Bigg Boss Hanumantha: ಶಿಗ್ಗಾವಿ ಉಪ ಚುನಾವಣೆಯಲ್ಲಿ ಮತದಾನ ಮಾಡದ ಚುನಾವಣೆ ರಾಯಭಾರಿ ಹನುಮಂತ!
ಬೆಂಗಳೂರು, ನವೆಂಬರ್ 13: ಕನ್ನಡದ ಬಿಗ್ ಬಾಸ್ ಸೀಸನ್ 11ರ ಸ್ಫರ್ಧಿಯಾಗಿರುವ ಹನುಮಂತ ಲಮಾಣಿ (Bigg Boss Hanumantu Lamani) ಯಾರಿಗೇತಾನೆ ಗೊತ್ತಿಲ್ಲ ಹೇಳಿ. ಕಳೆದ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಚುನಾವಣೆ ರಾಯಭಾರಿ ಆಗಿದ್ದರು. ಉಪ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡದೇ ಗೈರಾಗಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕುರಿಗಾಹಿ, ಗಾಯಕ ಹನುಮಂತ ಲಮಾಣಿ ಅವರು 'ಸ.ರಿ.ಗ.ಮ.ಪ.ಸೀಸನ್ 15'ರ ಆವೃತ್ತಿಯಲ್ಲಿ ಹಾಡಿ ಜನಮನ ಸೆಳೆದವರಲ್ಲಿ ಪ್ರಮುಖರು. ಇವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಲ್ಲೂರ್ಬಡ್ನಿ ತಾಂಡಾದ ನಿವಾಸಿ. ಅವರು ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ನೇರ ನುಡಿ, ಮುಗ್ಧ ಮಾತುಗಳು, ಹಾಡಿನಿಂದಲೇ ಅಲ್ಲಿ ಸಹ ಹವಾ ಎಬ್ಬಿಸಿದ್ದಾರೆ.

ಸದ್ಯ ನಡೆಯುತ್ತಿರುವ ಶಿಗ್ಗಾವಿ ಉಪ ಚುನಾವಣೆ 2024ರಲ್ಲಿ ಅವರು ಭಾಗವಹಿಸಿಲ್ಲ. ಚುನಾವಣೆ ರಾಯಭಾರಿಯಾಗಿ ಕಳೆದ ಬಾರಿ ಮತದಾನ ಮಹತ್ವ ಸಾರಿದ್ದ, ಎಲ್ಲರೂ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಿದ್ದರು. ಆದರೆ ಈ ಬಾರಿ ಅವರು ಬಿಗ್ ಬಾಸ್ ಮನೆಯಲ್ಲಿ ಇರುವ ಕಾರಣ ಮತದಾನ ಮಾಡಲು ಶಿಗ್ಗಾವಿಗೆ ಬರಲಾಗಿಲ್ಲ.
ಹನುಮಂತ ಲಮಾಣಿ ಅವರ ಮತದಾನ ಹಕ್ಕು ಶಿಗ್ಗಾವಿ ತಾಲೂಕಿನ ಚಿಲ್ಲೂರ್ ಬಡ್ನಿ ತಾಂಡಾದ ಸರ್ಕಾರಿ ಶಾಲೆಯ ಮತಗಟ್ಟೆ 117ರಲ್ಲಿದೆ. ಮಗ ಬಾರದಿದ್ದರೇನಂತೆ ನಾವು ಕ್ಷೇತ್ರದಲ್ಲಿಯೇ ಇದ್ದೇವೆ ಎಂದ ಹನುಮಂತನ ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ ಅವರು ಮತದಾನ ಮಾಡಿದ್ದಾರೆ.
'ಮಗ ಬಿಗ್ ಬಾಸ್ ಮನೆಲ್ಲಿದ್ದಾನ. ಹೀಗಾಗಿ ಅವಂಗ ಬರಾಕ ಆಗಿಲ್ಲ. ನಮಗೂ ಸಂಪರ್ಕಕ್ಕೂ ಸಿಕ್ಕಿಲ್ಲ. ನಾವ್ ಅಷ್ಟ ಬಂದು ಮತದಾನ ಮಾಡೇವಿ' ಎಂದು ಹನುಮಂತ ಅವರ ತಂದೆ ಮೇಘಪ್ಪ ಲಮಾಣಿ ಅವರು ಮಾತನಾಡಿದ್ದಾರೆ.
ಮತ್ತೊಂದೆಡೆ ಹನುಮಂತನ ಅನುಪಸ್ಥಿತಿ ಕಾಡುತ್ತಿರುವ ಊರಿನವರು, ಹನುಮಂತನ ಸ್ನೇಹಿತರ ಕಳೆದ ಬಾರಿ ಚುನಾವಣೆ ಜಾಗೃತಿ ಮೂಡಿಸಿದ್ದ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾನೆ. ಚುನಾವಣಾಧಿಕಾರಿಗಳು ಉಪ ಚುನಾವಣೆ ಸಂಬಂಧ ಹನುಮಂತನನ್ನು ಕರೆಯಿಸಿ ಮತದಾನ ಮಾಡಿಸಿ, ಮತದಾನ ಮಹತ್ವ ಸಾರಬೇಕಿತ್ತು ಎಂದು ಆಗ್ರಹಿಸಿದ್ದಾರೆ.
ಕುರಿ ಕಾಯುತ್ತಿದ್ದ ಹಳಿಯ ಪ್ರತಿಭೆ ಹನುಮಂತ ಅವರ ಇಂದು ಸರಿಗಮಪ, ಬಿಗ್ ರಿಯಾಲಿಟಿ ಶೋ ದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಡು ಹಾಡುವುದರಲ್ಲಿ ಅಪಾರ ಆಸಕ್ತಿ ಹೊಂದಿರುವ ಹನುಮಂತ ಇದೀಗ ರಿಯಾಲಿಟಿ ಶೋಗಳಲ್ಲಿ ನಟಿಸುತ್ತಿದ್ದಾರೆ. ಅವರ ಈ ಸಾಧನೆ ಗ್ರಾಮಸ್ಥರಿಗೆ, ಕುಟುಂಬಸ್ಥರಿಗೆ ಹೆಮ್ಮ ತಂದಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications