ನಮಗೆ ಎದುರಾದರೆ ದಕ್ಷಿಣದ ಮೇಲೆ ಪರಮಾಣು ದಾಳಿ: ಉತ್ತರ ಕೊರಿಯಾ!
ಪ್ಯೊಂಗ್ಯಾಂಗ್, ಏಪ್ರಿಲ್ 5: ಉತ್ತರ ಕೊರಿಯಾ ಯುದ್ಧವನ್ನು ವಿರೋಧಿಸುತ್ತದೆ, ಆದರೆ ದಕ್ಷಿಣ ಕೊರಿಯಾ ಮಿಲಿಟರಿ ಮುಖಾಮುಖಿ ನಡೆಸಲು ಮುಂದಾದರೆ, ದಾಳಿಯನ್ನು ನಡೆಸಿದರೆ ನಾವು ದಕ್ಷಿಣದ ಮೇಲೆ ಪರಮಾಣು ದಾಳಿ ಮಾಡಬೇಕಾಗುತ್ತದೆ ಎಂದು ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಮಂಗಳವಾರ ಹೇಳಿದ್ದಾರೆ.
ಈ ನಡುವೆ ಸರ್ಕಾರ ಮತ್ತು ಆಡಳಿತ ಪಕ್ಷದ ಹಿರಿಯ ಅಧಿಕಾರಿ ಕಿಮ್ ಯೋ ಜೊಂಗ್, ದಕ್ಷಿಣ ಕೊರಿಯಾದ ರಕ್ಷಣಾ ಸಚಿವರು ಉತ್ತರದ ಮೇಲಿನ ದಾಳಿಯ ಕುರಿತು ಚರ್ಚಿಸುವ ಇತ್ತೀಚಿನ ಹೇಳಿಕೆಗಳನ್ನು "ಬಹಳ ದೊಡ್ಡ ತಪ್ಪು" ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸುಹ್ ವೂಕ್ ಶುಕ್ರವಾರ ತಮ್ಮ ದೇಶದ ಮಿಲಿಟರಿಯು ಸುಧಾರಿತ ಪಡೆಯನ್ನು ಹೊಂದಿದೆ. ಸುಧಾರಿತ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇದೆ. ವಿವಿಧ ಕ್ಷಿಪಣಿಗಳನ್ನು ಹೊಂದಿದೆ ಎಂದು ಹೇಳಿದರು. ಹಾಗೆಯೇ "ಉತ್ತರ ಕೊರಿಯಾದಲ್ಲಿ ಯಾವುದೇ ಪ್ರದೇಶದ ಮೇಲೆ ನಿಖರವಾಗಿ ಮತ್ತು ತ್ವರಿತವಾಗಿ ದಾಳಿ ನಡೆಸುವ ಸಾಮರ್ಥ್ಯ ನಮ್ಮಲ್ಲಿ ಇದೆ," ಎಂದಿದ್ದಾರೆ.

ಈ ವರ್ಷ ಹೆಚ್ಚು ಶಕ್ತಿಶಾಲಿ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ
ಉತ್ತರ ಕೊರಿಯಾ ಈ ವರ್ಷ ಹೆಚ್ಚು ಶಕ್ತಿಶಾಲಿ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಈ ಹಿನ್ನೆಲೆಯಿಂದಾಗಿ ಸಿಯೋಲ್ ಮತ್ತು ವಾಷಿಂಗ್ಟನ್ನ ಅಧಿಕಾರಿಗಳು ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ದಕ್ಷಿಣವು ಪೂರ್ವಭಾವಿ ದಾಳಿಯಂತಹ ಯಾವುದೇ "ಅಪಾಯಕಾರಿ ಮಿಲಿಟರಿ ಕ್ರಮ" ವನ್ನು ತೆಗೆದುಕೊಂಡರೆ ಪ್ಯೊಂಗ್ಯಾಂಗ್ ಸಿಯೋಲ್ನಲ್ಲಿನ ಪ್ರಮುಖ ಗುರಿಗಳನ್ನು ನಾಶಪಡಿಸುತ್ತದೆ ಎಂದು ಕಿಮ್ ಮತ್ತು ಇನ್ನೊಬ್ಬ ಉತ್ತರ ಕೊರಿಯಾದ ಅಧಿಕಾರಿ ಎಚ್ಚರಿಸಿದ್ದಾರೆ.

ತನ್ನ ಎರಡನೇ ಹೇಳಿಕೆಯಲ್ಲಿ, ಮಂಗಳವಾರ, ಕಿಮ್ ಯೋ ಜೊಂಗ್ ಪ್ಯೊಂಗ್ಯಾಂಗ್ ಯುದ್ಧವನ್ನು ವಿರೋಧಿಸುತ್ತದೆ, ಅದು ಪರ್ಯಾಯ ದ್ವೀಪವನ್ನು ಅದರಷ್ಟಕ್ಕೆ ಬಿಡುತ್ತದೆ, ದಕ್ಷಿಣ ಕೊರಿಯಾವನ್ನು ಅದರ ಪ್ರಮುಖ ಶತ್ರು ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು. "ಬೇರೆ ರೀತಿಯಲ್ಲಿ ಹೇಳುವುದಾದರೆ, ದಕ್ಷಿಣ ಕೊರಿಯಾದ ಸೇನೆಯು ನಮ್ಮ ರಾಜ್ಯದ ವಿರುದ್ಧ ಯಾವುದೇ ಮಿಲಿಟರಿ ಕ್ರಮವನ್ನು ತೆಗೆದುಕೊಳ್ಳದ ಹೊರತು, ಅದನ್ನು ನಮ್ಮ ದಾಳಿಯ ಗುರಿಯಾಗಿ ಪರಿಗಣಿಸಲಾಗುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದರು.
"ಇದು ಕೇವಲ ಬೆದರಿಕೆ ಅಲ್ಲ. ಇದು ದಕ್ಷಿಣ ಕೊರಿಯಾದ ಸಂಭವನೀಯ ಅಜಾಗರೂಕ ಮಿಲಿಟರಿ ಕ್ರಮಕ್ಕೆ ನಮ್ಮ ಪ್ರತಿಕ್ರಿಯೆಯ ವಿವರವಾದ ಹೇಳಿಕೆ," ಎಂದು ಕೂಡಾ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಷ್ಯಾ ಉಕ್ರೇನ್ ಯುದ್ದದಲ್ಲಿ ರಷ್ಯಾವು ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಆತಂಕ ಉಂಟಾಗಿದೆ. ಈ ನಡುವೆ ಕಿಮ್ ಯೋ ಜೊಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications