7ತಿಂಗಳ ಬಂಧನದಿಂದ ಹೆಂಡತಿಯನ್ನು ಬಿಡಿಸಿ, ಸುಷ್ಮಾಗೆ ಬೆಂಗಳೂರಿಗನ ಮೊರೆ
ಇಲ್ಲಿಂದ ಹೋಗುವಾಗ ರಂಜಿತಾಗೆ ತಿಂಗಳಿಗೆ 30,000 ಸಂಬಳ ಎಂದು ಮಾತುಕತೆಯಾಗಿತ್ತು. ಆದರೆ ಸೌದಿ ಅರೇಬಿಯಾಕ್ಕೆ ಹೋದ ಮೇಲೆ ರಂಜಿತಾಗೆ ಒಂದು ರೂಪಾಯಿಯು ಸಂಬಳ ನೀಡಿಲ್ಲ. ಮಾತ್ರವಲ್ಲ ಆಕೆಗೆ ಹಿಂಸೆ ನೀಡಲಾಗುತ್ತಿತ್ತು.
ಬೆಂಗಳೂರು, ಮಾರ್ಚ್ 5: ಪ್ರಭಾಕರನ್ ಮತ್ತು ರಂಜಿತಾ ತಮಿಳುನಾಡು ಮೂಲದವರಾದರೂ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. 2016ರ ಜೂನಿನಲ್ಲಿ ಮಗಳ ಮದುವೆಗೆಂದು ಬಡ್ಡಿ ವ್ಯಾಪಾರಿಯ ಬಳಿ ತೆಗೆದ ಸಾಲ ಇವರ ಬದುಕನ್ನೇ ಬರ್ಬಾದ್ ಮಾಡಿ ಹಾಕಿತು.
ಸಾಲ ತೀರಿಸಲಾಗದೆ ಕೊನೆಗೆ ಹೆಚ್ಚಿನ ಸಂಬಳದ ಉದ್ಯೋಗ ಅರಸಲು ಆರಂಭಿಸಿದರು. ಆಗ ಕಣ್ಣಿಗೆ ಕಂಡಿದ್ದು ವಿದೇಶಕ್ಕೆ ಹೋಗುವ ಆಲೋಚನೆ. ಬೆಂಗಳೂರಿನ ಯಾವುದೋ ಟ್ರಾವೆಲ್ ಏಜೆಂಟರ ಬಳಿ ಕೆಲಸ ಇದೆಯಾ ಎಂದು ಕೇಳಿದರು. ಮನೆ ಕೆಲಸಕ್ಕೆ ರಂಜಿತಾಗೆ ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿದೆ ಎಂಬ ಸುದ್ದಿ ಗೊತ್ತಾಯಿತು. ರಂಜಿತಾ ಸೌದಿಗೆ ಹೊರಟು ನಿಂತರು.['ನಿನ್ನ ದೇಶಕ್ಕೆ ತೊಲಗು' ಎಂದು ಕಿರುಚಿ ಅಮೆರಿಕಾದಲ್ಲಿ ಭಾರತೀಯನಿಗೆ ಗುಂಡು]

ಬೆಂಗಳೂರಿನಿಂದ ದಂಪತಿಗಳಿಬ್ಬರೂ ದೆಹಲಿಗೆ ಹೋಗಿ ಅಲ್ಲಿಂದ ರಂಜಿತಾರನ್ನು ಆಗಸ್ಟ್ 12, 2016ರಂದು ಸೌದಿಗೆ ಕಳುಹಿಸಲಾಯಿತು. ಆಗ ದಂಪತಿಗಳಿಬ್ಬರ ಬಳಿ ಏಜೆಂಟರುಗಳು ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡರು.
ಇಲ್ಲಿಂದ ಹೋಗುವಾಗ ರಂಜಿತಾಗೆ ತಿಂಗಳಿಗೆ 30,000 ಸಂಬಳ ಎಂದು ಮಾತುಕತೆಯಾಗಿತ್ತು. ಆದರೆ ಸೌದಿ ಅರೇಬಿಯಾಕ್ಕೆ ಹೋದ ಮೇಲೆ ರಂಜಿತಾಗೆ ಒಂದು ರೂಪಾಯಿಯು ಸಂಬಳ ನೀಡಿಲ್ಲ. ಮಾತ್ರವಲ್ಲ ಆಕೆಗೆ ಹಿಂಸೆ ನೀಡಲಾಗುತ್ತಿತ್ತು. ಅಲ್ಲಿ ಆಕೆಗೆ ಮೂರು ದಿನಕ್ಕೆ ಒಂದು ಬ್ರೆಡ್ ಅಷ್ಟೆ ನೀಡುತ್ತಿದ್ದರು. ಇಡೀ ದಿನ ಕೆಲಸ ಮಾಡಿಸುತ್ತಿದ್ದರು. ಎನ್ನುತ್ತಾರೆ ಪ್ರಭಾಕರನ್
ಹೀಗೆ ಕಳೆದ 7 ತಿಂಗಳಿನಿಂದ ರಂಜಿತಾ ಮನೆಯೊಂದರಲ್ಲಿ ಬಂಧಿಯಾಗಿದ್ದರು.
ಎರಡೇ ಎರಡು ದಿನದ ಹಿಂದೆ ಆಕೆ ಅದು ಹೇಗೋ ತಾನು ಬಂಧಿಯಾಗಿದ್ದ ಮನೆಯಿಂದ ತಪ್ಪಿಸಿಕೊಂಡು ಸೌದಿ ಅರೇಬಿಯಾದಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಹೀಗೆ ತನ್ನ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಭಾರತಕ್ಕೆ ವಾಪಸ್ ಬರಲು ಆಕೆಯ ಬಳಿ ಹಣವಿಲ್ಲ. ಬರುವ ದಾರಿಯೂ ಆಕೆಗೆ ಗೊತ್ತಿಲ್ಲ. ಆಕೆಯನ್ನು ಕರೆದುಕೊಂಡು ಹೋದವರದ್ದಂತೂ ಪತ್ತೆಯೇ ಇಲ್ಲ.[ಸಹಾಯಹಸ್ತ ಚಾಚುವಲ್ಲಿ ಸುಷ್ಮಾರನ್ನು ಮೀರಿಸುವವರೇ ಇಲ್ಲ!]
ಈ ಹಂತದಲ್ಲಿ ಇದೀಗ ಬೆಂಗಳೂರಿನ ಹಿರಿಯ ವಕೀಲ ಬಿ.ಟಿ ವೆಂಕಟೇಶ್ ಸಹಾಯದಿಂದ ಹೆಂಡತಿಯನ್ನು ಕರೆಸಿಕೊಳ್ಳಲು ಸಹಾಯ ಮಾಡುವಂತೆ ಸುಷ್ಮಾ ಸ್ವರಾಜ್ ಗೆ ಪ್ರಭಾಕರನ್ ಮನವಿ ಮಾಡಿದ್ದಾರೆ. ಹಲವು ದೃಷ್ಟಾಂತಗಳಲ್ಲಿ ಸಹಾಯ ಮಾಡಿರುವ ಸುಷ್ಮಾ ಸ್ವರಾಜ್ ತಮ್ಮ ಹೆಂತಿಯನ್ನು ಕರೆ ತರುತ್ತಾರೆ ಎಂದು ಪ್ರಭಾಕರನ್ ಕಾಯುತ್ತಿದ್ದಾರೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications