Polar Bear: ಆಹಾರಕ್ಕಾಗಿ 687 ಕಿಲೋ ಮೀಟರ್ ಈಜಾಡಿದ ಹಿಮಕರಡಿ, ಬೆಚ್ಚಿಬಿದ್ದ ಜಗತ್ತು!
ವಾತಾವರಣ ಬದಲಾವಣೆ & ತಾಪಮಾನ ಏರಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆ ತಂದೊಡ್ಡಿದೆ. ಮನುಷ್ಯರ ದುರಾಸೆ ಪರಿಣಾಮ ಪ್ರಕೃತಿ ಮಾತೆ ಸಾವಿರಾರು ಸಂಕಷ್ಟಗಳನ್ನು ಎದುರಿಸುವಂತೆ ಆಗಿದೆ. ಭವಿಷ್ಯದ ಬಗ್ಗೆ ಭಯ ಮೂಡಿರುವ ಸಮಯದಲ್ಲೇ, ಅಲಾಸ್ಕಾದ ನೆಲದಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ. ಈ ಮೂಲಕ ಭೂಮಿ ವಿನಾಶದ ಕಡೆಗೆ ಜಾರಿದೆ ಎಂಬ ವಾದಕ್ಕೆ ಸಾಕ್ಷ್ಯ ಸಂಗ್ರಹವಾಗಿದೆ.
ತಾಪಮಾನ ಏರಿಕೆ ಪರಿಣಾಮ ಸಮುದ್ರಮಟ್ಟ ಕೂಡ ಹೆಚ್ಚಾಗುತ್ತಿದ್ದು, ಇದೇ ರೀತಿ ಮನುಷ್ಯ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿ ಸರ್ವನಾಶ ಆಗುವುದು ಗ್ಯಾರಂಟಿ. ವಿಜ್ಞಾನಿಗಳು ಕೂಡ ಈ ಬಗ್ಗೆ ಪದೇ ಪದೇ ಎಚ್ಚರಿಕೆಯ ಸಂದೇಶ ನೀಡುತ್ತಲೇ ಬಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ಇರಲಿದೆ ಎಂಬ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ. ಇಂತಹ ಸಮಯದಲ್ಲೇ, ಉತ್ತರ ಧ್ರುವ ಪ್ರದೇಶದಲ್ಲಿ ಹಿಮ ಕರಗಿ, ಕರಗಿ ನೀರಾಗುತ್ತಿದ್ದು ಸರ್ವನಾಶದ ಮುನ್ಸೂಚನೆ ಸಿಕ್ಕಿದೆ.

ಆಹಾರಕ್ಕಾಗಿ 687 ಕಿ.ಮೀ. ಅಲೆದಾಟ!
ಹೌದು, ಭೂಮಿ ಮೇಲಿನ ಜೀವ ವೈವಿಧ್ಯ ನಾಶವಾಗಿ ಹೋಗುತ್ತಿದೆ. ಈಗಾಗಲೇ ಬಹುತೇಕ ಜೀವಿಗಳು ಅಳಿಸಿ ಹೋಗಿದ್ದು, ಈ ಸಾಲಿಗೆ ಹಿಮಕರಡಿ ಕೂಡ ಸೇರ್ಪಡೆ ಆಗುತ್ತಿವೆ. ಈಗಿನ ವಾತಾವರಣ ನೋಡಿದರೆ, ಇನ್ನು ಕೆಲವೇ ವರ್ಷದಲ್ಲಿ ಹಿಮಕರಡಿಗಳು ಭೂಮಿಯ ಮೇಲೆ ಇದ್ದವು ಎಂಬುದಕ್ಕೆ ಪುರಾವೆ ಕೂಡ ಇರುವುದಿಲ್ಲ ಅಂತಾರೆ ವಿಜ್ಞಾನಿಗಳು. ಇಂತಹ ಭಾರಿ ಗಂಭೀರ ಆರೋಪಗಳ ನಡುವೆಯೇ ಆಹಾರ ಸಿಗದೆ ಹಿಮಕರಡಿ ಒಂದು ಸುಮಾರು 687 ಕಿಲೋ ಮೀಟರ್ ಈಜಾಡಿಕೊಂಡು ಬಂದಿದೆ.
ವಿನಾಶದ ಅಂಚಿಗೆ ಹಿಮಕರಡಿಗಳು
ಅಲಾಸ್ಕ ಭಾಗದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಮೆರಿಕದ ವಿಜ್ಞಾನಿಗಳು ಹಿಮಕರಡಿಗೆ ಅಳವಡಿಕೆ ಮಾಡಿದ್ದ ರೆಡಿಯೋ ಕಾಲರ್ ಮೂಲಕ ಈ ಸತ್ಯ ಬಹಿರಂಗವಾಗಿದೆ. ಹೀಗೆ ಹಿಮಕರಡಿಗಳು ಎಷ್ಟೆಲ್ಲಾ ಸಂಕಷ್ಟವನ್ನು ಅನುಭವಿಸುತ್ತಿವೆ? ವಾತಾವರಣ ಬದಲಾವಣೆ & ತಾಪಮಾನ ಏರಿಕೆ ಪರಿಣಾಮ ಹಿಮಕರಡಿಗಳು ವಿನಾಶದ ಅಂಚಿಗೆ ಹೇಗೆ ಸಾಗುತ್ತಿವೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಹಾಗೇ, ಇನ್ನೊಂದು ಕಡೆ ಮನುಷ್ಯರ ದುರಾಸೆಯ ಬಗ್ಗೆ ಕೂಡ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಒಟ್ನಲ್ಲಿ ಈ ಘಟನೆ ಜಾಗತಿಕ ಮಟ್ಟದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದ್ದು, ಭವಿಷ್ಯದಲ್ಲಿ ಭೂಮಿ ಮೇಲಿನ ಜೀವ ವೈವಿಧ್ಯ ರಕ್ಷಣೆಗೆ ಮತ್ತೊಮ್ಮೆ ಕೂಗು ಎದ್ದಿದೆ. ಅಲ್ಲದೆ, ಈಗಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಜೀವ ಸಂಕುಲದ ರಕ್ಷಣೆ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಹೀಗಾಗಿ ಮನುಷ್ಯರು ಇನ್ನಾದರೂ ಎಚ್ಚೆತ್ತುಕೊಂಡು ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications