6 ಜನರನ್ನು ಕೊಂದ ಮಹಾರಾಷ್ಟ್ರದ ವೈದ್ಯ

ಮುಂಬೈ, ಆಗಸ್ಟ್ 16 : 'ವೈದ್ಯೋ ನಾರಾಯಣೋ ಹರಿ' ಅಂದರೆ ವೈದ್ಯರು ದೇವರಿಗ ಸಮಾನ ಎಂಬ ಮಾತಿದೆ. ಆದರೆ, ಮಹಾರಾಷ್ಟ್ರದ ವೈದ್ಯನೊಬ್ಬ 6 ಜನರನ್ನು ಕೊಂದು, ತೋಟದ ಮನೆಯಲ್ಲಿ ಶವಗಳನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.

ಸತಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 6 ಜನರನ್ನು ಹತ್ಯೆ ಮಾಡಿದ ವೈದ್ಯ ಸಂತೋಷ್ ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಅಪಹರಣದ ಪ್ರಕರಣದಲ್ಲಿ ಡಾ.ಪಾಲ್ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಇನ್ನೂ 5 ಜನರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.[ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ]

Maharashtra doctor killed 6, buried them on his farmhouse

ನಾಲ್ವರು ಮಹಿಳೆಯರು ಸೇರಿದಂತೆ 6 ಜನರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಡಾ.ಪಾಲ್ (41) ಆರೋಪಿ. ಮೃತ ವ್ಯಕ್ತಿಗಳೆಲ್ಲರೂ 2003ರಿಂದ ನಾಪತ್ತೆಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹತ್ಯೆ ಬಗ್ಗೆ ಡಾಕ್ಟರ್ ತಪ್ಪೊಪ್ಪಿಕೊಂಡಿದ್ದಾನೆ. ಪಾಲ್‌ಗೆ ಸೇರಿದ ತೋಟದ ಮನೆಯಲ್ಲಿ ಶವಗಳ ಅವಶೇಷಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.[ವಿಡಿಯೋ: ಅಪ್ಪನನ್ನು ಕೊಲ್ಲಲು ಯತ್ನಿಸಿದ 'ಡಾಕ್ಟರ್' ಮಗಳು]

ಜನರನ್ನು ಹತ್ಯೆ ಮಾಡಿದ ಬಳಿಕ ತೋಟದ ಮನೆಯಲ್ಲಿ ಶವಗಳನ್ನು ಸುಟ್ಟುಹಾಕಿರುವುದಾಗಿ ಪಾಲ್ ಹೇಳಿಕೆ ನೀಡಿದ್ದಾನೆ. ಡಾ.ಪಾಲ್ 6 ಜನರನ್ನು ಹತ್ಯೆ ಮಾಡಿದ್ದೇಕೆ? ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+