಯನ ಮಾಡಿಯೋ ಅಥವಾ ಶಸ್ತ್ರಚಿಕಿತ್ಸೆ ನಡೆಸಿ ಕೊಂಬು ಬೆಳೆಯುವ ತೊಂದರೆಯಿಂದ ರಕ್ಷಿಸಬಹುದಾ ಎಂದು ಅವರು ಕಾಯುತ್ತಿದ್ದಾರೆ. ಆದರೂ ಇದೊಂದು ರೀತಿಯಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications