ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ಸ್ಟೋರಿ ತಪ್ಪದೆ ಓದಿ... Online Games
ಮಕ್ಕಳ ಕೈಗೆ ಮೊಬೈಲ್ ಕೊಡುವುದು & ಮಕ್ಕಳು ಮೊಬೈಲ್ ಬಳಸುವುದನ್ನೇ ದೊಡ್ಡ ಸಾಧನೆ ಎನ್ನುವ ರೀತಿ ಇತ್ತೀಚೆಗೆ ಪೋಷಕರು ಬಿಂಬಿಸುತ್ತಿದ್ದಾರೆ. ಸ್ವಂತ ಅಪ್ಪ & ಅಮ್ಮನಿಂದಲೇ ಇಷ್ಟು ಪ್ರೋತ್ಸಾಹ ಸಿಕ್ಕರೆ ಇನ್ನು ಮಕ್ಕಳು ಸುಮ್ಮನೆ ಇರೋದಕ್ಕೆ ಆಗುತ್ತಾ? ಇಲ್ಲ ಹೀಗೆಲ್ಲಾ ಮನೆಯಲ್ಲೇ ಮೊಬೈಲ್ ನೋಡಲು ಬೆಂಬಲ ಸಿಗುವ ಕಾರಣಕ್ಕೆ, ಮಕ್ಕಳು ಕೂಡ ಮೊಬೈಲ್ ಲೋಕದಲ್ಲಿ ಈಗ ಕಳೆದು ಹೋಗುವಂತೆ ಆಗಿದೆ. ಇವತ್ತು ಕೂಡ, ಮೂವರು ಮುಗ್ಧ ಮಕ್ಕಳು ಆನ್ಲೈನ್ ಗೇಮ್ ಕಾರಣಕ್ಕೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಹಾಗಾದರೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ಸ್ಟೋರಿ ತಪ್ಪದೆ ಓದಿ.
ಮುಗ್ಧ ಮನಸ್ಸಿನ ಮಕ್ಕಳಿಗೆ ಏನೂ ಅರಿವು ಇರುವುದೇ ಇಲ್ಲ, ಅವರಿಗೆ ಮನೆಯಲ್ಲಿ ನಾವು ಏನು ಹೇಳುತ್ತೇವೆ ಮತ್ತು ಕಲಿಸುತ್ತೇವೋ ಅದನ್ನು ಅಚ್ಚುಕಟ್ಟಾಗಿ ಕಲಿಯುತ್ತಾರೆ. ಅಪ್ಪ & ಅಮ್ಮ ಹೊಡಿ ಬಡಿ ಎಂದು ಹೇಳುತ್ತಲೇ ಇದ್ದರೆ, ಮಕ್ಕಳು ಕೂಡ ಬಹುತೇಕ ಅದೇ ದಾರಿ ತುಳಿಯುತ್ತಾರೆ. ಅದೇ ಮಕ್ಕಳಿಗೆ ಉತ್ತಮ ದಾರಿ ತೋರಿಸಿ, ಒಳ್ಳೆಯದನ್ನೇ ಹೇಳಿಕೊಟ್ಟರೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ.

ಇದೆಲ್ಲವನ್ನೂ ಮೀರಿ ಈಗ ಮೊಬೈಲ್ ಎಂಬ ಹುಚ್ಚು ಒಳ್ಳೆಯ ವಿಚಾರ ಹೇಳುವುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ಕೆಟ್ಟದನ್ನೇ ಕಲಿಸುತ್ತಿರುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಆನ್ಲೈನ್ ಗೇಮ್ಸ್ ಹಾವಳಿ ಹೆಚ್ಚಾಗುತ್ತಿದೆ. ಹೀಗಂತ ಆನ್ಲೈನ್ ಗೇಮ್ಸ್ ಹಾವಳಿಯು ಇಂದು ಅಥವಾ ನಿನ್ನೆಯಿಂದ ಶುರುವಾಗಿಲ್ಲ, ಹತ್ತಾರು ವರ್ಷಗಳ ಇತಿಹಾಸವೇ ಇದೆ ಈ ಭಯಾನಕ ಆಟಗಳಿಗೆ. ಅದರಲ್ಲೂ ಈ ವಿಚಾರದಲ್ಲಿ ಬ್ಲೂ ವೇಲ್ ಎಂಬ ಆನ್ಲೈನ್ ಗೇಮ್ ಭಾರತದಲ್ಲಿ ಹಲವು ಮಕ್ಕಳ ಜೀವ ತೆಗೆದು ಸಂಚಲನ ಸೃಷ್ಟಿಸಿತ್ತು.
ಬ್ಲೂ ವೇಲ್ ಎಂಬ ಕೆಟ್ಟ ಆಟ
ಭಾರತ ಮಾತ್ರವಲ್ಲ ಇಂದು ಇಡೀ ಜಗತ್ತು ಮಕ್ಕಳಿಗೆ ಮೊಬೈಲ್ ಕೊಡುವ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿದೆ. ಅದರಲ್ಲೂ ಗಾಜಿಯಾಬಾದ್ ಪ್ರದೇಶದಲ್ಲಿ ಇಂದು ಆನ್ಲೈನ್ ಗೇಮ್ಸ್ ವಿಚಾರವಾಗಿಯೇ ಮೂವರು ಮಕ್ಕಳು ಜೀವ ಕಳೆದುಕೊಂಡ ವಿಚಾರ ದೊಡ್ಡ ಬಿರುಗಾಳಿ ಎಬ್ಬಿಸಿದೆ. 'ಕೊರಿಯನ್ ಲವ್ ಗೇಮ್' ಎಂಬ ಆನ್ಲೈನ್ ಗೇಮ್ ಸುಳಿಗೆ ಸಿಲುಕಿ ಈ 3 ಪುಟಾಣಿ ಮಕ್ಕಳು ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ಹಿಂದೆ, ಬ್ಲೂ ವೇಲ್ ಎಂಬ ಭೀಕರವಾದ ಆನ್ಲೈನ್ ಗೇಮ್ ಕೂಡ ಭಾರತದ ಮಕ್ಕಳ ಜೀವನದಲ್ಲಿ ಇದೇ ರೀತಿಯ ಆಟ ಆಡಿ ಬ್ಯಾನ್ ಆಗಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications