Get Updates
Get notified of breaking news, exclusive insights, and must-see stories!

Budget 2024; ಕರ್ನಾಟಕದ ಯಾವ ರೈಲು ಯೋಜನೆಗೆ ಎಷ್ಟು ಅನುದಾನ?

ಬೆಂಗಳೂರು, ಫೆಬ್ರವರಿ 02: ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಅನ್ನು ಗುರುವಾರ ಮಂಡಿಸಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕದ ರೈಲು ಯೋಜನೆಗಳಿಗೆ ಸಿಕ್ಕಿರುವುದೇನು?.

ಕರ್ನಾಟಕದಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ಬಜೆಟ್ ಮಂಡನೆ ಬಳಿಕ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಸಿಕ್ಕಿರುವ ಅನುದಾನದ ಕುರಿತು ಮಾಹಿತಿ ನೀಡಿದೆ. ರಾಜ್ಯಕ್ಕೆ ಒಟ್ಟು ಸಿಕ್ಕಿರುವ ಅನುದಾನ 7,524 ಕೋಟಿಯಾಗಿದೆ.

2024 Budget What For Karnataka Railway Project

2024-25ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 2.25 ಲಕ್ಷ ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಬಜೆಟ್‌ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ 7,329 ಕೋಟಿ ರೂ. ಅನುದಾನ ಸಿಕ್ಕಿದೆ.

ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಕ್ಕಾಗಿ 2286 ಕೋಟಿ ಅನುದಾ ಮತ್ತು ದ್ವಿಪಥ ಕಾಮಗಾರಿಗಳಿಗೆ 1531 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ 987 ಕೋಟಿ ರೂ. ಅನುದಾನ ಹಂಚಲಾಗಿದೆ.

ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಲಾಗಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 48 ನಿಲ್ದಾಣಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಹೊಸ ರೈಲು ಯೋಜನೆಗಳಿಗೆ ಅನುದಾನ

1. ಗದಗ (ತಳಕಲ್)-ವಾಡಿ ಯೋಜನೆಗೆ 380 ಕೋಟಿ
2. ಗಾಣಿಗೇರಾ-ರಾಯಚೂರು 300 ಕೋಟಿ
3. ತುಮಕೂರು-ದಾವಣಗೆರೆ ವಯಾ ಚಿತ್ರದುರ್ಗ 300 ಕೋಟಿ
4. ತುಮಕೂರು-ರಾಯದುರ್ಗ ವಯಾ ಕಲ್ಯಾಣದುರ್ಗ 250 ಕೋಟಿ
5. ಬಾಗಲಕೋಟೆ-ಕುಡಚಿ 140 ಕೋಟಿ ರೂ.
6. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು 200 ಕೋಟಿ
7. ಬೆಳಗಾವಿ-ಧಾರವಾಡ ವಯಾ ಕಿತ್ತೂರು 50 ಕೋಟಿ
8. ಮಾರಿಕುಪ್ಪಂ-ಕುಪ್ಪಂ 170 ಕೋಟಿ
9. ಕಡೂರು-ಚಿಕ್ಕಮಗಳೂರು-ಹಾಸನ 160 ಕೋಟಿ
10. ಮಗಳೂರು-ಪಾಲಸಮುದ್ರಂ 20 ಕೋಟಿ
11. ಹಾಸನ-ಬೇಲೂರು 5 ಕೋಟಿ

ದ್ವಿಪಥ ಕಾಮಗಾರಿಗೆ ಅನುದಾನ

1. ಗದಗ-ಹೊಟಗಿ ಮಾರ್ಗ 197 ಕೋಟಿ ರೂ.
2. ಪೆನುಕೊಂಡ-ಧರ್ಮಾವರಂ 180.4 ಕೋಟಿ
3. ಬೈಯಪ್ಪನಹಳ್ಳಿ-ಹೊಸೂರು 150 ಕೋಟಿ
4. ಯಶವಂತಪುರ-ಚನ್ನಸಂದ್ರ 150 ಕೋಟಿ
5. ಲೋಂಡಾ-ಮೀರಜ್ 200 ಕೋಟಿ
6. ಹುಬ್ಬಳ್ಳಿ-ಚಿಕ್ಕಜಾಜೂರು 94 ಕೋಟಿ
7. ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ 260 ಕೋಟಿ
8. ಹೊಸಪೇಟೆ-ತಿಂಗೈ ಘಾಟ್-ವಾಸ್ಕೋ ಡಾ ಗಾಮ 400 ಕೋಟಿ
9. ಹೊಸೂರು-ಒಮಲೂರು 100.1 ಕೋಟಿ.

ರಾಜ್ಯದ ವಿವಿಧ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ 341 ಕೋಟಿ, ಸಂಚಾರ ನಿರ್ವಹಣೆಗಾಗಿ 126.11 ಕೋಟಿ, ಹೊಸ ಮಾರ್ಗದ ಸಮೀಕ್ಷೆ/ ದ್ವಿಪಥ ಸಮೀಕ್ಷೆ ಮುಂತಾದವುಗಳಿಗೆ ನೈಋತ್ಯ ರೈಲ್ವೆಗೆ 22 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಸಂಸದರ ಧನ್ಯವಾದ; ಶಿವಮೊಗ್ಗ ಲೋಕಸಭಾ ಕ್ಷೇತ್ರದ ರೈಲ್ವೆ ಸೇವೆಯ ವಿಸ್ತರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ರೈಲ್ವೆ ಇಲಾಖೆಗೆ ನೀಡಿದ ಅನುದಾನದಲ್ಲಿ, ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ನೂತನ ರೈಲ್ವೆ ಸಂಪರ್ಕ ಆರಂಭಿಸಲು 200 ಕೋಟಿ ರೂಪಾಯಿಯನ್ನು ರೈಲ್ವೆ ಸಚಿವಾಲಯ ಮೀಸಲಿಟ್ಟಿದೆ. ಈ ಮಹತ್ವದ ಕೊಡುಗೆ ನೀಡಿದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರಿಗೆ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‍ರವರಿಗೆ ಹಾಗೂ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‍ರವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.

ಬಜೆಟ್ ಭಾಷಣದಲ್ಲಿ ಪ್ರಮುಖವಾಗಿ ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಪಿಎಂ ಗತಿಶಕ್ತಿ ಯೋಜನೆ ಅನ್ವಯ ಇವುಗಳನ್ನು ಗುರುತಿಸಲಾಗಿದೆ ಇವು ಇಂಧನ, ಗಣಿ ಮತ್ತು ಸಿಮೆಂಟ್ ಕಾರಿಡಾರ್, ಬಂದರುಗಳನ್ನು ಸಂಪರ್ಕಿಸುವ ಕಾರಿಡಾರ್ ಮತ್ತು ಹೆಚ್ಚು ಸಂಚಾರ ದಟ್ಟಣೆ ಇರುವ ಕಾರಿಡಾರ್‌ ಸೇರಿವೆ.

ಪಿಎಂ ಗತಿಶಕ್ತಿ ಯೋಜನೆಯಡಿ ವಿವಿಧ ಮಾದರಿಯ ಸಾರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಈ ಕಾರಿಡಾರ್‌ಗಳ ನಿರ್ಮಾಣವಾಗಲಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಮಯ, ಹಣ ಉಳಿತಾಯಕ್ಕೆ ಸಹಾಯಕವಾಗಲಿದೆ. ಇದರಿಂದಾಗಿ ಅಭಿವೃದ್ಧಿಗೂ ಸಹಾಯಕವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+