Ratan Tata Cinema: ಟಾಟಾ ರತನ್ ಜೀವನ ಕುರಿತು ಬರುತ್ತಿದೆ ಅದ್ಭುತ ಸಿನಿಮಾ-ಯಾವಾಗ?
Ratan Tata Cinema: ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (86) ಅವರು ನಿಧನರಾಗಿದ್ದು, ಅವರಿಗಾಗಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅಲ್ಲದೆ, ಅವರನ್ನು ಕಳೆದುಕೊಂಡು ದೇಶದ ಉದ್ಯಮ ಕ್ಷೇತ್ರ ಮಂಕಾಗಿದೆ. ಇನ್ನೂ ಟಾಟಾ ಅವರ ಜೀವನ ಚರಿತ್ರೆ ಕುರಿತು ಚಲನಚಿತ್ರ ಬರಲಿದೆ ಎನ್ನುವ ಮುನ್ಸೂಚನೆ ಸಿಕ್ಕಿದೆ.
ರತನ್ ಟಾಟಾ ಅವರು ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಸ್ವಲ್ಪನೂ ಅಹಂ ಇರಲಿಲ್ಲ. ಅಲ್ಲದೆ, ಎಲ್ಲರ ಜೊತೆ ಬೆರೆತು ಸರಳವಾಗಿ ಜೀವನ ನಡೆಸುವಂತಹ ಗುಣ ಅವರದ್ದಾಗಿತ್ತು. ಅವರು ಶ್ರೀಮಂತರ ಪಟ್ಟಿಯಲ್ಲಿ ಇಲ್ಲದಿರಬಹುದು. ಆದರೆ, ಅವರ ಶೇರಿನಲ್ಲಿ ಶೇಕಡ 66ನಷ್ಟು ಬಡವರಿಗಾಗಿಯೇ ಮೀಸಲಿಡುತ್ತಿದ್ದು, ಇದರಿಂದ ರತನ್ ಟಾಟಾ ಅವರು ಮಾನವೀಯತೆ ದೃಷ್ಟಿಯಿಂದ ನಿಜವಾದ ಶ್ರೀಮಂತರು ಎಂದರೆ ತಪ್ಪಾಗಲಾರದು.

ದೇಶ-ವಿದೇಶಗಳಲ್ಲೂ ನೂರಾರು ಕಂಪನಿಗಳನ್ನು ಹೊಂದಿದ್ದರೂ ಕೂಡ ಅವರು ಸರಳ ಜೀವನವನ್ನು ಮಾತ್ರ ಮರೆತಿರಲಿಲ್ಲ. ಇನ್ನೂ ಅವರ ನಿಧನಕ್ಕೆ ದೇಶ-ವಿದೇಶಗಳ ಗಣ್ಯರಿಂದ ಹಿಡಿದು ಕೆಳವರ್ಗದ ಜನರು ಕೂಡ ಸಂತಾಪ ಸೂಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ. ಅಷ್ಟರ ಮಟ್ಟಿಗೆ ರತನ್ ಟಾಟಾ ಅವರು ಸರಳ ಜೀವನ ಸಾಗಿಸುವವರಾಗಿದ್ದರು.
ಮತ್ತೊಂದೆಡೆ ಎಸ್ಎಲ್ ಗ್ರೂಪ್ನ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಆರ್.ಸುಭಾಷ್ ಚಂದ್ರ ಅವರು ದಿವಂಗತ ರತನ್ ಟಾಟಾ ಅವರಿಗೆ ಸಂತಾಪ ಸೂಚಿಸಿದರು. ಇನ್ನು ಅವರ ಜೀವನ ಕುರಿತು ಚಲನಚಿತ್ರವನ್ನು ನಿರ್ಮಿಸಲು ಜೀ ಎಂಟರ್ಟೈನ್ಮೆಂಟ್ ವಿಯಾನ್ನೊಂದಿಗೆ ಸಹಕರಿಸಲಿದೆ ಎಂದು ಡಾ.ಚಂದ್ರ ಅವರು ಘೋಷಣೆ ಮಾಡಿದರು.
ರತನ್ ಟಾಟಾ ಅವರ ಜೀವನದ ಬಗ್ಗೆ ಜೀ ಗ್ರೂಪ್ ಪೂರ್ಣ ಪ್ರಮಾಣದ ಚಲನಚಿತ್ರವನ್ನು ಮಾಡಲು ನಿರ್ಧರಿಸಿದೆ ಎಂದು ಅವರು ಘೋಷಣೆ ಮಾಡಿದರು. ಇದು ಜೀ 5 ಮತ್ತು ಜೀನ ಇತರ ಎಲ್ಲಾ ಚಾನೆಲ್ಗಳಲ್ಲಿ ವಿವಿಧ ಭಾಷೆಗಳೊಂದಿಗೆ ಪ್ರಸಾರ ಆಗಲಿದೆ. ರತನ್ ಟಾಟಾ ಅವರಂತಹ ರತ್ನದ ಜೀವನವನ್ನು ಜಗತ್ತಿಗೆ ತೋರಿಸಲು ನಾವು ಬಯಸಿದ್ದೇವೆ ಎಂದು ಹೇಳಿದರು. ಸಿನಿಮಾದ ಹೆಸರು ಹಾಗೂ ಯಾವಾಗ ಬಿಡುಗಡೆಯಾಗಲಿದೆ ಎಂದು ತಿಳಿದುಬರಬೇಕಿದೆ ಅಷ್ಟೇ.
ಇನ್ನು ಸಾಮಾಜಿಕ ಜಾಲತಾಣದ ಭಾಗವಾದ ಟ್ವಿಟರ್ ಖಾತೆಯಲ್ಲಿ ಡಾ.ಚಂದ್ರ ಅವರು, ರತನ್ ಟಾಟಾ ಅವರ ಸಾವಿನ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡರು. "ರತನ್ ಟಾಟಾ ಅವರ ನಿಧನದ ಬಗ್ಗೆ ತಿಳಿದು ನನಗೆ ತೀವ್ರ ದುಃಖವಾಗಿದೆ" ಎಂದು ಬರೆದುಕೊಂಡಿದ್ದಾರೆ.
ರತನ್ ಟಾಟಾ ಅವರು ಮಾಧ್ಯಮದ ಭಾಗವಾಗಿದ್ದರು ಮತ್ತು ಕೆಲವು ಸಲಹೆ ಬೇಕಾದಾಗ ಅವರ ಬಳಿಗೆ ಹೋಗುತ್ತಿದ್ದವು. ಆಗ ರತನ್ ಟಾಟಾ ಅವರು ನಮ್ಮ ಬಳಿ ತುಂಬಾ ಸರಳತೆಯಿಂದ ಚೆನ್ನಾಗಿ ಮಾತನಾಡುತ್ತಿದ್ದರು ಎಂದು ನೆನೆದರು.
ಅಲ್ಲದೆ, ಪ್ರಭಾವಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗಿನ ತಮ್ಮ ಸಂವಾದವನ್ನು ತೆರೆದಿಟ್ಟರು. ಟಾಟಾ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಭಾರತೀಯ ಉದ್ಯಮಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪರಂಪರೆಯನ್ನು ಯಾವಾಗಲೂ ಗೌರವಿಸುತ್ತೇನೆ ಎಂದು ಹೇಳಿದರು.
ರತನ್ ಟಾಟಾ 1991ರಿಂದ 2012ರ ವರೆಗೆ ನಿವೃತ್ತರಾಗುವವರೆಗೆ ಟಾಟಾ ಗ್ರೂಪ್ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲದದೆ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಯಿತು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications