ವಿಶ್ವಕಪ್: ರೊನಾಲ್ಡೊಗೆ ಮಂತ್ರವಾದಿ ಕಾಟ ಶುರು
ಬೆಂಗಳೂರು, ಜೂ.9: ಪೋರ್ಚುಗಲ್ ನ ಅಗ್ರಗಣ್ಯ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊಗೆ ಮಂತ್ರವಾದಿ ಕಾಟ ಶುರುವಾಗಿದೆಯಂತೆ. ಘಾನಾ ಮೂಲದ ಮಂತ್ರವಾದಿಯೊಬ್ಬ ರೊನಾಲ್ಡೋ ಮೇಲೆ ತನ್ನ ಪ್ರಯೋಗ ಆರಂಭಿಸಿದ್ದು ವಿಶ್ವಕಪ್ ನಲ್ಲಿ ರೊನಾಲ್ಡೋ ಕಾಲು ಎಂದಿನ ಲಯ ಕಾಣುವುದು ಅನುಮಾನ ಎಂಬ ಸುದ್ದಿ ಹಬ್ಬಿದೆ.
ವಿಶ್ವಕಪ್ ಫುಟ್ಬಾಲ್ ಸಂದರ್ಭದಲ್ಲಿ ಈ ರೀತಿ ಅಂತೆ ಕಂತೆಗಳಿಗೇನು ಕಡಿಮೆಯಿಲ್ಲ. ಆಕ್ಟೋಪಸ್, ಗಿಣಿ, ಆನೆ, ಮೊಸಳೆ ಭವಿಷ್ಯ, ಪಾರಿವಾಳ ಮೂಲಕ ಮಾಟ ಎಲ್ಲವೂ ಮಾಮೂಲಿ, ಕಳೆದ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾರಿವಾಳ ಮೂಲಕ ಮಾಟ ಮಾಡಿಸಿ ಸೋಲಿಸಲಾಯಿತು ಎಂಬ ಸುದ್ದಿ ಹಬ್ಬಿತ್ತು.
ಕಳೆದ ಬಾರಿ ಫೀಫಾ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯವೊಂದರಲ್ಲಿ ಬಲಿಷ್ಠ ತಂಡ ಇಂಗ್ಲೆಡ್ ದುರ್ಬಲ ಆಲ್ಜೀರಿಯಾ ವಿರುದ್ಧ ಡ್ರಾ ಸಾಧಿಸಲು ಹೆಣಗಾಡಿತ್ತು. ಆಫ್ರಿಕಾದಲ್ಲಿ ಮಾಟ ಮಂತ್ರ, ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಹೀಗಾಗಿ ಪಾರಿವಾಳ ಮೂಲಕ ಇಂಗ್ಲೆಂಡ್ ತಂಡಕ್ಕೆ ಮೋಡಿ ಮಾಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು. [ಇನ್ನಷ್ಟು ಸುದ್ದಿ ಇಲ್ಲಿ ಓದಿ]

ಈಗ ಘಾನಾ ದೇಶದ ನಾನಾ ಕುವಾಕು ಬೊನ್ಸಾಮ್ ಎಂಬ ಹೆಸರಿನ ಮಂತ್ರವಾದಿಯೊಬ್ಬ ಬ್ರೆಜಿಲ್ಲಿನಲ್ಲಿ ಪೋರ್ಚುಗಲ್ ಆಟವೇನು ನಡೆಯುವುದಿಲ್ಲ, ರೊನಾಲ್ಡೊ ಯಶ ಸಾಧಿಸದಂತೆ ನಾನೇ ಮಾಟ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ನಡೆಯುತ್ತದೆ. ರೊನಾಲ್ಡೊ ಕಾಲಿಗೆ ಪೆಟ್ಟು ಮಾಡಿಕೊಳ್ಳಲಿದ್ದು, ಪೋರ್ಚುಗಲ್ ಟೂರ್ನಿಯಿಂದ ಬೇಗನೇ ಹೊರಬೀಳಲಿದೆ ಎಂದಿದ್ದಾನೆ.
ಘಾನಾ ಘನ ವೈದ್ಯದ ಹೇಳಿಕೆಗೆ ತಕ್ಕಂತೆ ಅಭ್ಯಾಸ ಪಂದ್ಯಗಳಲ್ಲಿ ರೊನಾಲ್ಡೊ ಸರಿಯಾಗಿ ಆಡಿಲ್ಲ, ಕೆಲವು ಪಂದ್ಯಗಳಿಂದಲೇ ಹಿಂದೆ ಸರಿದಿದ್ದಾರೆ. ವಿಶ್ವಕಪ್ ನಲ್ಲಿ ಘಾನಾ ಜಿ ಗುಂಪಿನಲ್ಲಿದ್ದು ತನ್ನ ಮೊದಲ ಪಂದ್ಯವನ್ನು ಭಾನುವಾರ(ಜೂ.22) ರಂದು ಜರ್ಮನಿ ವಿರುದ್ಧ ಆಡಲಿದೆ. ಜಿ ಗುಂಪಿನಲ್ಲಿ ಪೋರ್ಚುಗಲ್ ಹಾಗೂ ಜರ್ಮನಿ ಮುಂದಿನ ಹಂತಕ್ಕೆ ತಲುಪುವ ನಿರೀಕ್ಷೆಯಿದ್ದು, ಯುಎಸ್ ಎ ಹಾಗೂ ಘಾನಾ ಇತರೆ ತಂಡಗಳಾಗಿವೆ.
ಘಾನಾ ಹಾಗೂ ಪೋರ್ಚುಗಲ್ ನಡುವೆ ಜೂ.26 ರಂದು ಪಂದ್ಯ ನಡೆಯಲಿದ್ದು ಅಂದಿನ ದಿನವಾದರೂ ರೊನಾಲ್ಡೊ ಆಡದಂತೆ ಮಾಡುವಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ಮಂತ್ರವಾದಿ ಬಡಬಡಾಯಿಸಿದ್ದಾನೆ. ಅವರ ಮಾತನ್ನು ನೀವೇ ಕೇಳಿ ನೋಡಿ.ಈ ವಿಡಿಯೋ ಸುಮಾರು 267,027 ಬಾರಿ ನೋಡಲ್ಪಟ್ಟಿದೆ. ನಾಲ್ಕು ನೂರಿಗೂ ಅಧಿಕ ಕಾಮೆಂಟ್ ಗಳು ಸಿಕ್ಕಿವೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications