'ಉಡ್ತಾ ಪಂಜಾಬ್' ಸ್ಥಿತಿ ವಿರುದ್ಧ ಸಮರ ಸಾರಿರುವ ಪಂಜಾಬ್ ಸರ್ಕಾರ
ಚಂಢೀಘಡ, ಜುಲೈ 03: ಹಿಂದಿ ಚಿತ್ರ 'ಉಡ್ತಾ ಪಂಜಾಬ್' ನೋಡಿದ್ದರೆ ಪಂಜಾಬ್ನಲ್ಲಿ ಡ್ರಗ್ಸ್ ಎಷ್ಟು ವ್ಯಾಪಕವಾಗಿ ಹರಡಿದೆ ಎಂದು ತಿಳಿದಿರಲಿಕ್ಕೆ ಸಾಕು. ಚಿತ್ರದಲ್ಲಿ ತೋರಿರುವುದು ಅತಿಶಯೋಕ್ತಿಯಲ್ಲ ಎಂಬುದಕ್ಕೆ ಉದಾಹರಣೆ ಪಂಜಾಬ್ನಲ್ಲಿ ಕಳೆದ ಒಂದೇ ತಿಂಗಳಲ್ಲಿ ಡ್ರಗ್ಸ್ನಿಂದ ಸತ್ತವರ ಸಂಖ್ಯೆ 35.
ಮಾದಕ ವಸ್ತು ಮಾರಿಯಿಂದ ಕಂಗೆಟ್ಟಿರುವ ಪಂಜಾಬ್ ಸರ್ಕಾರ ಹಲವು ವಿಶೇಷ ದಳಗಳು, ತನಿಖಾ ದಳಗಳು, ಇತರೆ.. ಇತರೆಗಳ ನಂತರ ಈಗ ಈ ಜಾಲದ ಬುಡವನ್ನೇ ಕಿತ್ತೊಗೆಯಲು ಮಹತ್ತರವಾದ ಹೆಜ್ಜೆ ಇಟ್ಟಿದೆ.

ಡ್ರಗ್ಸ್ ಸಾಗಾಟ ಮಾಡುವವರಿಗೆ ಮತ್ತು ಅದರೊಂದಿಗೆ ಗುರುತಿಸಿಕೊಂಡವರಿಗೆ ಮರಣದಂಡನೆ ಶಿಕ್ಷೆ ನೀಡಲು ಮುಂದಾಗಿದ್ದು. ಇದಕ್ಕಾಗಿ ನಿಯಮಾವಳಿಗಳನ್ನು ರೂಪಿಸಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದೆ. ಮರಣದಂಡನೆಯಂತ 'ಅಂತಿಮ ಹಂತದ ಶಿಕ್ಷೆ' ನೀಡುವ ನಿರ್ಣಯಕ್ಕೆ ಸರ್ಕಾರ ಬಂದಿದೆ ಎಂದರೆ ಡ್ರಗ್ಸ್ ಪಂಜಾಬ್ನ ಯುವಕರನ್ನು ಎಷ್ಟು ಹಿಂಡೆ ಹಿಪ್ಪೆ ಮಾಡುತ್ತಿದೆ ಎಂದು ಸುಲಭದಲ್ಲಿ ಊಹಿಸಬಹುದು.
ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಿರುವುದು 15 ತಿಂಗಳು ಮಾತ್ರ. ಅಧಿಕಾರಕ್ಕೆ ಬರುವ ಮುಂಚೆ, ಡ್ರಗ್ಸ್ ಮಾರಿಯನ್ನು ತೊಡೆದುಹಾಕುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಹೀಗಾಗಿ ವಿರೋಧಪಕ್ಷಗಳಾದ ಎಎಪಿ, ಎಸ್ಎಡಿ ಸಹ ಡ್ರಗ್ಸ್ ಮಾರಿಗೆ ನಿಯಂತ್ರಣ ಹೇರುವಂತೆ ಆಡಳಿತ ಪಕ್ಷದ ಪಕ್ಕೆಗೆ ಗುದ್ದುತ್ತಿವೆ.
ಪಂಜಾಬ್ ಸರ್ಕಾರದ ಮನವಿಗೆ ರಾಷ್ಟ್ರಪತಿಗಳ ಅಂಕಿತ ದೊರೆತದ್ದೇ ಆದಲ್ಲಿ ಡ್ರಗ್ಸ್ ಸಾಗಾಟಕ್ಕೆ ಮರಣದಂಡನೆ ವಿಧಿಸುವ ದೇಶದ ಮೊದಲ ರಾಜ್ಯ ಪಂಜಾಬ್ ಆಗಲಿದೆ.
ಪಂಜಾಬ್ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಡ್ರಗ್ಸ್ ಸಾಗಾಟದಲ್ಲಿ 124% ಏರಿಕೆಯಾಗಿರುವುದು ಸರ್ಕಾರವನ್ನು ಆತಂಕಕ್ಕೆ ತಳ್ಳಿದೆ. ಸಿಕ್ಕಿ ಹಾಕಿಕೊಂಡ ಡ್ರಗ್ಸ್ನ ಪ್ರಮಾಣವೇ ಇಷ್ಟಾದರೆ ಸಿಕ್ಕಿ ಹಾಕಿಕೊಳ್ಳದ ಡ್ರಗ್ಸ್ ಪ್ರಮಾಣ ಇದರ ಎರಡಷ್ಟು ಎಂದರೆ 250% ಇರಬಹುದು ಎಂದು ಅಂದಾಜು ಮಾಡಲಾಗಿದೆ.
-
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications