Get Updates
Get notified of breaking news, exclusive insights, and must-see stories!

Mumbai-London Air India flight: ಅಹಮದಾಬಾದ್‌ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ

Mumbai-London Air India flight: ಇಂದು (ಜೂನ್‌ 13) ಬೆಳಗ್ಗೆ ಮುಂಬೈ-ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ಮುಂಬೈಗೆ ವಾಪಾಸ್‌ ಆಗಿದೆ ಎಂದು ವರದಿಯಾಗಿದೆ. ಗುರುವಾರ (ಜೂನ್‌ 12) ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತ ದುರಂತದ ನಂತರ ಈ ಬೆಳವಣಿಗೆ ನಡೆದಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ತಿಳಿದುಬರಬೇಕಿದೆ.

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂನ್‌ 12) ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಈ ವೇಳೆ ವಿಮಾನದಲ್ಲಿ ಪ್ರಯಾಣ 242 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರೆಲ್ಲರೂ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿತ್ತು. ಈ ಘಟನೆ ನಡೆದ ಮಾರನೇ ದಿನವೇ ಅಂದರೆ ಇಂದು ಮುಂಬೈನಿಂದ ಲಂಡರ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮತ್ತೆ ಮುಂಬೈ ವಾಪಾಸ್‌ ಆಗಿರುವ ಘಟನೆ ನಡೆದಿದೆ.

Mumbai-London Air India flight Another Development After Ahmedabad Plane Crash

AI-171 ಏರ್ ಇಂಡಿಯಾ ವಿಮಾನ ಪತನಕ್ಕೆ ಟಾಟಾ ಗ್ರೂಪ್ ಸಂತಾಪವನ್ನು ವ್ಯಕ್ತಪಡಿಸಿದೆ. ಈ ದುರಂತದಲ್ಲಿ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಸಾವನ್ನಪ್ಪಿಸಿದ್ದಾರೆ ಎಂದು ಮೂಕಗಳಿಂದ ತಿಳಿದುಬಂದಿದೆ. ಮಾಹಿತಿಯ ಪ್ರಕಾರ ಗುರುವಾರ ಮಧ್ಯಾಹ್ನ ಸುಮಾರು 1:50ಕ್ಕೆ ಈ ದುರಂತ ನಡೆದಿದೆ. ಇನ್ನೂ ಈ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದು, ಅವರೂ ಸಾವನ್ನಪ್ಪಿದ್ದಾರೆ ಅಂತಲೂ ತಿಳಿದುಬಂದಿತ್ತು.

ಘಟನೆ ನಡೆಯುತ್ತಿದ್ದಂತೆ ಗುಜರಾತ್ ಸಿಎಂ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದ್ದರು. ವಿಮಾನ ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿಕೊಂಡಿತ್ತು.

48 ಪ್ರಯಾಣಿಕರು ಸಾವು: ಮುಂಬೈ-ಲಂಡನ್‌ ಕೈರೋ ಮತ್ತು ಜಿನಿವಾ ಮೂಲಕ ಮುಂಬೈನಿಂದ ಲಂಡನ್‌ಗೆ ಹೊರಟಿದ್ದ ಎಲ್ಎಲ್ 749AC ವಿಮಾನ ಮಾಂಟ್ ಬ್ಲ್ಯಾಂಕ್ ಎನ್ನುವಲ್ಲಿ ಪತನಗೊಂಡಿತ್ತು. ನವೆಂಬರ್ 3, 1950ಕ್ಕೆ ಈ ದುರ್ಘಟನೆ ನಡೆದಿತ್ತು. ಈ ವೇಳೆ ವಿಮಾನದಲ್ಲಿದ್ದ ಎಲ್ಲಾ 48 ಪ್ರಯಾಣಿಕರು ಸಾವನ್ನಪ್ಪಿದ್ದರು.

ಮಲಬಾರ್ ಪ್ರಿನ್ಸಸ್ ಎನ್ನುವ ವಿಮಾನ ಇದಾಗಿತ್ತು. ಪ್ರತಿಕೂಲ ಹವಾಮಾನದ ಹಿನ್ನಲೆ ವಿಮಾನ ಪತನಗೊಂಡಿತ್ತು. ಬಾಂಬೆಯ ಸಹರಾ ವಿಮಾನ ನಿಲ್ದಾಣದಿಂದ ಲಂಡನ್ ಹೀತ್ರೋ ವಿಮಾನ ನಿಲ್ದಾಣಕ್ಕೆ ವಿಮಾನ ಪ್ರಯಾಣಿಸುದ್ದಾಗ ಈ ಘಟನೆ ನಡೆದಿತ್ತು.

117 ಪ್ರಯಾಣಿಕರು ಸಾವು: 24 ಜನವರಿ 1966 ಬೆಳಗ್ಗೆ 8 ಗಂಟೆಗೆ, ಬಾಂಬೆಯಿಂದ ಲಂಡನ್ ಹೀತ್ರೋ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ಜಿನಿವಾ ಮೂಲಕ ಬೋಯಿಂಗ್ 707-437, ಫ್ರಾನ್ಸ್ ದೇಶದಲ್ಲಿ ಪತನಗೊಂಡಿತ್ತು. ಇದರಲ್ಲಿ 117 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ವಿಮಾನ ದುರಂತದಲ್ಲಿ ಅಟೋಮಿಕ್ ಎನರ್ಜಿ ಕಮಿಷನ್ ಆಫ್ ಇಂಡಿಯಾದ ಸಂಸ್ಥಾಪಕ ಡಾ. ಹೊಮಿ ಜಹಾಂಗೀರ್ ಬಾಬಾ ಕೂಡಾ ಸಾವನ್ನಪ್ಪುತ್ತಾರೆ.

213 ಪ್ರಯಾಣಿಕರು ಸಾವು: ಏರ್ ಇಂಡಿಯಾ 855 ವಿಮಾನವು ಬಾಂಬೆಯಿಂದ ದುಬೈಗೆ ಪ್ರಯಾಣಿಸುತ್ತಿತ್ತು. 1978ರ ಹೊಸ ವರ್ಷದ ದಿನದಂದೇ ನಡೆದಿದ್ದ ಈ ದುರಂತದಲ್ಲಿ 213 ಪ್ರಯಾಣಿಕರು ಸಾವನ್ನಪ್ಪಿದ್ದರು. ಟೇಕ್ ಆಫ್ ಆದ ಎರಡೇ ನಿಮಿಷದಲ್ಲಿ ವಿಮಾನವು ಬಾಂದ್ರಾದಲ್ಲಿ ಅರಬ್ಬೀ ಸಮುದ್ರಕ್ಕೆ ಪತನಗೊಂಡಿತ್ತು. ಎಂಪರರ್ ಅಶೋಕ ಎನ್ನುವ ಹೆಸರನ್ನು ಈ ವಿಮಾನಕ್ಕೆ ಇಡಲಾಯಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+