ಭಾರತ-ಚೀನಾ ಸೇನಾ ಹಂತದ ಮಾತುಕತೆ: ಅನಿಶ್ಚಿತತೆಯಲ್ಲಿ ಅಂತ್ಯ
ನವದೆಹಲಿ, ಜೂನ್ 18: ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಸೇನೆಯ ಸೈನಿಕರು ಮೃತಪಟ್ಟಿದ್ದರು.
Recommended Video
ಈ ಕುರಿತು ಗುರುವಾರ ನಡೆದ ಕಮಾಂಡರ್ ಹಂತದ ಮಾತುಕತೆ ಅನಿಶ್ಚಿತತೆಯಲ್ಲಿ ಅಂತ್ಯಕಂಡಿದೆ. ಜೂನ್ 15-16 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು, ಚೀನಾದ 43 ಕ್ಕೂ ಹೆಚ್ಚು ಸೈನಿಕರನ್ನು ಮೃತಪಟ್ಟಿದ್ದರು.
ಅದಕ್ಕೂ ಮುನ್ನ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ 3 ಮಂದಿ ಸಾವನ್ನಪ್ಪಿದ್ದರು.ಬುಧವಾರ ಭಾರತದ ಮೇಜರ್ ಜನರಲ್ ಮತ್ತು ಚೀನಾದ ಮಿಲಿಟರಿ ಅಧಿಕಾರಿ ಮಧ್ಯೆ ನಡೆದ ಮತ್ತೊಂದು ಸುತ್ತಿನ ಮಾತುಕತೆ ಯಾವುದೇ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿ ಅನಿಶ್ಚಿತತೆ ಮುಂದುವರಿದಿದೆ.

ಈವರೆಗೂ ಚೀನಾ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಕಳೆದ ಸೋಮವಾರ ಘರ್ಷಣೆ ನಡೆದ ಸ್ಥಳದಲ್ಲಿಯೇ ಮಾತುಕತೆ ನಡೆಯಿತು. ಈ ಪ್ರದೇಶ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಗೆ ಹತ್ತಿರವಾಗಿದೆ.
1962ರಲ್ಲಿ ಚೀನಾ ಭಾರತದ ಗಡಿ ಭಾಗವನ್ನು ಪ್ರವೇಶಿಸಿ ಬಂದು ಯುದ್ಧ ನಡೆದಿತ್ತು. ನಂತರ ಚೀನಾ ಈ ಪ್ರದೇ ತನಗೆ ಸೇರಿದ್ದು ಎಂದು ಆಗಾಗ ಪ್ರತಿಪಾದಿಸುತ್ತಾ ಬಂದಿರಲಿಲ್ಲ. ಆದರೆ ಇಂದು ಇಡೀ ಗಲ್ವಾನ್ ಪ್ರದೇಶ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದೆ. ಇದುವೇ ಭಾರತ ಮತ್ತು ಚೀನಾ ನಡುವೆ ಸೇನಾ ನಿಯೋಜನೆ, ಸಂಘರ್ಷಕ್ಕೆ ಇಂದು ಕಾರಣವಾಗಿದೆ.












Click it and Unblock the Notifications