ಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯ
ಹರಾರೆ (ಜಿಂಬಾಬ್ವೆ), ನವೆಂಬರ್ 16: ಬುಧವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಜಿಂಬಾಬ್ವೆಯ ಆಡಳಿತವನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಮೂಲಕ ಅಧ್ಯಕ್ಷ ರಾಬರ್ಟ್ ಮುಗಾಬೆ 37 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ.
ಇದು ಕ್ಷಿಪ್ರ ಕ್ರಾಂತಿ ಅಲ್ಲ ಎಂದು ಮೇಜರ್ ಜನರನ್ ಸಿಬುಸಿಸೊ ಮೊಯೊ ತಿಳಿಸಿದ್ದು, 'ಅಧ್ಯಕ್ಷ ಮುಗಾಬೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ಮುಂದುವರಿಸಲಾಗಿದೆ. ಅವರೆಲ್ಲಾ ಸುರಕ್ಷಿತವಾಗಿದ್ದು ಆತಂಕಪಡುವ ಅಗತ್ಯವಿಲ್ಲ," ಎಂದು ಹೇಳಿದ್ದಾರೆ.
ಮುಗಾಬೆ ಗೃಹಬಂಧನದಲ್ಲಿರುವುದನ್ನು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಖಚಿತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ದಕ್ಷಿಣ ಆಫ್ರಿಕಾ ಸರಕಾರ 'ಮುಗಾಬೆ ಜತೆ ಜುಮಾ ಮಾತುಕತೆ ನಡೆಸಿದ್ದಾರೆ. ಮುಗಾಬೆ ಸುರಕ್ಷಿತವಾಗಿದ್ದಾರೆ' ಎಂದು ತಿಳಿಸಿದೆ.

ಸಂಸತ್ ಭವನದ ಹೊರಗೆ ಸೇನಾ
ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿರುವ ಸಂಸತ್ ಭವನದ ಹೊರಗೆ ಸೇನಾ ಟ್ಯಾಂಕ್ ಗಳು ಜಮಾಯಿಸಿವೆ. ಪ್ರಮುಖ ರಸ್ತೆಗಳಲ್ಲಿ ಸೇನೆಯ ತುಕಡಿಗಳು ಕಾಣಿಸಿದ್ದು ಮುಗಾಬೆ ನಿವಾಸದ ಸುತ್ತ ಗುಂಡಿನ ಮೊರೆತವೂ ಕೇಳಿಸಿದೆ.
"ಸೇನೆಯೇ ಆಡಳಿತ ನಡೆಸುವುದಿಲ್ಲ. ಗುರಿಯನ್ನು ತಲುಪಿದ ಬಳಿಕ ದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಲಿದೆ," ಎಂದು ಜನರನ್ ಸಿಬುಸಿಸೊ ಮೊಯೊ ಹೇಳಿದ್ದಾರೆ.
'ಇದು ಸೇನಾ ಮುಖ್ಯಸ್ಥ ಜನರಲ್ ಕಾನ್ಸ್ಟಂಟಿನೊ ಚಿವೆಂಗಾ ಅವರ ದೇಶದ್ರೋಹದ ನಡವಳಿಕೆ' ಎಂದು ಆಡಳಿತರೂಢ ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯನ್-ಪೆಟ್ರಿಯಾಟಿಕ್ ಫ್ರಂಟ್ (ಝಎಎನ್ಯು-ಪಿಎಫ್) ಆಕ್ರೋಶ ವ್ಯಕ್ತಪಡಿಸಿದೆ.

37 ವರ್ಷಗಳ ಸರ್ವಾಧಿಕಾರಿ
ಬ್ರಿಟನ್ನಿಂದ 1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಅದಾದ ನಂತರ ಈ ದೇಶವನ್ನು ಆಳುತ್ತಾ ಬಂದ ಏಕಮೇವ ನಾಯಕ ಅಂದರೆ ಅದು ರಾಬರ್ಟ್ ಮುಗಾಬೆ.
ಸೇನಾ ಕ್ರಾಂತಿಗೂ ಮುನ್ನ 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು ಮುಗಾಬೆ. ಸದ್ಯ ಅವರಿಗೀಗ 93 ವರ್ಷ ವಯಸ್ಸು.
ಹಾಗೆ ನೋಡಿದರೆ ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು. ದೇಶದಲ್ಲಿ ಸಾಮೂಹಿಕ ವಲಸೆ, ಅಕ್ರಮ ಮತದಾನ, ಹಳ್ಳ ಹಿಡಿದ ಆರ್ಥಿಕತೆಗಳು ಪ್ರಮುಖ ಸಮಸ್ಯೆಗಳಾಗಿ ಗುರುತಿಸಿಕೊಂಡಿದ್ದವು.

ಸೇನೆ - ಸರಕಾರ ಭಿನ್ನಾಭಿಪ್ರಾಯ
ಮುಗಾಬೆ ದೀರ್ಘ ಕಾಲ ಅಧಿಕಾರದಲ್ಲಿರಲು ಸೇನೆಯ ಪಾತ್ರ ಪ್ರಮುಖವಾಗಿತ್ತು. ಮುಗಾಬೆ ಅವರ ಸರ್ವಾಧಿಕಾರ ಆಡಳಿತಕ್ಕೆ ಸೇನೆ ಭರಪೂರ ನೆರವು ನೀಡಿತ್ತು. ಆದರೆ ಇತ್ತೀಚೆಗೆ ಸೇನೆ ಅಧ್ಯಕ್ಷರ ವಿರುದ್ಧ ಮುನಿಸಿಕೊಂಡಿತ್ತು.
ಇದಕ್ಕೆ ಕಾರಣ ಮುಗಾಬೆಯವರ ಕುಟುಂಬ ರಾಜಕಾರಣ.

ಅಧ್ಯಕ್ಷಗಿರಿಗೆ ಪತ್ನಿ ಕರೆತರುವ ಯತ್ನ
ಇತ್ತೀಚೆಗೆ ಮುಗಾಬೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪತ್ನಿ 52 ವರ್ಷದ ಗ್ರೇಸ್ ಮುಗಾಬೆ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿಸಲು ಪ್ರಯತ್ನ ನಡೆಸಿದ್ದರು. ಇದು ಸೇನೆಯ ಹಿರಿಯ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ.
ಜತೆಗೆ ಉಪಪಾಧ್ಯಕ್ಷ ಎಮ್ಮರ್ಸನ್ ನಂಗಾಗ್ವಾರನ್ನು ಮುಗಾಬೆ ವಜಾ ಮಾಡಿದ್ದು ಸೇನಾ ಮುಖ್ಯಸ್ಥ ಕಾನ್ಸ್ಟಂಟಿನೊ ಚಿವೆಂಗಾ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸೇನೆ ಆಡವಳಿತವನ್ನು ಕೈಗೆ ತೆಗೆದುಕೊಂಡಿದೆ.
ಸದ್ಯಕ್ಕೆ 'ಮುಗಾಬೆ ಆಡಳಿತದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ' ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications