ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು?
ಸುಪ್ರೀಂ ಕೋರ್ಟ್ ನೀಡಿರುವ ತ್ರಿವಳಿ ತಲಾಖ್ ರದ್ದು ಆದೇಶಕ್ಕೆ ಎಲ್ಲೆಡೆ ಸ್ವಾಗತ. ಮಹಿಳೆಯರ ಹಿತದೃಷ್ಟಿಯಿಂದ ತೀರ್ಪು ಸ್ವಾಗತಾರ್ಹ ಎಂದ ಅನೇಕರು.
ಬೆಂಗಳೂರು, ಆಗಸ್ಟ್ 22: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಗಣ್ಯರು ಹಾಗೂ ಜನಪ್ರತಿನಿಧಿಗಳು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಏತನ್ಮಧ್ಯೆ, ಒನ್ ಇಂಡಿಯಾ ಕನ್ನಡ ಕೂಡ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದರ ಒಂದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.

''ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಸ್ವಾಗತಾರ್ಹ. ಆದರೆ, ಈ ತೀರ್ಪನ್ನು ಹಲವಾರು ಮಂದಿ ಒಪ್ಪದಿರಬಹುದು. ಆದರೆ, ಎಲ್ಲರೂ ಈ ವಿಚಾರವನ್ನು ಹೆಣ್ಣು ಹೆತ್ತವರ ನೋವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಆಲೋಚಿಸಿದರೆ ಈ ತೀರ್ಪು ಸಮಂಜಸ ಎಂದು ಗೊತ್ತಾಗುತ್ತದೆ. ಏಕೆಂದರೆ, ಇಂಥ ಹಲವಾರು ಘಟನೆಗಳಿಂದ ಹಲವಾರು ಹೆಂಗಸರ ಜೀವನ ಹಾಳಾಗಿದೆ. ಇಂಥ ಅವಗಢಗಳು ತಪ್ಪಬೇಕು. ಮಹಿಳೆಯರ ಬಾಳು ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾರ್ಹ''
- ಸಾಅವುದಿಯಾ, ಪತ್ರಕರ್ತೆ
''ಗಂಡು ವಿಚ್ಛೇದನ ನೀಡಿದರೆ ಅದು ತಲಾಖ್. ಹೆಂಡತಿಯೇ ಮುಂದಾಗಿ ವಿಚ್ಛೇದನ ನೀಡಿದರೆ ಅದು ಖುಲಾಸಾ. ಈ ಎರಡಕ್ಕೂ ಶೆರಿಯಾ ಕಾನೂನಿನ ಮಾನ್ಯತೆಯಿದೆ. ಅಪ್ಪಟ ಧಾರ್ಮಿಕ ಚೌಕಟ್ಟಿನಲ್ಲಿ ಇಂಥ ಪ್ರಕರಣಗಳನ್ನು ನಿಭಾಯಿಸಲು ಪ್ರತ್ಯೇಕವಾದ ಮಾರ್ಗಗಳೂ ಇವೆ. ಆದರೆ, ಶೆರಿಯಾ ಕಾನೂನುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಈ ವಿಚಾರದಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಾರೆ. ಮೂರು ಬಾರಿ ಸತತವಾಗಿ ತಲಾಖ್ ಹೇಳಿದರೆ ಸಾಕು ವಿಚ್ಛೇದನ ಗ್ಯಾರಂಟಿ ಎಂದು ಮುಸ್ಲಿಮರಲ್ಲೇ ಹಲವಾರು ಮಂದಿ ತಿಳಿದಿದ್ದಾರೆ. ಇದು ತಪ್ಪು. ಇಂಥ ಪ್ರಕರಣಗಳಿಗೆ ಬ್ರೇಕ್ ಬೀಳುವುದಾದರೆ ಈ ತೀರ್ಪು ಸ್ವಾಗತಾರ್ಹ''.
- ರಫೀಕ್, ಬೆಂಗಳೂರು ನಿವಾಸಿ
''ಮಹಿಳೆಯರ ರಕ್ಷಣೆ ಹಾಗೂ ಜೀವನ ಭದ್ರತೆ ದೃಷ್ಟಿಕೋನದಲ್ಲಿ ಆಲೋಚಿಸುವುದಾದರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಮದುವೆ, ಪತಿ-ಪತ್ನಿ ಬಾಂಧವ್ಯವನ್ನು ಹಗುರುವಾಗಿ ಯಾರೂ ತೆಗೆದುಕೊಳ್ಳಕೂಡದು ಎಂಬ ಕಾಳಜಿ ಈ ತೀರ್ಪಿನ ಹಿಂದಿದೆ. ವಿಚ್ಛೇದನ ನೀಡುವಿಕೆ ಯಾರದೋ ಒಬ್ಬರ ಕ್ಷಣಿಕ ಅಸಮಾಧಾನದ ಕೈಗೊಂಬೆಯಾಗಬಾರದು ಎಂಬುದುನ್ನು ಈ ತೀರ್ಪು ಪುಷ್ಟೀಕರಿಸಿದೆ''
- ರಿಜ್ವಾನಾ, ಶಿಕ್ಷಕಿ (ಬೆಂಗಳೂರು)
''ಮುಸ್ಲಿಂ ಧರ್ಮದ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ, ತ್ರಿವಳಿ ತಲಾಖ್ ಪದ್ಧತಿಯಿಂದ ಹಲವಾರು ಹೆಂಗಳೆಯರಿಗೆ ತೊಂದರೆಯಾಗಿದ್ದನ್ನಂತೂ ನಾನು ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮುಸ್ಲಿಂ ಮಹಿಳೆಯರ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಇನ್ನಾದರೂ, ಅಲ್ಪ ಅಸಮಾಧಾನಗಳಿಗೆ ದಿಢೀರ್ ವಿಚ್ಛೇಧನದಂಥ ಪದ್ಧತಿಗಳಿಗೆ ಮುಕ್ತಿ ಸಿಗಲಿ''
- ರೋಸ್ ಮೇರಿ, ಮಂಗಳೂರು
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications