Get Updates
Get notified of breaking news, exclusive insights, and must-see stories!

ಶಬರಿಮಲೆ: ಅರನ್ಮುಲದಿಂದ 'ತಂಗ ಅಂಗಿ' ಮೆರವಣಿಗೆ ಆರಂಭ, ಇದರ ಹಿನ್ನೆಲೆ ತಿಳಿಯಿರಿ

Thanka Anki: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸನ್ನಿಧಾನದಲ್ಲಿ ನಡೆಯುವ ಮಂಡಲ ಪೂಜೆಗೆ ಮುನ್ನದ ಮಹತ್ವದ ಆಚರಣೆಯಾಗಿ, ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಚಿನ್ನದ ವಸ್ತ್ರವಾದ 'ತಂಗ ಅಂಗಿ'ಯ ಮೆರವಣಿಗೆ ಮಂಗಳವಾರ ಬೆಳಿಗ್ಗೆ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭವಾಯಿತು. ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಾಲಯದ ಅಧಿಕಾರಿಗಳು ಹಾಗೂ ಭಕ್ತರೊಂದಿಗೆ ತಂಗ ಅಂಗಿ ಪವಿತ್ರ ಯಾತ್ರೆ ಶುರುವಾಯಿತು. ಈ ಮೆರವಣಿಗೆ ಶಬರಿಮಲೆಯಲ್ಲಿ ನಡೆಯುವ 41 ದಿನಗಳ ಮಂಡಲ ವ್ರತದ ಅಂತ್ಯವಾದ ಮಂಡಲ ಪೂಜೆಗೆ ದಿನಗಣನೆಯನ್ನು ಸೂಚಿಸುತ್ತದೆ.

ಮಲಯಾಳಂ ಭಾಷೆಯಲ್ಲಿ "ತಂಗ" ಎಂದರೆ ಚಿನ್ನ ಮತ್ತು "ಅಂಗಿ" ಎಂದರೆ ಉಡುಪು ಅಥವಾ ವಸ್ತ್ರ ಎಂದರ್ಥ. ಇದು ತಿರುವಾಂಕೂರು ರಾಜಮನೆತನದವರಿಂದ ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾದ ಒಂದು ಅಮೂಲ್ಯವಾದ ಚಿನ್ನದ ಉಡುಪು. ಪ್ರತಿ ವರ್ಷ ಮಂಡಲ ಪೂಜೆಯ ವೇಳೆ ಇದನ್ನು ಪತ್ತನಂತಿಟ್ಟದ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಶಬರಿಮಲೆಗೆ ಸಾಗಿಸಲಾಗುತ್ತದೆ. ಮಂಡಲ ಪೂಜೆಯ ದಿನದಂದು ಅಯ್ಯಪ್ಪನ ಮೂರ್ತಿಯ ಮೇಲೆ ಇದನ್ನು ಇಟ್ಟು ಅಲಂಕರಿಸಲಾಗುತ್ತದೆ. ಇದು 41 ದಿನಗಳ ದೀರ್ಘ ಉಪವಾಸದ ಕೊನೆಯ ದಿನ.

Sabarimala Thanka Anki Procession Begins From Aranmula Mandala Pooja Significance

ತಂಗ ಅಂಗಿಯನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಿಶೇಷ ಅಲಂಕಾರದ ಮಂಡಲ ಪೂಜೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ತಂಗ ಅಂಗಿ ಎನ್ನುವುದು ಅತ್ಯಂತ ಮೌಲ್ಯಯುತವಾದ ಚಿನ್ನದ ವಸ್ತ್ರವಾಗಿದ್ದು, ಇದನ್ನು ತಿರವಂಕೂರು ಮಹಾರಾಜರಾದ ಚಿತ್ತಿರೈ ತಿರುಣಾಳ್ ಬಾಲರಾಮ ವರ್ಮಾ ಅವರು ದಾನವಾಗಿ ನೀಡಿದ್ದರು. ಈ ಪವಿತ್ರ ವಸ್ತ್ರವನ್ನು ವಿಶೇಷವಾಗಿ ಅಲಂಕರಿಸಿದ ರಥದಲ್ಲಿ ಸಾಗಿಸಲಾಗುತ್ತದೆ. ಇಂದು ಕೂಡ ಮೆರವಣಿಗೆ ಸಾಗುವ ಮಾರ್ಗದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪೂಜೆ ಸಲ್ಲಿಸಿ, ತಂಕ ಅಂಕಿಯನ್ನು ದರ್ಶನ ಮಾಡುವ ಅವಕಾಶ ಪಡೆದರು. ಮೆರವಣಿಗೆ ವೇಳೆ ನೀಡಲಾದ ಪ್ರಸಾದವನ್ನು ಸಹ ಭಕ್ತರು ಸ್ವೀಕರಿಸಿದರು.

ಡಿಸೆಂಬರ್ 26ರವರೆಗೆ ಮೆರವಣಿಗೆ

ಸಂಪ್ರದಾಯದಂತೆ, ತಂಗ ಅಂಗಿ ರಥವು ಮಾರ್ಗಮಧ್ಯೆ ಹಲವು ದೇವಸ್ಥಾನಗಳಲ್ಲಿ ತಂಗಿ, ಬಳಿಕ ಶಬರಿಮಲೆ ದೇವಸ್ಥಾನವನ್ನು ತಲುಪುತ್ತದೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ. ಕಳೆದ ವರ್ಷ, ಯಾತ್ರಾ ಅವಧಿಯಲ್ಲಿ 32.50 ಲಕ್ಷಕ್ಕಿಂತ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ತಂಗ ಅಂಗಿ ಡಿಸೆಂಬರ್ 26ರಂದು ಸಂಜೆ ದೀಪಾರಾಧನೆಗೂ ಮುನ್ನ ಶಬರಿಮಲೆ ತಲುಪಲಿದೆ. ಮಂಡಲ ಪೂಜೆಯ ದಿನ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಈ ಚಿನ್ನದ ವಸ್ತ್ರವನ್ನು ಅಲಂಕರಿಸಲಾಗುತ್ತದೆ. ಇದು ಯಾತ್ರಾ ಕಾಲದ ಅತ್ಯಂತ ಮಹತ್ವದ ವಿಧಿವಿಧಾನಗಳಲ್ಲಿ ಒಂದಾಗಿದೆ.

ಮೊದಲ ದಿನ ಓಮಲ್ಲೂರು ಶ್ರೀ ರಕ್ತಕಂದಸ್ವಾಮಿ ದೇವಸ್ಥಾನದಲ್ಲಿ, ಎರಡನೇ ದಿನ ಕೊನ್ನಿ ಮುರಿಂಗಮಂಗಲಂ ಮಹಾದೇವ ದೇವಸ್ಥಾನದಲ್ಲಿ ಮತ್ತು ಪಯಣದ ಸಮಾರೋಪ ದಿನದಂದು ರಾನ್ನಿ-ಪೆರುನಾಡು ಕಕ್ಕಡುಕೋಯಿಕಲ್ ಶ್ರೀಧರ್ಮ ಶಾಸ್ತ ದೇವಸ್ಥಾನದಲ್ಲಿ ಮೆರವಣಿಗೆಯು ಡಿ.26 ರಂದು ಸಂಜೆ 6 ಗಂಟೆಗೆ ಅಯ್ಯಪ್ಪನ ದೇವಸ್ಥಾನವನ್ನು ತಲುಪಲಿದೆ. ಅಂದು ಸಂಜೆ ದೀಪಾರಾಧನೆಗೆ ಮುಂಚಿತವಾಗಿ ಈ ಮೆರವಣಿಗೆ ಸನ್ನಿಧಾನ ಸೇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+