ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್?
Recommended Video

ಬೆಂಗಳೂರು, ನವೆಂಬರ್ 26: ಪತ್ನಿ ಸುಮಲತಾ ಅವರ ಮೊಬೈಲ್ ನಂಬರ್ ಅನ್ನು ಅಂಬರೀಶ್ ವಿಚಿತ್ರ ಹೆಸರಿನಿಂದ ಸೇವ್ ಮಾಡಿದ್ದರು. ಅವರು ಸೇವ್ ಮಾಡಿದ್ದ ಹೆಸರೇ ಹೇಳುತ್ತಿತ್ತು ಸುಮಲತಾ ಎಡೆಗೆ ಅಂಬರೀಶ್ಗೆ ಯಾವ ಪರಿ ಪ್ರೀತಿ ಇತ್ತೆಂದು.
ಅಂಬರೀಶ್ ಅವರ ಮೊಬೈಲ್ಗೆ 'ಗಾಡೆಸ್' ಎಂಬ ಸಂಖ್ಯೆಯಿಂದ ಕರೆ ಬಂದರೆ ರಿಸೀವ್ ಮಾಡದೇ ಇರುತ್ತಿರಲಿಲ್ಲ. ಅದು ಪತ್ನಿ ಸುಮಲತಾ ಅವರಿಂದ ಬರುವ ಕರೆ ಆಗಿರುತ್ತಿತ್ತು. ಹೌದು, ಅಂಬರೀಶ್ ಅವರು ಸುಮಲತಾ ಅವರ ಸಂಖ್ಯೆಯನ್ನು ಗಾಡೆಸ್ ಎಂದು ಸೇವ್ ಮಾಡಿಕೊಂಡಿದ್ದರು.
ಅಂಬರೀಶ್ ಹಾಗೂ ಸುಮಲತಾ ಮದುವೆ ಬಹಳ ತಡವಾಗಿ ಆಯಿತು. ಅವರು ಮದುವೆಯಾದದ್ದು 1991 ರಲ್ಲಿ. ಅದೂ ಅಂಬರೀಶ್ ಅವರ ಹಲವು ಮಿತ್ರರು ಸೇರಿ ಬೈದಮೇಲೆ ಅಂಬರೀಶ್ ಅವರು ಸುಮಲತಾ ಅವರನ್ನು ಮದುವೆಯಾದರು.

ಸುಮಲತಾ ಅವರು ಅಂಬರೀಶ್ ಅವರ ಬಾಳಿಗೆ ಬಂದ ಮೇಲೆ ಅಂಬರೀಶ್ ಅವರ ಜೀವನ ಸಾಕಷ್ಟು ಸುಧಾರಿಸಿತು. ಅದಕ್ಕೆ ಮುನ್ನಾ ಕೆಟ್ಟ ದಿನಗಳನ್ನೇನೂ ಅವರು ಕಂಡಿರಲಿಲ್ಲವಾದರೂ, ಅಂಬರೀಶ್ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಮತ್ತು ಸಾಲು-ಸಾಲು ಹಿಟ್ ಚಿತ್ರಗಳನ್ನು ನೀಡಿದ್ದು ಮದುವೆಯ ನಂತರವೇ.

ಅಂಬಿ ಪಾಲಿಗೆ ಸುಮಾ ದೇವತೆ
ಅಂಬರೀಶ್ ಅವರ ಹಳಿ ತಪ್ಪುತ್ತಿದ್ದ ಜೀವನವನ್ನು ಸರಿ ದಾರಿಗೆ ತಂದವರು ಸುಮಲತಾ ಎಂದೂ ಕೆಲವರು ಹೇಳುವುದಿದೆ ಹಾಗಾಗಿಯೇ ಅಂಬರೀಶ್ ಅವರು ಸುಮಲತಾ ಹೆಸರನ್ನು ಗಾಡೆಸ್ ಅರ್ಥಾತ್ ದೇವತೆ ಎಂದು ಸೇವ್ ಮಾಡಿಕೊಂಡಿದ್ದರು.

ಕಪ್ಪು ಮಚ್ಚೆ ಬೀಳದಂತೆ ಬಾಳಿದರು
ಕೌಟುಂಬಿಕ ಜೀವನದಲ್ಲಿ ಒಂದೂ ಕಪ್ಪು ಮಚ್ಚೆ ಬರದಂತೆ ಬಾಳಿದವರು ಅಂಬರೀಶ್. ಮಗ ಅಭಿಷೇಕ್ ಪತ್ನಿ ಸುಮಲತಾ ಅವರುಗಳು ಅಂಬಿ ಅವರ ಶಕ್ತಿಯಾಗಿದ್ದರು. ಚಿತ್ರರಂಗದಲ್ಲಿ ಅಂಬರೀಶ್ ಅವರಿಗೆ ಸಿಗುತ್ತಿದ್ದ ಗೌರವವೇ ಸುಮಲತಾ ಅವರಿಗೂ ಸಿಗುತ್ತಿತ್ತು. ನಟ-ನಟಿಯರು ಸುಮಲತಾ ಅವರನ್ನು ಅಮ್ಮನೆಂದೇ ಸಂಭೋದಿಸುತ್ತಿದ್ದರು.

ಪತ್ನಿ ಎದುರಿಗಿದ್ದರೆ ಬೈಗುಳಗಳಿಗೆ ಬ್ರೇಕ್
ಅಂಬರೀಶ್ ಅವರದ್ದು ಒರಟು ಮಾತು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆ, ತಮ್ಮ ಅಭಿಮಾನಿಗಳನ್ನೂ ಬೈದೇ ಮಾತನಾಡಿಸುತ್ತಿದ್ದರು. ಆದರೆ ಅವರ ಗುಣವೆಂದರೆ ಹೆಣ್ಣುಮಕ್ಕಳನ್ನೂ ಎಂದೂ ಬೈದವರಲ್ಲವಂತೆ, ಅದರಲ್ಲಿಯೂ ಸುಮಲತಾ ಅವರು ಎದುರಿಗೆ ಇದ್ದಾಗಲಂತೂ ಬೈಗುಳಗಳನ್ನು ಬಳಸುತ್ತಲೇ ಇರಲಿಲ್ಲವಂತೆ ಅಂಬಿ. ಅದು ಅಂಬಿ ಅವರು ಕುಟುಂಬಕ್ಕೆ, ಪತ್ನಿ ಸುಮಲತಾ ಅವರಿಗೆ ನೀಡುತ್ತಿದ್ದ ಗೌರವ.

ಅತ್ತು-ಅತ್ತು ಹಣ್ಣಾದ ಸುಮಲತಾ
ಅಂಬರೀಶ್ ಅವರು ಶನಿವಾರ ರಾತ್ರಿ ನಿಧನರಾದರು. ಅವರ ಅಂತ್ಯಸಂಸ್ಕಾರ ಆದದ್ದು ಸೋಮವಾರ ಮೂರು ದಿನಗಳ ಕಾಲವೂ ಸುಮಲತಾ ಅವರು ಅನುಭವಿಸಿದ ನೋವು ಕರ್ನಾಟಕವೇ ನೋಡಿದೆ. ಅವರು ಅತ್ತು-ಅತ್ತು ಹಣ್ಣಾದರು. ಒಂದು ಸಮಯದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟರು ಆದರೆ ಅಲ್ಲಿಯೇ ಇದ್ದ ರಾಕ್ಲೈನ್ ವೆಂಕಟೇಶ್ ಮತ್ತು ಯಶ್ ಅವರನ್ನು ಹಿಡಿದು ನಿಲ್ಲಿಸಿದರು. ಅಮರನಾಥ ಅಂಬರೀಶ್ ಅವರೆಡೆಗೆ ಸುಮಲತಾ ಅವರದ್ದು ಆರದ ಪ್ರೇಮ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications