ಜೈಲಿನಲ್ಲಿರೋ ಸ್ಯಾಮ್ ಸಂಗ್ ಬಾಸ್ ಕೈಯಲ್ಲೇ ಸ್ಮಾರ್ಟ್ ಫೋನಿಲ್ಲ!!
ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಸ್ಯಾಮ್ ಸಂಗ್ ಕಂಪನಿಯ ಬಾಸ್ ಜೇ ವೈ. ಲೀ ಅವರ ಜೈಲು ವಾಸದ ಸಂಕ್ಷಿಪ್ತ ವರದಿ ಇಲ್ಲಿದೆ.
ಸಿಯೋಲ್, ಫೆಬ್ರವರಿ 24: ತನ್ನ ತವರು ದೇಶವಾದ ದಕ್ಷಿಣ ಕೊರಿಯಾದ ಅಧ್ಯಕ್ಷರಿಗೆ ಲಂಚ ನೀಡಿದ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿರುವ ಸ್ಯಾಮ್ ಸಂಗ್ ಕಂಪನಿಯ ಉಪಾಧ್ಯಕ್ಷ ಜೇ ವೈ. ಲೀ ಅವರ ಕೈಯ್ಯಲ್ಲೇ ಈಗ ಸ್ಮಾರ್ಟ್ ಫೋನ್ ಇಲ್ಲ.
ಹೌದು. ಇಡೀ ಜಗತ್ತಿಗೇ ಸ್ಮಾರ್ಟ್ ಫೋನನ್ನು ಹಂಚಿದ ಕಂಪನಿಯ ಒಡೆಯ ಈಗ ಒಂದು ಫೋನ್ ಮಾಡಬೇಕೆಂದರೂ ಅಲ್ಲಿ ಜೈಲು ಸಿಬ್ಬಂದಿಯನ್ನು ಕೇಳಬೇಕು. ಅಂಥ ಪರಿಸ್ಥಿತಿಯಿದೆ. ದಿನದ 24 ಗಂಟೆ ಪೂರಾ ಅವರು ತಮ್ಮ ಸೆಲ್ ನಲ್ಲಿ ಒಂಟಿಯಾಗಿರುತ್ತಾರೆಂದು ಮೂಲಗಳು ತಿಳಿಸಿವೆ.[ಸ್ಯಾಮ್ ಸಂಗ್ ಕಂಪನಿ ಬಾಸ್ ಲೀ ಬಂಧನ]

ಅಷ್ಟೇ ಅಲ್ಲ, ನಿತ್ಯವೂ ತಾನು ಬಯಸಿದ ಮೃಷ್ಟಾನ್ನ ಭೋಜನ ಸವಿಯುತ್ತಿದ್ದ ಲೀ ಈಗ ಜೈಲು ಊಟಕ್ಕೆ ಮಾತ್ರ ಸೀಮಿತರಾಗಿದ್ದಾರಂತೆ. ಅವರ ಲಕ್ಷುರಿ ಉಡುಪು, ದುಬಾರಿ ಪಫ್ಯೂಮ್ ಇದ್ಯಾವುದರ ಸಂಪರ್ಕವಿಲ್ಲದೆ ಅವರು ಸಮಯ ದೂಡುತ್ತಿದ್ದಾರೆ. ಇದು ಆರಂಭದಲ್ಲಿ ಅವರಿಗೆ ತೀರಾ ಕಿರಿಕಿರಿ ಎಂದೆನಿಸಿದರೂ ಕ್ರಮೇಣ ಜೈಲು ವಾಸಕ್ಕೆ ಹೊಂದಿಕೊಂಡಿದ್ದಾರೆಂದು ಹೇಳಲಾಗಿದೆ.
ಆದರೆ, ಅವರಿಗೆ ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ತಮ್ಮ ವಕೀಲರ ಬಳಿ ಚರ್ಚಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕೋಣೆಯೊಂದನ್ನು ಅವರಿಗೆ ನೀಡಲಾಗಿದೆ. ಅಲ್ಲಿ ಅವರು ತಮಗೆ ಬೇಕಾದಷ್ಟು ಹೊತ್ತು ತಮ್ಮ ವಕೀಲರು ಹಾಗೂ ಕಾನೂನು ಸಲಹೆಗಾರರ ಬಳಿ ಮಾತುಕತೆ ನಡೆಸಬಹುದಾಗಿದೆ.[ಸ್ಯಾಮ್ ಸಂಗ್ ದಬ್ಬಿ ಅಗ್ರಪಟ್ಟಕ್ಕೇರಿದ ಮೈಕ್ರೋಮ್ಯಾಕ್ಸ್]
ಅಲ್ಲದೆ, ಜೈಲಿನಲ್ಲಿದ್ದರೂ ಸ್ಯಾಮ್ ಸಂಗ್ ಕಂಪನಿಯಲ್ಲಿ ಅವರ ಸ್ಥಾನಕ್ಕೇನೂ ಚ್ಯುತಿ ಬಂದಿಲ್ಲವಂತೆ. ಅವರು ಈಗಲೂ ಸ್ಯಾಮ್ ಸಂಗ್ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆಂದು ಹೇಳಲಾಗಿದೆ. ಪ್ರಮುಖ ನಿರ್ಧಾರಗಳನ್ನು ಅವರಿಗೆ ಸಂಬಂಧಪಟ್ಟವರೇ ಜೈಲಿಗೆ ಬಂದು ಅವರ ಬಳಿ ಚರ್ಚಿಸಿ ಲೀ ನೀಡುವ ಸೂಚನೆಗಳನ್ನು ಪಾಲಿಸುತ್ತಿದ್ದಾರೆಂದು ಹೇಳಲಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications