ಸರ್ಕಾರಿ ನೌಕರರ ರಜೆ; ಗಳಿಕೆ, ಅಸಾಧಾರಣ, ಸಾಂದರ್ಭಿಕ ರಜೆ ನಿಯಮಗಳು
ಬೆಂಗಳೂರು, ಅಕ್ಟೋಬರ್ 14; ಕರ್ನಾಟಕದ ಸರ್ಕಾರಿ ನೌಕರರು ಸಾಂದರ್ಭಿಕ ರಜೆ ನಿಯಮಗಳು, ಅಸಾಧಾರಣ ರಜೆ ಮುಂತಾದ ನಿಯಮಗಳನ್ನು ತಿಳಿದಿರುವುದು ಉತ್ತಮ. ಖಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಒಂದು ಬಾರಿಕೆ 5 ದಿನಗಳಿಗಿಂತ ಹೆಚ್ಚಿಗೆ ಮಂಜೂರು ಮಾಡುವಂತಿಲ್ಲ.
ರಜೆ ನಿಯಮಗಳಲ್ಲಿ ಸಾಂದರ್ಭಿಕ ರಜೆ (ಆಕಸ್ಮಿಕ ರಜೆ), ವಿಶೇಷ ಸಾಂದರ್ಭಿಕ ರಜೆ ಮುಂತಾದವುಗಳ ವಿವರಗಳನ್ನು ನೀಡಲಾಗಿದೆ. ನೌಕರನೊಬ್ಬ ಒಂದು ವರ್ಷ ಪೂರ್ಣ ಸೇವೆ ಸಲ್ಲಿಸಿದಾಗ ಕ್ಯಾಲೆಂಡರ್ ತಿಂಗಳಿಗೆ ಒಂದು ದಿನದಂತೆ ಸಾಂಧರ್ಬಿಕ ರಜೆಯನ್ನು ಮಂಜೂರು ಮಾಡಬಹುದು ಎಂದು ನಿಯಮಗಳು ಹೇಳುತ್ತವೆ.
ಸರ್ಕಾರಿ ನೌಕರನಿಗೆ ಹುಚ್ಚು ಪ್ರಾಣಿ ಕಡಿದರೆ ಚುಚ್ಚುಮದ್ದು ಪಡೆಯಬಹುದಾದ ದಿನಗಳಿಗೆ ಮಾತ್ರ ನಿರಂತರ ಚಿಕಿತ್ಸೆ ಪಡೆಯುವಂತೆ ವೈದ್ಯರು ನೀಡಬಹುದಾದ ಪ್ರಮಾಣ ಪತ್ರದ ಆಧಾರದ ಮೇಲೆ 14 ದಿವಸಗಳ ಕಾಲ ವಿಶೇಷ ಸಾಂಧರ್ಬಿಕ ರಜೆಯನ್ನು ಮಂಜೂರು ಮಾಡಬಹುದು.
ಸರ್ಕಾರಿ ನೌಕರರ ರಜೆ ನಿಯಮಗಳು ನಿಯಮ 106 ರಿಂದ 206ರಲ್ಲಿ ಪರಿವರ್ತಿತ ರಜೆ, ಅರ್ಧ ವೇತನ ರಜೆ, ಅಸಾಧಾರಣ ರಜೆಗಳ ಬಗ್ಗೆ ವಿವರಗಳನ್ನು ಕೊಡಲಾಗಿದೆ. ರಜೆಗಳ ಮಾಹಿತಿಯನ್ನು ಚಿತ್ರಗಳಲ್ಲಿ ನೀಡಲಾಗಿದೆ....

ರಜೆ ನಿಯಮ 117; ಅಸಾಧಾರಣ ರಜೆ
ವಿಶೇಷ ಸನ್ನಿವೇಶಗಳಲ್ಲಿ ಅಸಾಧಾರಣ ರಜೆಯನ್ನು ಮಂಜೂರು ಮಾಡಬಹುದು. ಸಂಬಂಧಪಟ್ಟ ನೌಕರನ ಹಕ್ಕಿನಲ್ಲಿ ಯಾವುದೇ ರಜೆಯು ಇಲ್ಲದಿರುವಾಗ, ಸರ್ಕಾರಿ ನೌಕರನ ಖಾತೆಯಲ್ಲಿ ರಜೆ ಇದ್ದು, ಸಂಬಂಧಪಟ್ಟ ನೌಕರನು ಅಸಾಧಾರಣ ರಜೆ ಮಂಜೂರುಮಾಡುವಂತೆ ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡಾಗ ಪ್ರಕರಣದ ವಿಶೇಷ ಸನ್ನಿವೇಶಗಳ ದೃಷ್ಟಿಯಿಂದ ಸರ್ಕಾರವು ಅನ್ಯಥಾ ನಿರ್ಧರಿಸುವ ಹೊರತು, ಸರ್ಕಾರಿ ನೌಕರನಿಗೆ ಈಮುಂದಿನ ಪರಿಮಿತಿಗಳನ್ನು ಮೀರಿ ಯಾವುದೇ ಸಂಧರ್ಭದಲ್ಲಿ ಅಸಧಾರಣ ರಜೆಯನ್ನು ಮಂಜುರು ಮಾಡಬಾರದು. ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೇ ಮೂರು ತಿಂಗಳು, ನಿರಂತರವಾಗಿ ಒಂದು ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರನಿಗೆ ವೈದ್ಯಕೀಯ ಪ್ರಮಾಣ ಪತ್ರ ಸಮರ್ಥಿಸಿದರೆ 6 ತಿಂಗಳು ಅಸಾಧಾರಣ ರಜೆ ಮಂಜೂರು ಮಾಡಬಹುದು.

ಅಸಾಧಾರಣ ರಜೆಯನ್ನಾಗಿ ಪರಿವರ್ತಿಸಬಹುದು
ಒಂದು ವರ್ಷಕ್ಕಿಂತ ಕಡಿಮೆ ಇರದೆ ನಿರಂತರವಾಗಿ ಸೇವೆ ಸಲ್ಲಿಸಿದ ಸರ್ಕಾರಿ ನೌಕರನು ಕ್ಯಾನ್/ ಮಾನಸಿಕ ಅಸ್ತಸ್ಯ/ ಮಾರಣಾಂತಿಕ ಖಾಯಿಲೆ ಇದರ ಸಲುವಾಗಿ ಸರ್ಕಾರಿ ಸಂಸ್ಥೆಯಲ್ಲಿ ಅಥವಾ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಮತ್ತು ಅಂಥಹ ನೌಕರ ರಜೆ ಪಡೆಯಲು ಜಿಲ್ಲಾ ವೈದ್ಯಾಧಿಕಾರಿ ಅಥವಾ ಜಿಲ್ಲಾ ಸರ್ಜನ್ ಅಥವಾ ಸಂಬಂಧಪಟ್ಟ ಖಾಯಿಲೆಯ ತಜ್ಞನು ನೀಡುವ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಶಿಫಾರಸ್ಸು ಮಾಡಿದ ರಜೆ ಮುಕ್ತಾಯವಾದ ಮೇಲೆ ಗುಣಮುಖನಾಗುವ ಸಂಭವವಿರುವುದಾಗಿ ಆ ಪ್ರಮಾಣ ಪತ್ರವು ನಿರ್ಧಿಷ್ಟಪಡಿಸಿದರೆ 18 ತಿಂಗಳು, ಅಸಾಧಾರಣ ರಜೆಯನ್ನು ಪಡೆದ ಸರ್ಕಾರಿ ನೌಕರನು ತನ್ನ ರಜಾ ಅವಧಿ ಮುಕ್ತಾಯವಾದ ಮೇಲೆ ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ ಆ ಗೈರುಹಾಜರಿ ಅವಧಿ ಮೂರು ತಿಂಗಳು ಮೀರಿದರೆ ನಿಯಮಾವಳಿಗಳ ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ರಜಾ ಮಂಜೂರು ಮಾಡುವ ಅಧಿಕಾರವುಳ್ಳ ಅಧಿಕಾರಿಯು ರಜಾ ರಹಿತ ಗೈರುಹಾಜರಿ ಅವಧಿಗಳನ್ನು ಪೂರ್ವಾನ್ವಯವಾಗಿ ಅಸಾಧಾರಣ ರಜೆಯನ್ನಾಗಿ ಪರಿವರ್ತಿಸಬಹುದು.

ನಿಯಮ 114; ಪರಿವರ್ತಿತ ರಜೆ
ನಿಯಮ 114 (4) ಅನ್ವಯ ಸರ್ಕಾರಿ ನೌಕರನ ರಜಾ ಖಾತೆಯಲ್ಲಿನ ಅರ್ಧವೇತ ರಜೆಗಳ ಮೊತ್ತದ ಅರ್ಧಕ್ಕಿಂತ ಹೆಚ್ಚಾಗದ ಪರಿವರ್ತಿತ ರಜೆಯನ್ನು ವೈದ್ಯಕೀಯ ಕಾರಣಗಳು ಅಥವ ಖಾಸಗಿ ಕಾರಣಗಳ ಮೇಲೆ ಮಂಜೂರು ಮಾಡಬಹುದಾಗಿದೆ.
ರಜೆಯ ಅವಧಿಯು ಮುಗಿದ ಮೇಲೆ ಸಂಬಂಧಪಟ್ಟ ನೌಕರ ಕೆಲಸಕ್ಕೆ ಹಿಂದಿರುಗುವ ಸಂಭವವಿದೆ ಎಂದು ರಜೆ ಮಂಜೂರು ಮಾಡುವ ಪ್ರಾಧಿಕಾರಕ್ಕೆ ಮನದಟ್ಟಗಬೇಕು.
ಪರಿವರ್ತಿತ ರಜೆಯನ್ನು ಮಂಜೂರು ಮಾಡಿದಾಗ ಅಂತಹ ರಜೆಯ ಮೊತ್ತದ ಎರಡರಷ್ಟನ್ನು ಅರ್ಧವೇತನ ರಜೆಯ ಲೆಕ್ಕಕ್ಕೆ ಖರ್ಚು ಹಾಕಬೇಕು.
ಖಾಸಗಿ ಕಾರಣಗಳು ಗರಿಷ್ಠ ಒಂದು ಬಾರಿಗೆ 120 ದಿನಗಳು. ಪರಿವರ್ತಿತ ರಜೆಯೊಂದಿಗೆ ಗಳಿಕೆ ರಜೆಯನ್ನು ಸಂಯೋಜನೆ ಮಾಡಿ ಒಟ್ಟು 180 ದಿನಗಳ ಗರಿಷ್ಠ ರಜೆಯನ್ನು ಮಂಜೂರು ಮಾಡಬಹುದು.

ಅರ್ಧ ವೇತನ ರಜೆಯ ಮಾಹಿತಿ
ಸರ್ಕಾರಿ ನೌಕರರ ರಜೆ ನಿಯಮ 114ರ ಅನ್ವಯ ಅರ್ಧವೇತನ ರಜೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನನ್ನು ಹೊರತುಪಡಿಸಿ ಪ್ರತಿಯೊಂದು ಕ್ಯಾಲೆಂಡರ್ ವರ್ಷದಲ್ಲಿ ಜನವರಿ-1 ಮತ್ತು ಜುಲೈ-1 ರಂದು ಮುಂಗಡವಾಗಿ ಪ್ರತಿ ಅರ್ಧವರ್ಷಕ್ಕೆ 10 ರಂತೆ ಪಡೆಯುತ್ತಾನೆ.
ಸರ್ಕಾರಿ ನೌಕರನು ತನ್ನ ಅರ್ಧವರ್ಷದಲ್ಲಿ ಯಾವುದಾದರೂ ಗೈರುಹಾಜರಾಗಿದ್ದರೆ ಕರ್ತವ್ಯವಲ್ಲದ ಅವಧಿಯಾಗಿದ್ದರೆ ಅಥವಾ ಲೆಕ್ಕಕ್ಕೆ ಇಲ್ಲದ ಅವಧಿ ಎಂದು ಪರಿಗಣಿಸಿದರೆ ಮುಂದಿನ ಅರ್ಧವರ್ಷದಲ್ಲಿ ರಜಾ ಲೆಕ್ಕಕ್ಕೆ ರಜೆಯನ್ನು ಜಮಾ ಮಾಡುವಾಗ ಲೆಕ್ಕಕ್ಕೆ ಇಲ್ಲದ ಅವಧಿಯ 1/18 ರ ಭಾಗದಷ್ಟು ಗರಿಷ 10 ದಿನಗಳಿಗೆ ಮೀರದಂತೆ ಕಡಿತಗೊಳಿಸಬೇಕು.
ಸರ್ಕಾರಿ ನೌಕರನು ಹೊಸದಾಗಿ ನೇಮಕಗೊಂಡಾಗ ಯಾವ ಅರ್ಧ ವರ್ಷದಲ್ಲಿ ನೇಮಕಗೊಂಡನೋ ಆ ಅರ್ಧವರ್ಷದಲ್ಲಿ ಪ್ರತಿಯೊಂದು ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳಿಗೆ 5/3 (1.6 ದಿನ) ಸದರಿ ರಜಾ ಲೆಕ್ಕಕ್ಕೆ ಸೇರಿಸಬೇಕು. ಸೇವೆಯಿಂದ ನಿವೃತ್ತಿ, ರಾಜಿನಾಮೆ ನೀಡಿದ ಸಂದರ್ಭದಲ್ಲಿ ಆ ಅರ್ಧ ವರ್ಷದಲ್ಲಿ ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳಿಗೆ 5/3 ದರದಲ್ಲಿ ರಜಾ ಲೆಕ್ಕಕ್ಕೆ ಜಮಾ ಮಾಡಬೇಕು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications