ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಮರಣಶಾಸನ : ಸಿದ್ದರಾಮಯ್ಯ
ಬೆಂಗಳೂರು, ಸೆ 20: ರಾಜ್ಯದ ಕಾವೇರಿ ಕಣಿವೆ ಭಾಗದ ಜನರಿಗೆ 'ಮರಣಶಾಸನ' ದಂತಾಗಿರುವ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಬುಧವಾರ (ಸೆ 21) ಸಚಿವ ಸಂಪುಟ ಸಭೆ ಕರೆದಿರುವ ಸಿದ್ದರಾಮಯ್ಯ, ಸಂಜೆ ಐದು ಗಂಟೆಗೆ ಸರ್ವಪಕ್ಷಗಳ ಸಭೆಯನ್ನೂ ಕರೆದಿದ್ದಾರೆ. (ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ)
ಈ ನಡುವೆ ಸಿಎಂ ಸಿದ್ದರಾಮಯ್ಯ, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಸುಪ್ರೀಂ ತೀರ್ಪಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡಲಾಗಿದೆ, ಮತ್ತಷ್ಟು ನೀರು ಬಿಡಲು ಸಾಧ್ಯವಿಲ್ಲ ಎಂದು ಸಿದ್ದು, ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿದ್ದಾರೆ.
ಸಿದ್ದರಾಮಯ್ಯ
ಪತ್ರಿಕಾ
ಗೋಷ್ಠಿಯ
ಪ್ರಮುಖಾಂಶ:
>
ನಮ್ಮ
ಜಲಾಶಯಗಳಲ್ಲಿ
ನೀರಿಲ್ಲ
ಎಂದು
ಅಂಕಿಅಂಶದ
ಸಮೇತ
ಸುಪ್ರೀಂಕೋರ್ಟಿಗೆ
ಮನವರಿಕೆ
ಮಾಡಲಾಗಿದೆ.
>
ಕಾನೂನು
ತಜ್ಞರು,
ಹಿರಿಯ
ವಕೀಲರುಗಳ
ಅಭಿಪ್ರಾಯ
ಪಡೆದು
ನಾರಿಮನ್
ಅವರು
ಸರ್ವೋಚ್ಚ
ನ್ಯಾಯಾಲಯದ
ಪೀಠಕ್ಕೆ
ಮನವರಿಕೆ
ಮಾಡುವ
ಕೆಲಸವನ್ನು
ಮಾಡಿದ್ದರು.
>
ಇಷ್ಟೆಲ್ಲಾ
ಮನವರಿಕೆ
ಮಾಡಿದರೂ
ಆರು
ಸಾವಿರ
ಕ್ಯೂಸೆಕ್ಸ್
ನೀರು
ಬಿಡಬೇಕು
ಎನ್ನುವ
ಆದೇಶವನ್ನು
ನ್ಯಾಯಪೀಠ
ನೀಡಿದೆ.
>
ನಮ್ಮ
ಪರ
ವಕೀಲರಾದ
ನಾರಿಮನ್,
ಸಾಳ್ವೆ
ಸಮರ್ಥವಾಗಿ
ವಾದ
ಮಂಡಿಸಿದ್ದಾರೆ.
>
ಸುಪ್ರೀಂ
ಆದೇಶ
ಪಾಲಿಸಬೇಕೋ,
ಬೇಡವೋ
ಎನ್ನುವುದರ
ಬಗ್ಗೆ
ಚರ್ಚಿಸಲು
ಬುಧವಾರ
ಬೆಳಗ್ಗೆ
ಸಚಿವ
ಸಂಪುಟ
ಸಭೆ
ಕರೆದಿದ್ದೇನೆ.
>
ಸಚಿವ
ಸಂಪುಟ
ಸಭೆಯಲ್ಲಿ
ಅಂತಿಮ
ನಿರ್ಧಾರಕ್ಕೆ
ಬರುತ್ತೇವೆ.
ಸಂಜೆ
5
ಗಂಟೆಗೆ
ಪ್ರತಿಪಕ್ಷಗಳ
ನಾಯಕರ
ಸಭೆ
ಕರೆದಿದ್ದು,ರಾಜ್ಯದ
ಎಲ್ಲಾ
ಸಂಸದರಿಗೂ
ಭಾಗವಹಿಸುವಂತೆ
ಕೋರಿದ್ದೇವೆ.
>
ಸರ್ವೋಚ್ಚ
ನ್ಯಾಯಾಲಯದ
ಆದೇಶದಿಂದ
ರೈತರು
ಮತ್ತು
ಸಾರ್ವಜನಿಕರು
ಆತಂಕ
ಪಡುವ
ಅಗತ್ಯ
ಇಲ್ಲ,
ರಾಜ್ಯದ
ಜನತೆ
ಶಾಂತಿ
ಕಾಪಾಡಿಕೊಳ್ಳಬೇಕು
ಎನ್ನುವುದು
ನಮ್ಮ
ಮನವಿ.