KCET Row : ಸಿಇಟಿ ಬಿಕ್ಕಟ್ಟು ಇತ್ಯರ್ಥ; ಸಮಿತಿ ವರದಿ ಆಧರಿಸಿ ಹೊಸ Ranking ಪಟ್ಟಿಗೆ ಸೂಚನೆ
ಬೆಂಗಳೂರು.ಸೆ.23: ವೃತ್ತಿ ಪರ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉಂಟಾಗಿದ್ದ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಿದೆ. ಸಿಇಟಿ Ranking ವಿವಾದಕ್ಕೆ ಸಂಬಂಧ ಸರ್ಕಾರ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದೆ. ಇದರಿಂದಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ದೊರಕಲಿದೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಸೂಚಿಸಿರುವ ವಿಧಾನ ಅಳವಡಿಸಕೊಂಡು ಸಿಇಟಿ Ranking ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ಸಮಿತಿ ಸೂಚಿಸಿರುವ ವಿಧಾನಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರೂ ಸಮ್ಮತಿಸಿದ ಹಿನ್ನೆಲೆಯಲ್ಲಿ, ಸಮಿತಿ ಸೂಚಿಸಿರುವ ವಿಧಾನ ಅಳವಡಿಸಿಕೊಂಡು, ಹೊಸ Ranking ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ ಮೇಲ್ಮನವಿ ಇತ್ಯರ್ಥಪಡಿಸಿದೆ.
ಸಮಿತಿ
ನೀಡಿರುವ
ಪರಿಹಾರ:
2021ನೇ
ಸಾಲಿನ
ಪಿಯು
ವಿದ್ಯಾರ್ಥಿಗಳಿಗೆ
3
ವಿಷಯಗಳಿಂದ
ಒಟ್ಟು
18
ಅಂಕಗಳನ್ನು
ಕಡಿತಗೊಳಿಸಿ
ಸಾಮಾನ್ಯೀಕರಿಸಬೇಕು.
ಭೌತಶಾಸ್ತ್ರದ
ಸರಾಸರಿ
6
ಅಂಕ,
ರಸಾಯನ
ಶಾಸ್ತ್ರದ
5
ಅಂಕ
ಹಾಗೂ
ಗಣಿತದ
7
ಅಂಕಗಳನ್ನ
ಕಡಿಮೆಗೊಳಿಸಬೇಕು.
ಆಗ
100
ಅರ್ಹತಾ
ಅಂಕಗಳಿಗೆ
6
ಅಂಕ
ಕಡಿಮೆಯಾದಂತಾಗಲಿದೆ.
ಆ
ಬಳಿಕ
2021ನೇ
ಸಾಲಿನ
ವಿದ್ಯಾರ್ಥಿಗಳ
ಒಟ್ಟು
ಪಿಯು
ಅಂಕಗಳ
ಶೇ.
50
ಹಾಗೂ
2022ರ
ಸಿಇಟಿಯಲ್ಲಿ
ಪಡೆದ
ಶೇ.
50
ಅಂಕ
ಪರಿಗಣಿಸಿ
Ranking
ಪಟ್ಟಿ
ಪ್ರಕಟಿಸಬೇಕು.
ಇದರಿಂದ, ಕೋವಿಡ್ ಬ್ಯಾಚ್ನ ವಿದ್ಯಾರ್ಥಿಗಳ (ಪುನರಾವರ್ತಿತರು) Ranking ಉತ್ತಮಗೊಳ್ಳುವ ಸಾಧ್ಯತೆ ಇದ್ದು, ಕೋವಿಡ್ ನಂತರದ ಬ್ಯಾಚ್ನ ವಿದ್ಯಾರ್ಥಿಗಳ Ranking ಮೇಲೆ ಕೊಂಚ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಐಟಿ ಸಂಬಂಧಿತ ವಿಷಯದಲ್ಲಿ ಕಳೆದ ಸಾಲಿನಲ್ಲಿದ್ದ ಸೀಟುಗಳನ್ನು ಈ ವರ್ಷ ಶೇ.10 ಹೆಚ್ಚಳ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಏಕಸದಸ್ಯಪೀಠದ ಆದೇಶವೇನು? 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯಪೀಠ ಸೆ.3ರಂದು ಆದೇಶ ಹೊರಡಿಸಿತ್ತು.
ಸಿಇಟಿ
ಪುನರಾವರ್ತಿತ
ವಿದ್ಯಾರ್ಥಿಗಳ
ಪಿಯುಸಿಯ
ಶೇ.50
ಅಂಕ
ಹಾಗೂ
ಸಿಇಟಿಯ
ಶೇ.50
ಅಂಕಗಳನ್ನು
ಪರಿಗಣಿಸಿ
ಹೊಸದಾಗಿ
Rank
ಪಟ್ಟಿ
ಪ್ರಕಟಿಸುವಂತೆ
ಕೆಇಎಗೆ
ಸೆ.3ರಂದು
ಆದೇಶಿಸಿತ್ತು.
ಈ
ಆದೇಶವನ್ನು
ರದ್ದುಪಡಿಸುವಂತೆ
ಕೋರಿ
ಇದೀಗ
ರಾಜ್ಯ
ಉನ್ನತ
ಶಿಕ್ಷಣ
ಇಲಾಖೆಗೆ
ವಿಭಾಗೀಯಪೀಠಕ್ಕೆ
ಮೇಲ್ಮನವಿ
ಸಲ್ಲಿಸಿದೆ.
ಸಮಾನವಾಗಿ ಪರಿಗಣಿಸಲಾಗದು: ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು, 2020-2021ನೇ ಸಾಲಿನಲ್ಲಿ ಪಿಯು ಪರೀಕ್ಷೆಯನ್ನೇ ಎದುರಿಸಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಅನುಸಾರ ಅವರು ಅಂಕಗಳನ್ನು ಪಡೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರಲಿಲ್ಲ. 2021- 22ನೇ ಸಾಲಿನ
ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪರಿಕ್ಷೆಯನ್ನು ಎದುರಿಸಿದ್ದರು. ಹಲವು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಹಿಂದಿನ ಸಾಲಿನ ವಿದ್ಯಾರ್ಥಿಗಳು ಇಷ್ಟು ಅಂಕಗಳನ್ನು ಪಡೆದುಕೊಂಡಿಲ್ಲ.
ಪರೀಕ್ಷೆಯನ್ನೇ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ನೋಡಲಾಗದು ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಿದೆ. ಏಕ ಸದಸ್ಯಪೀಠದ ಆದೇಶ ಅನುಷ್ಠಾನ ಮಾಡಿದರೆ, 2022ನೇ ಸಾಲಿನಲ್ಲಿ ಮೆರಿಟ್ ಪಡೆದಿರುವ ಒಂದು ಲಕ್ಷಕ್ಕೂ ವಿದ್ಯಾರ್ಥಿಗಳು Rank ಲಿಸ್ಟ್ನಲ್ಲಿ ಕೆಳಗೆ ಹೋಗುತ್ತಾರೆ. ಯಾವುದೇ ತಪ್ಪು ಮಾಡದ
ಅವರಿಗೆ ಅನ್ಯಾಯವಾಗಲಿದ್ದು, ಅವರ ಭವಿಷ್ಯಕ್ಕೆ ಮಾರಕವಾಗಲಿದೆ. ಏಕ ಸದಸ್ಯಪೀಠವು 2021-22ನೇ ಸಾಲಿನ ವಿದ್ಯಾರ್ಥಿಗಳ ವಾದವನ್ನುಆಲಿಸಿಲ್ಲ. ಮುಖ್ಯವಾಗಿ 'ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2006' (ಸಿಇಟಿ ಪ್ರವೇಶಾತಿ ನಿಯಮಗಳು 2006ರ ನಿಯಮ 1(1)(ಸಿ) ಧ್ಯೇಯೋದ್ದೇಶವನ್ನೇ ಏಕ ಸದಸ್ಯ ಪೀಠ ಪರಿಗಣಿಸಿಲ್ಲ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠದ ಸೆ.3ರ ಆದೇಶ ರದ್ದುಪಡಿಸಬೇಕು ಎಂದು ಸರ್ಕಾರ ಮೇಲ್ಮನವಿಯಲ್ಲಿ ಕೋರಿತ್ತು.