Get Updates
Get notified of breaking news, exclusive insights, and must-see stories!

ಉಗ್ರರಿಂದ ಬಸ್ ಮೇಲೆ ದಾಳಿ, ಪೊಲೀಸ್ ಸಾವು, ನಾಲ್ವರಿಗೆ ಗಾಯ

ಶ್ರೀನಗರ್, ಸೆಪ್ಟೆಂಬರ್ 1: ಶ್ರೀನಗರ್ ಪಂಥಾ ಚೌಕ್ ನಲ್ಲಿ ಶುಕ್ರವಾರ ಬಸ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, ಒಬ್ಬ ಪೊಲೀಸ್ ಹುತಾತ್ಮರಾಗಿ, ನಾಲ್ವರು ಗಾಯಗೊಂಡಿದ್ದಾರೆ. ರಾತ್ರಿ ಎಂಟು ಗಂಟೆ ಹೊತ್ತಿಗೆ ದಾಳಿ ನಡೆದಿದೆ.

ಆ ಬಸ್ಸು ಬೆಮಿನಾದಿಂದ ಜೇವನ್ ಗೆ ತೆರಳುತ್ತಿತ್ತು. ಈ ಪ್ರದೇಶದಲ್ಲಿ ಈಗ ಉಗ್ರಗಾಮಿಗಳಿಗಾಗಿ ಹುಡುಕಾಟ ನಡೆದಿದೆ. ಇದಕ್ಕೂ ಮೊದಲು ಶೋಪಿಯಾನ್ ಜಿಲ್ಲೆಯ ಬಾರ್ ಬಗ್ ನಲ್ಲಿ ಸಬ್ ಇನ್ ಸ್ಪೆಕ್ಟರ್ ವೊಬ್ಬರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ವೊಬ್ಬರಿಗೆ ಗಾಯವಾಗಿತ್ತು.

Bus attack

ಶೋಪಿಯಾನ್ ಜಿಲ್ಲೆಯಲ್ಲೇ ಆಗಸ್ಟ್ ಇಪ್ಪತ್ತರಂದು ಉಗ್ರಗಾಮಿಗಳ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆಗಸ್ಟ್ ಹದಿನೈದರಂದು ಶ್ರೀನಗರದ ಟೆಂಗ್ ಪೂರ್ ಬೈಪಾಸ್ ನಲ್ಲಿ ಭಯೋತ್ಪಾದಕರು ಪೊಲೀಸ್ ಬಂಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಬಂಡಿಪೋರ್ ನ ಹಜೀನ್ ಪ್ರದೇಶದಲ್ಲಿ ಆಗಸ್ಟ್ ಹದಿಮೂರರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+