ಲಾಡೆನ್ ಅಂತಿಮ ಯಾತ್ರೆ ರಹಸ್ಯ ಬಹಿರಂಗ
ವಾಷಿಂಗ್ಟನ್, ಅ. 7 : ಒಸಮಾ ಬಿನ್ ಲಾಡನ್ ಶವ ಏನು ಮಾಡಲಾಯಿತು? ಎಂಬ ಪ್ರಶ್ನೆಗೆ ಅಮೆರಿಕದ ಸೈನ್ಯದಿಂದಲೇ ಉತ್ತರ ಬಂದಿದೆ. ಲಾಡೆನ್ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಅಮೆರಿಕ ಸೈನ್ಯ ಆತನ ದೇಹವನ್ನು ಏನು ಮಾಡಿತ್ತು ಎಂಬುದರ ಬಗ್ಗೆ ಇಲ್ಲಿಯವರೆಗೆ ಸ್ಪಷ್ಟ ಉತ್ತರ ನೀಡಿರಲಿಲ್ಲ. ಕೇವಲ ಸಮುದ್ರದಲ್ಲಿ ಎಸೆಯಲಾಗಿದೆ ಎಂದಷ್ಟೇ ಹೇಳಿತ್ತು.
ಪಾಕಿಸ್ತಾನದ ಮೂಲೆಯೊಂದರಲ್ಲಿ ಅಲ್ ಖಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಕೊಂದ ಮೇಲೆ ಆತನ ಶವವನ್ನು ಕಪ್ಪು ಚೀಲದಲ್ಲಿ ತುಂಬಿ ಮೂರು ನೂರು ಪೌಂಡ್ ತೂಗುವ ಕಬ್ಬಿಣದ ಚೈನುಗಳಲ್ಲಿ ಬಂಧಿಸಿ ಸಮುದ್ರಕ್ಕೆ ಎಸೆಯಲಾಯಿತು ಎಂದು ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ಮಾಜಿ ನಿರ್ದೇಶಕ ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೋನ್ ಎಡ್ವರ್ಡ್ ಪನೆಟ್ಟಾ ಸ್ಪಷ್ಟಪಡಿಸಿದ್ದಾರೆ.[ಲಾಡೆನ್ ಅಳಿಯನ ಬಂಧನ, ಅಮೆರಿಕಕ್ಕೆ ಭಾರಿ ಯಶಸ್ಸು]

ಯೋಜನೆಯಂತೆ ವಿಶ್ವವನ್ನೇ ನಡುಗಿಸಿದ್ದ ಕುಖ್ಯಾತ ಭಯೋತ್ಪಾದಕನ ದೇಹವನ್ನು ವಿಶೇಷ ವಿಮಾನವೊಂದರಲ್ಲಿ ಸಾಗಿಸಲಾಯಿತು ಎಂದು ಹೇಳಿದ್ದಾರೆ.
ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಯಿತು. ಬಿಳಿ ಬಣ್ಣದ ಬಟ್ಟೆಯೊಂದನ್ನು ಆತನ ದೇಹಕ್ಕೆ ಸುತ್ತಿ ಅರೇಬಿಕ್ನ ಪ್ರಾರ್ತನೆಗಳನ್ನು ಸಲ್ಲಿಸಲಾಯಿತು. ನಂತರ ಕಪ್ಪು ಚೀಲದಲ್ಲಿ ಶವ ಇರಿಸಲಾಯಿತು ಎಂದು ಪನೆಟ್ಟಾ ತಮ್ಮ ಪುಸ್ತಕ 'ವರ್ಥಿ ಫೈಟ್ಸ್' (ಯುದ್ಧ ಮತ್ತು ಶಾಂತಿ ಕಾಲದ ನಾಯಕತ್ವದ ಅನುಭವ) ದಲ್ಲಿ ಬರೆದುಕೊಂಡಿದ್ದಾರೆ. [ಬ್ರಿಟನ್ ಪ್ರಜೆ ಕತ್ತು ಕತ್ತರಿಸಿದ ಇರಾಕಿ ಉಗ್ರರು]
ಮೂರು ನೂರು ಪೌಂಡ್ ತೂಕದ ಕಬ್ಬಿಣದ ಚೈನುಗಳಿಂದ ಚೀಲವನ್ನು ಸುತ್ತಲಾಯಿತು. ಯಾವ ಕಾರಣಕ್ಕೂ ಸಮುದ್ರದಿಂದ ಶವ ಮೇಲೆ ಬರಬಾರದು ಎಂಬುದೇ ಇದರ ಉದ್ದೇಶವಾಗಿತ್ತು. ಹಡಗಿನ ತುದಿಯಲ್ಲಿ ಟೆಬಲ್ವೊಂದನ್ನು ಇರಿಸಿ ದೇಹವನ್ನು ನೀರಿಗೆ ದೂಡಲಾಯಿತು. ಶವ ನೀರಿಗೆ ಹಾಕಿದ ಜಾಗದ ಸ್ಷಷ್ಟ ಚಿತ್ರಣವಿಲ್ಲ. ನೀರಿಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಲಾಡೆನ್ ದೇಹ ಕಣ್ಮರೆಯಾಯಿತು ಎಂದು ಪನೆಟ್ಟಾ ಪುಸ್ತಕದಲ್ಲಿ ತಿಳಿಸಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications