ಶಬರಿಮಲೆ: ಅರನ್ಮುಲದಿಂದ 'ತಂಗ ಅಂಗಿ' ಮೆರವಣಿಗೆ ಆರಂಭ, ಇದರ ಹಿನ್ನೆಲೆ ತಿಳಿಯಿರಿ
Thanka Anki: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸನ್ನಿಧಾನದಲ್ಲಿ ನಡೆಯುವ ಮಂಡಲ ಪೂಜೆಗೆ ಮುನ್ನದ ಮಹತ್ವದ ಆಚರಣೆಯಾಗಿ, ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಚಿನ್ನದ ವಸ್ತ್ರವಾದ 'ತಂಗ ಅಂಗಿ'ಯ ಮೆರವಣಿಗೆ ಮಂಗಳವಾರ ಬೆಳಿಗ್ಗೆ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭವಾಯಿತು. ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಾಲಯದ ಅಧಿಕಾರಿಗಳು ಹಾಗೂ ಭಕ್ತರೊಂದಿಗೆ ತಂಗ ಅಂಗಿ ಪವಿತ್ರ ಯಾತ್ರೆ ಶುರುವಾಯಿತು. ಈ ಮೆರವಣಿಗೆ ಶಬರಿಮಲೆಯಲ್ಲಿ ನಡೆಯುವ 41 ದಿನಗಳ ಮಂಡಲ ವ್ರತದ ಅಂತ್ಯವಾದ ಮಂಡಲ ಪೂಜೆಗೆ ದಿನಗಣನೆಯನ್ನು ಸೂಚಿಸುತ್ತದೆ.
ಮಲಯಾಳಂ ಭಾಷೆಯಲ್ಲಿ "ತಂಗ" ಎಂದರೆ ಚಿನ್ನ ಮತ್ತು "ಅಂಗಿ" ಎಂದರೆ ಉಡುಪು ಅಥವಾ ವಸ್ತ್ರ ಎಂದರ್ಥ. ಇದು ತಿರುವಾಂಕೂರು ರಾಜಮನೆತನದವರಿಂದ ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾದ ಒಂದು ಅಮೂಲ್ಯವಾದ ಚಿನ್ನದ ಉಡುಪು. ಪ್ರತಿ ವರ್ಷ ಮಂಡಲ ಪೂಜೆಯ ವೇಳೆ ಇದನ್ನು ಪತ್ತನಂತಿಟ್ಟದ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಶಬರಿಮಲೆಗೆ ಸಾಗಿಸಲಾಗುತ್ತದೆ. ಮಂಡಲ ಪೂಜೆಯ ದಿನದಂದು ಅಯ್ಯಪ್ಪನ ಮೂರ್ತಿಯ ಮೇಲೆ ಇದನ್ನು ಇಟ್ಟು ಅಲಂಕರಿಸಲಾಗುತ್ತದೆ. ಇದು 41 ದಿನಗಳ ದೀರ್ಘ ಉಪವಾಸದ ಕೊನೆಯ ದಿನ.

ತಂಗ ಅಂಗಿಯನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಿಶೇಷ ಅಲಂಕಾರದ ಮಂಡಲ ಪೂಜೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ತಂಗ ಅಂಗಿ ಎನ್ನುವುದು ಅತ್ಯಂತ ಮೌಲ್ಯಯುತವಾದ ಚಿನ್ನದ ವಸ್ತ್ರವಾಗಿದ್ದು, ಇದನ್ನು ತಿರವಂಕೂರು ಮಹಾರಾಜರಾದ ಚಿತ್ತಿರೈ ತಿರುಣಾಳ್ ಬಾಲರಾಮ ವರ್ಮಾ ಅವರು ದಾನವಾಗಿ ನೀಡಿದ್ದರು. ಈ ಪವಿತ್ರ ವಸ್ತ್ರವನ್ನು ವಿಶೇಷವಾಗಿ ಅಲಂಕರಿಸಿದ ರಥದಲ್ಲಿ ಸಾಗಿಸಲಾಗುತ್ತದೆ. ಇಂದು ಕೂಡ ಮೆರವಣಿಗೆ ಸಾಗುವ ಮಾರ್ಗದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪೂಜೆ ಸಲ್ಲಿಸಿ, ತಂಕ ಅಂಕಿಯನ್ನು ದರ್ಶನ ಮಾಡುವ ಅವಕಾಶ ಪಡೆದರು. ಮೆರವಣಿಗೆ ವೇಳೆ ನೀಡಲಾದ ಪ್ರಸಾದವನ್ನು ಸಹ ಭಕ್ತರು ಸ್ವೀಕರಿಸಿದರು.
ಡಿಸೆಂಬರ್ 26ರವರೆಗೆ ಮೆರವಣಿಗೆ
ಸಂಪ್ರದಾಯದಂತೆ, ತಂಗ ಅಂಗಿ ರಥವು ಮಾರ್ಗಮಧ್ಯೆ ಹಲವು ದೇವಸ್ಥಾನಗಳಲ್ಲಿ ತಂಗಿ, ಬಳಿಕ ಶಬರಿಮಲೆ ದೇವಸ್ಥಾನವನ್ನು ತಲುಪುತ್ತದೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ. ಕಳೆದ ವರ್ಷ, ಯಾತ್ರಾ ಅವಧಿಯಲ್ಲಿ 32.50 ಲಕ್ಷಕ್ಕಿಂತ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ತಂಗ ಅಂಗಿ ಡಿಸೆಂಬರ್ 26ರಂದು ಸಂಜೆ ದೀಪಾರಾಧನೆಗೂ ಮುನ್ನ ಶಬರಿಮಲೆ ತಲುಪಲಿದೆ. ಮಂಡಲ ಪೂಜೆಯ ದಿನ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಈ ಚಿನ್ನದ ವಸ್ತ್ರವನ್ನು ಅಲಂಕರಿಸಲಾಗುತ್ತದೆ. ಇದು ಯಾತ್ರಾ ಕಾಲದ ಅತ್ಯಂತ ಮಹತ್ವದ ವಿಧಿವಿಧಾನಗಳಲ್ಲಿ ಒಂದಾಗಿದೆ.
ಮೊದಲ ದಿನ ಓಮಲ್ಲೂರು ಶ್ರೀ ರಕ್ತಕಂದಸ್ವಾಮಿ ದೇವಸ್ಥಾನದಲ್ಲಿ, ಎರಡನೇ ದಿನ ಕೊನ್ನಿ ಮುರಿಂಗಮಂಗಲಂ ಮಹಾದೇವ ದೇವಸ್ಥಾನದಲ್ಲಿ ಮತ್ತು ಪಯಣದ ಸಮಾರೋಪ ದಿನದಂದು ರಾನ್ನಿ-ಪೆರುನಾಡು ಕಕ್ಕಡುಕೋಯಿಕಲ್ ಶ್ರೀಧರ್ಮ ಶಾಸ್ತ ದೇವಸ್ಥಾನದಲ್ಲಿ ಮೆರವಣಿಗೆಯು ಡಿ.26 ರಂದು ಸಂಜೆ 6 ಗಂಟೆಗೆ ಅಯ್ಯಪ್ಪನ ದೇವಸ್ಥಾನವನ್ನು ತಲುಪಲಿದೆ. ಅಂದು ಸಂಜೆ ದೀಪಾರಾಧನೆಗೆ ಮುಂಚಿತವಾಗಿ ಈ ಮೆರವಣಿಗೆ ಸನ್ನಿಧಾನ ಸೇರಲಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications